ಕರ್ನಾಟಕ

karnataka

ಟ್ರ್ಯಾಕ್ಟರ್ ಪರೇಡ್​ಗೆ ಪೊಲೀಸರ ನಾಕಾಬಂಧಿ.. ಮುಂದುವರಿದ ರೈತರ ಹೋರಾಟ

By

Published : Jan 26, 2021, 12:32 PM IST

ನಿನ್ನೆ ರಾತ್ರಿಯೇ ರೈತರನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ಟ್ರ್ಯಾಕ್ಟರ್ ಪರೇಡ್ ನಡೆಸಿದರೆ ಲೈಸೆನ್ಸ್ ವಾಪಸ್ ಪಡೆಯಲಾಗುತ್ತದೆ ಎಂದು ಬೆದರಿಕೆ ಹಾಕಿರುವುದಾಗಿ ರೈತರೊಬ್ಬರು ಆರೋಪಿಸಿದ್ದಾರೆ.

anekal
ಟ್ರ್ಯಾಕ್ಟರ್ ಪರೇಡ್​ಗೆ ಪೊಲೀಸರ ನಾಕಾಬಂಧಿ.. ಮುಂದುವರಿದ ಹೋರಾಟ

ಆನೇಕಲ್ (ಬೆಂಗಳೂರು) :ರೈತರ ಹೋರಾಟ ಬೆಂಬಲಿಸಿ ನಡೆಯುತ್ತಿರುವ ಟ್ರ್ಯಾಕ್ಟರ್ ಪರೇಡ್​ಗೆ ತಾಲೂಕಿನಿಂದಲೂ ಟ್ರ್ಯಾಕ್ಟರ್​ಗಳು ಹೊರಟಿದ್ದವು. ಈ ವೇಳೆ ಪೊಲೀಸರು, ಟ್ರ್ಯಾಕ್ಟರ್​ಗಳನ್ನು ತಡೆದು ವಾಪಸ್​ ಕಳಿಸುವ ಪ್ರಯತ್ನ ಮಾಡಿದರು. ಆದರೂ, ರೈತರು ಆನೇಕಲ್​ನಿಂದ ನೆಲಮಂಗಲದತ್ತ ಜಾಥಾ ಮುಂದುವರಿಸಿದರು.

ಟ್ರ್ಯಾಕ್ಟರ್ ಪರೇಡ್​ಗೆ ಪೊಲೀಸರ ನಾಕಾಬಂಧಿ.. ಮುಂದುವರಿದ ಹೋರಾಟ

ಇದನ್ನೂ ಓದಿ:ಟ್ರ್ಯಾಕ್ಟರ್ ಪರೇಡ್​ಗೆ ಬಿಡದ ಪೊಲೀಸರೊಂದಿಗೆ ಮಂಡ್ಯ ರೈತರ ವಾಗ್ವಾದ

ನಿನ್ನೆ ರಾತ್ರಿಯೇ ರೈತರನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ಟ್ರ್ಯಾಕ್ಟರ್ ಪರೇಡ್ ನಡೆಸಿದರೆ ಲೈಸೆನ್ಸ್ ವಾಪಸ್ ಪಡೆಯಲಾಗುತ್ತದೆ ಎಂದು ಬೆದರಿಕೆ ಹಾಕಿರುವುದಾಗಿ ರೈತರೊಬ್ಬರು ಆರೋಪಿಸಿದ್ದಾರೆ.
ಏನೇ ಆದರೂ, ನಾವು ಹೋರಾಟ ಕೈ ಬಿಡಲ್ಲ. ನಮಗೆ ಬೇಡವಾದ ಕಾಯ್ದೆಗಳು ಈ ಸರ್ಕಾರಕ್ಕೆ ಯಾಕೆ? ಈಗಾಗಲೇ ನಡೆಯುತ್ತಿರುವ ಅನ್ನದಾತರ ಹೋರಾಟ ಸರ್ಕಾರದ ಕಣ್ಣಿಗೆ ಕಾಣ್ತಿಲ್ವ ಎಂದು ಪ್ರಶ್ನಿಸಿದರು.

ABOUT THE AUTHOR

...view details