ಕರ್ನಾಟಕ

karnataka

ಮುಷ್ಕರ ನಿರತ ಏಳು ಮಂದಿ ಸಾರಿಗೆ ನೌಕರರು ಪೊಲೀಸ್ ವಶ

By

Published : Dec 12, 2020, 12:56 PM IST

Updated : Dec 12, 2020, 1:14 PM IST

ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಏಳು ಮಂದಿಯನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಸಾರಿಗೆ ನೌಕರರ ಮುಷ್ಕರದ ಕಾವು ಮತ್ತಷ್ಟು ತೀವ್ರಗೊಂಡಿದೆ.

Protesters detained by police
ಮುಷ್ಕರ ನಿರತ ಏಳು ಮಂದಿ ಸಾರಿಗೆ ನೌಕರರು ಪೊಲೀಸ್ ವಶಕ್ಕೆ

ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಒತ್ತಾಯಿಸಿ ಸಾರಿಗೆ‌ ನೌಕರರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ‌.

ಮುಷ್ಕರ ನಿರತ ಏಳು ಮಂದಿ ಸಾರಿಗೆ ನೌಕರರು ಪೊಲೀಸ್ ವಶಕ್ಕೆ

ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಒಟ್ಟು ಏಳು ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸರ್ಕಾರ, ಸಾರಿಗೆ ಇಲಾಖೆ ವಿರುದ್ಧ ಮಾತಾಡಿದವರನ್ನೂ ವಶಕ್ಕೆ ಪಡೆಯಲಾಗಿದೆ.

ಪೊಲೀಸರು‌ ಸಾರಿಗೆ ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ಇತ್ತ ಇತರ ಸಾರಿಗೆ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. ಈ‌ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ‌ ನೌಕರರು, 'ನಾವೇನು ಅಪರಾಧ ಮಾಡಿದ್ದೇವಾ?, ಕೆಲಸ‌‌ ಮುಗಿಸಿಕೊಂಡು ಬಸ್ ನಿಲ್ದಾಣದಲ್ಲಿ ಇದ್ದೇವೆ. ಪೊಲೀಸರ ಮೂಲಕ ನಮ್ಮನ್ನು ವಶಪಡಿಸಿಕೊಳ್ಳುವ ಕ್ರಮ‌ ಸರಿಯಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Dec 12, 2020, 1:14 PM IST

For All Latest Updates

ABOUT THE AUTHOR

...view details