ಕರ್ನಾಟಕ

karnataka

ETV Bharat / state

ಮೂವರು ಡಿಸಿಎಂ ಅಲ್ಲ, ಇನ್ನೂ ಐವರು ಡಿಸಿಎಂ ಅಗತ್ಯ ಇದೆ: ಬಸವರಾಜ ರಾಯರೆಡ್ಡಿ - ಪ್ರಧಾನಿ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆ ಪರ ಬ್ಯಾಟಿಂಗ್

ರಾಜ್ಯಕ್ಕೆ ಇನ್ನೂ ಐವರು ಡಿಸಿಎಂಗಳ ಅಗತ್ಯ ಇದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಒಟ್ಟು ಆರು ಡಿಸಿಎಂ ಅವಶ್ಯಕತೆ ಇದೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

total-6-dcms-required-for-state-says-congress-leader-basavaraja-rayareddy
ಶಾಸಕ ಬಸವರಾಜ ರಾಯರೆಡ್ಡಿ

By ETV Bharat Karnataka Team

Published : Sep 23, 2023, 4:25 PM IST

ಶಾಸಕ ಬಸವರಾಜ ರಾಯರೆಡ್ಡಿ

ಬೆಂಗಳೂರು: ರಾಜ್ಯ ಕಾಂಗ್ರೆಸ್​ನಲ್ಲಿ ಡಿಸಿಎಂಗಳ ಹುದ್ದೆ ಸೃಷ್ಟಿ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಸಚಿವ ಕೆ.ಎನ್​ ರಾಜಣ್ಣರ ಮೂವರು ಡಿಸಿಎಂ ಬೇಡಿಕೆಗೆ ದನಿಗೂಡಿಸಿರುವ ಶಾಸಕ ಬಸವರಾಜ ರಾಯರೆಡ್ಡಿ, ರಾಜ್ಯಕ್ಕೆ ಇನ್ನೂ ಐವರು ಡಿಸಿಎಂಗಳ ಅಗತ್ಯತೆ ಇದೆ ಎಂದು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ದೃಷ್ಟಿಯಿಂದ ಡಿಕೆಶಿ ಸೇರಿ ಆರು ಡಿಸಿಎಂಗಳ ಅವಶ್ಯಕತೆ ಇದೆ. ಸಚಿವ ಕೆ.ಎನ್.ರಾಜಣ್ಣ ಹೇಳಿರುವುದು ಸರಿಯಾಗಿದೆ. ರಾಜ್ಯಕ್ಕೆ ಇನ್ನೂ ಐವರು ಡಿಸಿಎಂಗಳ ಅವಶ್ಯಕತೆ ಇದೆ. ಡಿಕೆಶಿ ಸೇರಿ ಆರು ಡಿಸಿಎಂಗಳನ್ನು ಮಾಡಬೇಕು ಎಂದು ಒತ್ತಾಯಿಸಿದರು.

ಲೋಕಸಭೆ ಚುನಾವಣೆ ದೃಷ್ಟಿಯಿಂದ ಇನ್ನೂ ಐವರು ಡಿಸಿಎಂಗಳ ಹುದ್ದೆ ಸೃಷ್ಟಿ ಮಾಡಬೇಕು. ಡಿ.ಕೆ.ಶಿವಕುಮಾರ್ ಕೂಡ ಹಿರಿಯ ನಾಯಕರೇ. ಆದರೆ ಚುನಾವಣೆ ದೃಷ್ಟಿಯಿಂದ ಇದು ಅನಿವಾರ್ಯ. ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ವರಿಷ್ಠರು ಗಮನಹರಿಸಬೇಕು. ಪ್ರಾದೇಶಿಕವಾರು, ಸಮುದಾಯವಾರು, ಜಾತಿವಾರು ಡಿಸಿಎಂ ಹುದ್ದೆ ಸೃಷ್ಟಿಸಬೇಕು.‌ ಅಲ್ಪಸಂಖ್ಯಾತರ ಸಮುದಾಯದಿಂದ, ಮಹಿಳಾ ಡಿಸಿಎಂ, ಲಿಂಗಾಯತ ಸಮುದಾಯ, ಎಸ್ ಸಿ, ಎಸ್ ಟಿ ಸಮುದಾಯವಾರು ಡಿಸಿಎಂ ಹುದ್ದೆ ಸೃಷ್ಟಿಸಬೇಕು. ಇದು ಉತ್ತಮ ಆಡಳಿತ ಕೊಡಲು ನೆರವಾಗುತ್ತದೆ. ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಲಾಭವಾಗಲಿದೆ. ಈ ತೀರ್ಮಾನ ಹೈಕಮಾಂಡ್​​ಗೆ ಬಿಟ್ಟಿದ್ದು ಮತ್ತು ಸಿಎಂ ಸಿದ್ದರಾಮಯ್ಯಗೆ ಬಿಟ್ಟ ವಿಚಾರವಾಗಿದೆ ಎಂದು ತಿಳಿಸಿದರು.

ಈ ವಿಚಾರವಾಗಿ ಕೆ.ಎನ್. ರಾಜಣ್ಣ ವಿರುದ್ಧ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಬಳಿ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದರು‌. ಇದರ ಬೆನ್ನಲ್ಲೇ ಇದೀಗ ಹಿರಿಯ ಕಾಂಗ್ರೆಸ್​​ ಮುಖಂಡ ರಾಯರೆಡ್ಡಿ ದನಿಗೂಡಿಸಿದ್ದಾರೆ. ಹೆಚ್ಚಿನ‌ ಡಿಸಿಎಂ ಹುದ್ದೆ ಸೃಷ್ಟಿಗೆ ಈಗಾಗಲೇ ಸಚಿವರಾದ ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ದರ್ಶನಾಪುರ ಸೇರಿ ಕೆಲವರು ಬೆಂಬಲ ಸೂಚಿಸಿದ್ದಾರೆ.

ಪ್ರಧಾನಿ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆ ಪರ ಬ್ಯಾಟಿಂಗ್: ಇದೇ ವೇಳೆ ಬಸವರಾಜ ರಾಯರೆಡ್ಡಿ ಪ್ರಧಾನಿ ಹುದ್ದೆಗೆ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆಯನ್ನು ಪರಿಗಣಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ದಲಿತ ಸಮುದಾಯದವರನ್ನು ದೇಶದ ಪ್ರಧಾನಿ ಅಭ್ಯರ್ಥಿ ಮಾಡಿದರೆ ಪಕ್ಷಕ್ಕೆ ಒಳ್ಳೆಯದಾಗಲಿದೆ. ಇದು ನನ್ನ ಸಲಹೆ. ಈ ಬಗ್ಗೆ ಹೈಕಮಾಂಡ್​ ತೀರ್ಮಾನ ಕೈಗೊಳ್ಳಲಿದೆ ಎಂದರು.

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಮಾಡುತ್ತಾರೋ ಅಥವಾ ಇತರರನ್ನು ಪ್ರಧಾನಿ ಅಭ್ಯರ್ಥಿ ಮಾಡುತ್ತಾರೋ ಎಂಬ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆದರೆ, ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದರೆ ಇತಿಹಾಸ ಸೃಷ್ಟಿಸಿದಂತೆ ಆಗುತ್ತದೆ ಎಂದು ಹೇಳಿದರು.

ಬಿಜೆಪಿ ಜೆಡಿಎಸ್​ ಮೈತ್ರಿ :ಬಿಜೆಪಿ-ಜೆಡಿಎಸ್ ಮೈತ್ರಿ ಅವರ ಆಂತರಿಕ ವಿಚಾರವಾಗಿದೆ. ಜೆಡಿಎಸ್ ಅವರು ಒಮ್ಮೆ ಕಾಂಗ್ರೆಸ್ ಜೊತೆ ಹೋಗುತ್ತೇವೆ ಅಂತಾರೆ, ಇನ್ನೊಮ್ಮೆ ಬಿಜೆಪಿ ಜೊತೆ ಹೋಗುವುದಾಗಿ ಹೇಳುತ್ತಾರೆ. ಇದೊಂದು ಅವಕಾಶವಾದಿ, ಅಧಿಕಾರದ ರಾಜಕೀಯವಾಗಿದೆ. ಅದು ಅವರ ವೈಯ್ಯಕ್ತಿಕ ಅಜೆಂಡಾವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಮೂವರು ಡಿಸಿಎಂ ನೇಮಕಕ್ಕೆ ಹೈಕಮಾಂಡ್​ಗೆ ಪತ್ರ ಬರೆಯುತ್ತೇನೆ : ಸಚಿವ ಕೆ ಎನ್​ ರಾಜಣ್ಣ

ABOUT THE AUTHOR

...view details