ಕರ್ನಾಟಕ

karnataka

ಸಿಇಟಿಯಲ್ಲಿ ಐದನೇ ಶ್ರೇಯಾಂಕ ಪಡೆದ ಬೆಂಗಳೂರಿನ ವಿದ್ಯಾರ್ಥಿನಿ

By

Published : May 25, 2019, 5:52 PM IST

ಇಂದು ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ನಾರಾಯಣ ಪಿಯು ಕಾಲೇಜಿನ ವಿದ್ಯಾರ್ಥಿನಿ ಐದನೇ ಶ್ರೇಯಾಂಕ ಪಡೆದಿದ್ದಾಳೆ.

ಪಿಯು ಕಾಲೇಜಿನ ವಿದ್ಯಾರ್ಥಿನಿ

ಬೆಂಗಳೂರು:ಇಂದು ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ನಾರಾಯಣ ಪಿಯು ಕಾಲೇಜಿನ ವಿದ್ಯಾರ್ಥಿನಿ ಐದನೇ ಶ್ರೇಯಾಂಕ ಪಡೆದಿದ್ದಾರೆ.

ಸಿಇಟಿಯಲ್ಲಿ ಐದನೇ ಶ್ರೇಣೆ ಪಡೆದ ಪಿಯು ಕಾಲೇಜಿನ ವಿದ್ಯಾರ್ಥಿನಿ

ಇಂದು ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಬೆಂಗಳೂರಿನ ವಿದ್ಯಾರ್ಥಿಗಳೇ ಅತೀ ಹೆಚ್ಚು ಸ್ಥಾನ ಗಿಟ್ಟಿಸಿಸಿಕೊಂಡಿದ್ದಾರೆ. ನಗರದ ನಾರಾಯಣ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಲಿಖಿತಾ ಎಂಬ ವಿದ್ಯಾರ್ಥಿನಿ ಸಿಇಟಿ( ಪಶು ವೈದ್ಯಕೀಯ ವಿಭಾಗ)ಯಲ್ಲಿ 5 ನೇ ಶ್ರೇಯಾಂಕ ಪಡೆದಿದ್ದಾಳೆ. ಈ ಹಿನ್ನೆಯಲ್ಲಿ ಇಂದು ಕಾಲೇಜಿನಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಲಿಖಿತಾರ ಸಹಪಾಠಿಗಳು ಶುಭಾಶಯ ಕೋರಿದರು.

ಈ ವೇಳೆ ಲಿಖಿತಾ ಮಾತಾನಾಡಿ, ನಾನು ಹಾಸ್ಟೆಲ್​ನಲ್ಲಿ ಇದ್ದುಕೊಂಡು ಓದಿದೆ. ಒಳ್ಳೆಯ ಶ್ರೇಯಾಂಕದ ನಿರೀಕ್ಷೆ ಇತ್ತು. ಆದರೆ 5ನೇ ಶ್ರೇಯಾಂಕದಲ್ಲಿ ಉತ್ತೀರ್ಣನಾಗುತ್ತೀನಿ ಎಂದು ಎಕ್ಸ್​ಪೆಕ್ಟ್ ಮಾಡಿರಲಿಲ್ಲ. ನನ್ನ ಶಿಕ್ಷಕರು ಮತ್ತು ಪೋಷಕರಿಗೆ ನಾನು ಸದಾ ಚಿರರುಣಿಯಾಗಿರುತ್ತೇನೆ. ಅವರ ಬೆಂಬಲದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತು. ಪೋಷಕರು ಎಂದೂ ಹೆಚ್ಚಿನ ಅಂಕ ಪಡೆಯುವಂತೆ ಕಿರಿಕಿರಿ ಮಾಡುತ್ತಿರಲಿಲ್ಲ. ಬದಲಾಗಿ ಕೈಲಾದಷ್ಟು ಪ್ರಯತ್ನಿಸು ಎಂದು ಪ್ರೋತ್ಸಾಹಿಸುತ್ತಿದ್ದರು. ಭವಿಷ್ಯದಲ್ಲಿ ಎಂಬಿಬಿಎಸ್ ನಂತರ ಇಮ್ಯೂನಾಲಜಿಯಲ್ಲಿ ಸಂಶೋಧನೆ ಮಾಡುವ ಆಸೆ ಇದೆ ಎಂದು ತಮ್ಮ ಸಂತೋಷ ಹಂಚಿಕೊಂಡರು.

For All Latest Updates

TAGGED:

ABOUT THE AUTHOR

...view details