ಕರ್ನಾಟಕ

karnataka

ETV Bharat / state

ಮೂರು ದಿನಗಳ ವಿಶ್ವ ಕಾಫಿ ಸಮಾವೇಶಕ್ಕೆ ತೆರೆ - Scientific processing of coffee

ಭಾರತೀಯ ರೊಬಾಸ್ಟಾ ಕಾಫಿ ಅತಿ ವೇಗವಾಗಿ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ ಎಂದು ಭಾರತೀಯ ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಜಿ ಜಗದೀಶ್​ ತಿಳಿಸಿದ್ದಾರೆ.

ವಿಶ್ವ ಕಾಫಿ ಸಮಾವೇಶ
ವಿಶ್ವ ಕಾಫಿ ಸಮಾವೇಶ

By ETV Bharat Karnataka Team

Published : Sep 28, 2023, 6:47 PM IST

Updated : Sep 28, 2023, 10:05 PM IST

ಭಾರತೀಯ ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಜಿ ಜಗದೀಶ್​

ಬೆಂಗಳೂರಿನ : ಕಳೆದ ಮೂರು ದಿನಗಳಿಂದ ನಗರದ ಅರಮನೆ ಮೈದಾನದಲ್ಲಿ ನಡೆದ "ವಿಶ್ವ ಕಾಫಿ ಸಮಾವೇಶ" ಗುರುವಾರ ತೆರೆ ಕಂಡಿತು. ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿಗೆ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತದೆ ಎಂದು ಭಾರತೀಯ ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಜಿ ಜಗದೀಶ್​ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ವಿಶ್ವ ಕಾಫಿ ಸಮಾವೇಶ

ಸಮಾರೋಪ ಸಮಾರಂಭಕ್ಕೂ ಮುನ್ನ ಮಾತನಾಡಿದ ಅವರು, ವಿಶ್ವ ಕಾಫಿ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿ ದಾಪುಗಾಲು ಹಾಕುತ್ತಿದೆ. ಶೇ. 10 ರಿಂದ 20 ರಷ್ಟು ಮೌಲ್ಯವರ್ಧಿತ ದರದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಕೊಲಂಬಿಯನ್ ಹೊರತುಪಡಿಸಿ ಭಾರತೀಯ ರೊಬಾಸ್ಟಾ ಕಾಫಿ ಅತಿ ವೇಗವಾಗಿ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ ಎಂದರು.

ವಿಶ್ವ ಕಾಫಿ ಸಮಾವೇಶ

2 ಲಕ್ಷ ಹೆಕ್ಟೆರ್‌ನಲ್ಲಿ ಕಾಫಿ ಬೆಳೆ:ಭಾರತದಲ್ಲಿ ಬೆಳೆಯುವ ಕಾಫಿಗೆ ದಕ್ಷಿಣ ಕೊರಿಯಾ, ಜಪಾನ್, ಆಸ್ಟ್ರೇಲಿಯಾ, ಯೂರೋಪ್‌ನಲ್ಲಿ ಹೆಚ್ಚಿನ ಬೇಡಿಕೆಯಿದೆ. ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇನ್ನು ಕಾಫಿ ಬೆಳೆಯಲು ಅವಕಾಶವಿಲ್ಲ. ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಮಿತಿಯ ಗರಿಷ್ಠ ಪ್ರಮಾಣ ಕಾಫಿ ಬೆಳೆಯಲಾಗಿದೆ. ಒಡಿಶಾ, ಆಂಧ್ರಪ್ರದೇಶ ಹಾಗೂ ದೇಶದ ವಾಯವ್ಯ ಭಾಗಗಳಲ್ಲಿ 2 ಲಕ್ಷ ಹೆಕ್ಟೆರ್ ಜಾಗವನ್ನು ಇಸ್ರೋ ಜೊತೆಗೆ ಸೇರಿ ಸ್ಯಾಟ್​​ಲೈಟ್‌ನಿಂದ ಗುರುತಿಸಲಾಗಿದೆ. ಮುಂದಿನ 10 ವರ್ಷಗಳಲ್ಲಿ ಆ ಭಾಗದಲ್ಲಿ ಕಾಫಿ ಬೆಳೆಯಲು ಚಿಂತಿಸಲಾಗಿದೆ. ಆದರೆ, ಈ ಭಾಗಗಳು ಕಾಫಿ ಬೆಳೆಯಲು ಕರ್ನಾಟಕದಷ್ಟು ಸೂಕ್ತ ಜಾಗವಲ್ಲ. ಅಲ್ಲಿರುವ ಸ್ಥಳೀಯ ಬುಡಕಟ್ಟು ಜನಾಂಗದವರಿಗೆ ಕಾಫಿಯಿಂದ ಆರ್ಥಿಕತೆ ವೃದ್ಧಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ವಿಶ್ವ ಕಾಫಿ ಸಮಾವೇಶ

ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿಗೆ ಅತಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತದೆ. ಕೊಲಂಬಿಯನ್ ಹೊರತುಪಡಿಸಿ ಭಾರತೀಯ ರೊಭಾಸ್ಟಾ ಕಾಫಿಗೆ ಹೆಚ್ಚಿನ ಮಾರುಕಟ್ಟೆ ಇದೆ. ಸಮಾವೇಶದ ಜತೆಗೆ ಭಾರತವೂ ಸೇರಿ ವಿವಿಧ ದೇಶಗಳ ಕಾಫಿ ಕಂಪನಿಗಳು, ಯಂತ್ರೋಪಕರಣ ಕಂಪೆನಿಗಳು ತಮ್ಮ ಮಳಿಗೆಗಳನ್ನು ಪ್ರಾರಂಭಿಸಿದ್ದು, ವ್ಯವಹಾರಿಕ ಮಾತುಕತೆಗಳು ಫಲಪ್ರದವಾಗಿ ನಡೆದಿವೆ ಎಂದು ಜಗದೀಶ್ ವಿವರಣೆ ನೀಡಿದರು.

ವಿಶ್ವ ಕಾಫಿ ಸಮಾವೇಶ

ಸಮಾವೇಶದಲ್ಲಿ ಒಟ್ಟು 45 ಗೋಷ್ಠಿಗಳಲ್ಲಿ 127 ತಜ್ಞರು ವಿಷಯ ಪ್ರಸ್ತಾಪಿಸಿದರು. ಅವರಲ್ಲಿ 80 ಮಂದಿ ಅಂತಾರಾಷ್ಟ್ರೀಯ ತಜ್ಞರು ವಿಷಯ ಮಂಡಿಸಿದ್ದು ವಿಶೇಷವಾಗಿತ್ತು. ರಾಜ್ಯದ ಮೂರು ವಿಶ್ವವಿದ್ಯಾಲಯಗಳು ಸಮಾವೇಶದಲ್ಲಿ ವಿಷಯ ತಜ್ಞರಾಗಿ ಭಾಗೀದಾರರಾಗಿದ್ದು, ಒಟ್ಟು ಸಮಾವೇಶದ ಕುರಿತು ವಿವರವಾದ ವಿಷಯ ಮಂಡನೆಯೊಂದಿಗೆ ಮಾಹಿತಿ ನೀಡಿದರು.

ಬೆಳೆಗಾರರಿಗೆ ತರಬೇತಿ :ಸಮಾವೇಶದಲ್ಲಿ ಸಾವಿರಾರು ಕಾಫಿ ಬೆಳೆಗಾರರ ವಿಶೇಷ ತರಬೇತಿಗೆ ವೇದಿಕೆಯಾಯಿತು. ಈ ವೇಳೆ ಸುಸ್ಥಿರ ಕಾಫಿ ಬೆಳೆ ಸೇರಿದಂತೆ ವಿಶ್ವದೆಲ್ಲೆಡೆ ಭಾರತೀಯ ಕಾಫಿ ಕಂಪು ಪಸರಿಸುತ್ತಿದ್ದು, ಈ ಸಮಾವೇಶವು ಭಾರತೀಯ ಕಾಫಿಗೆ ಇನ್ನಷ್ಟು ವಿಶ್ವಮಾನ್ಯತೆ ದೊರಕಿಸುವಲ್ಲಿ ಸಹಕಾರಿಯಾಯಿತು.

ವಿಶ್ವ ಕಾಫಿ ಸಮಾವೇಶ

ದೇಶದಲ್ಲಿ ಇದೇ ಮೊದಲ ಬಾರಿ ನಡೆದ ಈ ಸಮಾವೇಶ ಕಾಫಿ ಬೆಳೆಗಾರರಿಗೆ ಕೌಶಲ್ಯ ಸಂಯೋಜಿತ ತರಬೇತಿ ನೀಡಲಾಯಿತು. ಅಲ್ಲದೆ, ಕಾಫಿ ವೈಜ್ಞಾನಿಕ ಸಂಸ್ಕರಣೆ ಮತ್ತು ಮಾರುಕಟ್ಟೆ ವಿಸ್ತರಣೆ ಕುರಿತು ತರಬೇತಿ ನೀಡಲಾಯಿತು. ಬೆಳೆಗಾರರಿಗೆ ಸಂಬಂಧಿಸಿದಂತೆ ಹತ್ತು ಹಲವು ವಿಷಯಗಳ ಕುರಿತು ಗಂಭೀರ ಚರ್ಚೆ ನಡೆದು, ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು, ಸುಸ್ಥಿರ ಕಾಫಿ ಬೆಳೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆಗಳು ನಡೆದವು. 31 ವಿವಿಧ ದೇಶಗಳಿಂದ 300ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಿ, ಮೂರು ದಿನಗಳಲ್ಲಿ ಕಾಫಿ ಬೆಳೆಗಾರರು ಸೇರಿದಂತೆ ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.

ಇದನ್ನೂ ಓದಿ:ಬೆಂಗಳೂರು: ಅರಮನೆ ಮೈದಾನದಲ್ಲಿ ನಾಳೆಯಿಂದ 4 ದಿನ ವಿಶ್ವ ಕಾಫಿ ಸಮ್ಮೇಳನ

Last Updated : Sep 28, 2023, 10:05 PM IST

ABOUT THE AUTHOR

...view details