ಕರ್ನಾಟಕ

karnataka

ETV Bharat / state

ಅಗತ್ಯ ಸೇವೆಗೆ ಒಳಪಡುವ ಸಾರಿಗೆ ನಿಗಮ.. ಶೇ.50 ರಷ್ಟು‌ ಅಧಿಕಾರಿ-ಸಿಬ್ಬಂದಿ ಕಡ್ಡಾಯ ಹಾಜರಾತಿಗೆ ಆದೇಶ

ಕೆಎಸ್​ಆರ್​ಟಿಸಿ ನಿಗಮವೂ ಅಗತ್ಯ ಸೇವೆಯಡಿ ಬರುವ ಕಾರಣಕ್ಕೆ ಶೇಕಡಾ 50 ರಷ್ಟು ಸಿಬ್ಬಂದಿ ಕಡ್ಡಾಯ ಹಾಜರಾತಿ ಇರುವಂತೆ ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ.

By

Published : May 11, 2021, 11:02 PM IST

ಶೇ.50 ರಷ್ಟು‌ ಅಧಿಕಾರಿ-ಸಿಬ್ಬಂದಿ ಕಡ್ಡಾಯ ಹಾಜರಾತಿಗೆ ಆದೇಶ
ಶೇ.50 ರಷ್ಟು‌ ಅಧಿಕಾರಿ-ಸಿಬ್ಬಂದಿ ಕಡ್ಡಾಯ ಹಾಜರಾತಿಗೆ ಆದೇಶ

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಅಗತ್ಯ ಸೇವೆಗೆ ಬರುವ ಸರ್ಕಾರಿ‌ ಸಿಬ್ಬಂದಿ ಕೆಲಸಕ್ಕೆ ಹಾಜರಾಗುವಂತೆ ಆದೇಶಿಸಲಾಗಿತ್ತು.

ಇದೀಗ ಕೆಎಸ್​ಆರ್​ಟಿಸಿ ನಿಗಮವೂ ಅಗತ್ಯ ಸೇವೆಯಡಿ ಬರುವ ಕಾರಣಕ್ಕೆ ಶೇಕಡಾ 50 ರಷ್ಟು ಸಿಬ್ಬಂದಿ ಕಡ್ಡಾಯ ಹಾಜರಾತಿ ಇರುವಂತೆ ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ.

ಶೇ.50 ರಷ್ಟು‌ ಅಧಿಕಾರಿ-ಸಿಬ್ಬಂದಿ ಕಡ್ಡಾಯ ಹಾಜರಾತಿಗೆ ಆದೇಶ

ಲಾಕ್ ಡೌನ್ ಕಾರಣಕ್ಕೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ವಿನಾಯಿತಿ ಇರುವುದಿಲ್ಲ. ಹೀಗಾಗಿ ಇವರ ಹಾಜರಾತಿ ಕಡ್ಡಾಯ ಮಾಡಲಾಗಿದೆ. ಅಂದಹಾಗೆ, ಡ್ರೈವರ್​ಗಳನ್ನು ಹೊರತು ಪಡಿಸಿ ಬೇರೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಚಾಲಕರಿಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details