ಕರ್ನಾಟಕ

karnataka

By

Published : Nov 25, 2022, 8:23 PM IST

ETV Bharat / state

ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ ವೇಳೆ ಅರ್ಜಿಯಲ್ಲಿ ತಪ್ಪು ಮಾಹಿತಿ ಕೊಡದ ಹಾಗೆ ಕ್ರಮ: ಅಶ್ವತ್ಥ ನಾರಾಯಣ

ಡಿಜಿ ಲಾಕರ್ ಮೂಲಕ ಅಂಕಪಟ್ಟಿ ಪರಿಶೀಲನೆ ಹಾಗೂ ಮಾಸ್ಟರ್ ಟ್ರೈನರ್ ಮತ್ತು ನೋಡಲ್ ಆಫೀಸರ್​ಗಳು ನೀಟ್, ಸಿಇಟಿ ಪರೀಕ್ಷೆಗೆ ತಪ್ಪಿಲ್ಲದಂತೆ ಅರ್ಜಿ ತುಂಬಲು ವಿದ್ಯಾರ್ಥಿಗಳಿಗೆ ಸಹಕಾರ ಆಗುವ ರೀತಿ ಮಾಡಲಾಗುವುದು. ಇದರಿಂದ ತಪ್ಪು ತಿದ್ದಲು ನೀಡುವ ಸಮಯ ಉಳಿಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

training-to-fill-application-for-cet-neet-without-mistakes
ಅಶ್ವತ್ಥನಾರಾಯಣ

ಬೆಂಗಳೂರು: ಕರ್ನಾಟಕ ಪರೀಕ್ಷಾ ಮಂಡಳಿಯಲ್ಲಿ ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ ವೇಳೆ ಅರ್ಜಿಯಲ್ಲಿ ತಪ್ಪು ಮಾಹಿತಿ ಕೊಡದ ಹಾಗೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಹಿತಿ ನೀಡಿದ್ದಾರೆ.

ಸಿಇಟಿ ಅರ್ಜಿ ತುಂಬುವಾಗ ಅನೇಕ ತಾಂತ್ರಿಕ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದು, ಅವರಿಗೆ ಪಿಯುಸಿ ಹಂತದಲ್ಲೇ ಕಲಿಸುವ ಸಂಬಂಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಮತ್ತು ಅವರ‌ ಇಲಾಖೆ‌ಯ ಹಿರಿಯ ಅಧಿಕಾರಿಗಳ ಜೊತೆ ವಿಕಾಸಸೌಧದಲ್ಲಿ ಇಂದು ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಖಲಾತಿಯಲ್ಲಿ ಒಂದು ಹೆಸರು ಇರುತ್ತದೆ, ಅರ್ಜಿ ತುಂಬುವಾಗ ಒಂದು ಹೆಸರು ಕೊಡುತ್ತಾರೆ. ಈ ರೀತಿಯ ತಪ್ಪುಗಳು ಆಗುತ್ತಿವೆ. ಇದನ್ನು ಸರಿ ಮಾಡುವುದಕ್ಕೆ ಒಂದಿಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಹಾಗಾಗಿ ಇದನ್ನು ಸರಿಪಡಿಸುವುದು ಹೇಗೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ ವೇಳೆ ಅರ್ಜಿಯಲ್ಲಿ ತಪ್ಪು ಮಾಹಿತಿ ಕೊಡದ ಹಾಗೆ ಕ್ರಮ

ಡಿಜಿ ಲಾಕರ್ ಮೂಲಕ ಅಂಕಪಟ್ಟಿ ಪರಿಶೀಲನೆ ಆಗುತ್ತಿದೆ. ಸುಲಭವಾಗಿ ಪ್ರಕ್ರಿಯೆ ಆಗಬೇಕು ಎಂಬ ನಿಟ್ಟಿನಲ್ಲಿ ಚರ್ಚೆ ಮಾಡಲಾಗಿದೆ. ಮಾಸ್ಟರ್ ಟ್ರೈನರ್​​​​ಗಳು ಜಿಲ್ಲಾ ಮಟ್ಟದಲ್ಲಿ ಹಾಗೂ ನೋಡಲ್ ಆಫೀಸರ್​​​ಗಳು ಕಾಲೇಜುಗಳಲ್ಲಿ ಇರಲಿದ್ದಾರೆ. ಇವರು ಪರಸ್ಪರ ಸಹಕಾರ ಮಾಡಲಿದ್ದಾರೆ. ಬರುವ ಶೈಕ್ಷಣಿಕ ವರ್ಷಕ್ಕೆ ಇದು ಅನುಕೂಲ ಆಗಲಿದೆ ಎಂದು ಹೇಳಿದರು.

ಶಾಲೆಗಳಲ್ಲಿ ಕಡ್ಡಾಯ ಯೋಗ, ಒಳ್ಳೆ ಬೆಳವಣಿಗೆ : ಶಾಲೆಗಳಲ್ಲಿ ಕಡ್ಡಾಯ ಯೋಗ ಮಾಡುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಇದನ್ನು ಸ್ವಾಗತಿಸುತ್ತೇವೆ ಎಂದರು. ಶಾಲೆಯಲ್ಲಿ ಮಕ್ಕಳು ಕಡ್ಡಾಯವಾಗಿ ಯೋಗ ಮಾಡಬೇಕು ಎಂಬ ಕಾರಣಕ್ಕಾಗಿಯೇ ಇದನ್ನು ಜಾರಿಗೊಳಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ:ದಾವೋಸ್ ಆರ್ಥಿಕ ಶೃಂಗದ ಮಾದರಿಯಲ್ಲಿ ಬೆಂಗಳೂರು ಟೆಕ್ ಸಮ್ಮಿಟ್: ಸರ್ಕಾರದ ಹೊಸ ಪ್ಲಾನ್​​

ABOUT THE AUTHOR

...view details