ಕರ್ನಾಟಕ

karnataka

ETV Bharat / state

ಬೆಂಗಳೂರು: ಕಾರಿಗೆ ಕೆಂಪು ಬಣ್ಣ ಬಳಿದು 3 ಲಕ್ಷ ನಗದು, 2 ಲಕ್ಷ ಮೌಲ್ಯದ ಮಾಂಗಲ್ಯ ಸರ ಕದ್ದೊಯ್ದ ಕಳ್ಳರು..! - ಬೆಂಗಳೂರಿನಲ್ಲಿ ಕಾರಿಗೆ ಕೆಂಪು ಬಣ್ಣ ಬಳಿದು ಹಣ ಕಳವು

ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಗ್ರಾಮದ ಡ್ರೈವರ್ ಒಮೇಶ್ ಎಂಬುವವರು ಕಳ್ಳರ ಕೈಚಳಕದಿಂದ ಹಣ ಮತ್ತು ಒಡವೆ ಕಳೆದುಕೊಂಡಿದ್ದಾರೆ. ಮನೆ ಲೀಜ್ ಹಾಕಿಸಿಕೊಳ್ಳುವ ವಿಚಾರಕ್ಕೆ 3 ಲಕ್ಷ ನಗದು ಮತ್ತು 2 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನ ಬ್ಯಾಗ್​​ನಲ್ಲಿ ಇಟ್ಟು, ಕಾರನ್ನು ರಸ್ತೆಯಲ್ಲಿ ಪಾರ್ಕ್ ಮಾಡಿ ಟೀ ಕುಡಿಯಲು ಅಂಗಡಿಗೆ ಹೋಗಿದ್ದರು ಎಂಬುದು ತಿಳಿದುಬಂದಿದೆ.

thieves-steal-3-lakhs-money-and-mangalya-chain-in-nelamangala
ಕಾರಿಗೆ ಕೆಂಪು ಬಣ್ಣ ಬಳಿದು ನಗದು ಕಳವು

By

Published : Jan 26, 2022, 3:54 PM IST

ನೆಲಮಂಗಲ(ಬೆಂಗಳೂರು):ಕಾರಿಗೆ ಕೆಂಪು ಬಣ್ಣ ಬಳಿದು 3 ಲಕ್ಷ ನಗದು, 2 ಲಕ್ಷ ಮೌಲ್ಯದ ಮಾಂಗಲ್ಯ ಸರ ಕದ್ದೊಯ್ದಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಗ್ರಾಮದ ಡ್ರೈವರ್ ಒಮೇಶ್ ಎಂಬುವವರು ಕಳ್ಳರ ಕೈಚಳಕದಿಂದ ಹಣ ಮತ್ತು ಒಡವೆ ಕಳೆದುಕೊಂಡಿದ್ದಾರೆ.

ಮನೆ ಲೀಜ್ ಹಾಕಿಸಿಕೊಳ್ಳುವ ವಿಚಾರಕ್ಕೆ 3 ಲಕ್ಷ ನಗದು ಮತ್ತು 2 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನ ಬ್ಯಾಗ್​​ನಲ್ಲಿ ಇಟ್ಟು, ಕಾರನ್ನು ರಸ್ತೆಯಲ್ಲಿ ಪಾರ್ಕ್ ಮಾಡಿ ಟೀ ಕುಡಿಯಲು ಅಂಗಡಿಗೆ ಹೋಗಿದ್ದರು. ಆಗ ಚಾಲಾಕಿಗಳು ಕಾರಿಗೆ ಕೆಂಪು ಬಣ್ಣ ಬಳಿದಿದ್ದಾರೆ. ಅಲ್ಲದೇ, ಯಾರೋ ರಕ್ತದ ಬಣ್ಣ ಬಳಿದಿದ್ದಾರೆ ಎಂದು ಹೇಳಿ ಡ್ರೈವರ್​ ಅನ್ನು ಕಾರಿನ ಬಳಿ ಬರುವಂತೆ ಮಾಡಿದ್ದಾರೆ. ಇದೇ ಸಮಯದ ಸದುಪಯೋಗ ಪಡಿಸಿಕೊಂಡ ಅವರು ಟೀ ಅಂಗಡಿಯ ಟೇಬಲ್ ಮೇಲೆ ಡ್ರೈವರ್ ಬಿಟ್ಟು ಬಂದಿದ್ದ ಹಣ ಮತ್ತು ಮಾಂಗಲ್ಯ ಸರ ಇದ್ದ ಬ್ಯಾಗ್ಅನ್ನು ಕದ್ದೊಯ್ದಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಒಮೇಶ್ ಸಂಬಂಧಿಯೊಬ್ಬರಿಗೆ ಮನೆ ಲೀಜ್ ಹಾಕಿಸಿಕೊಡಲು 5 ಲಕ್ಷ ಹಣ ಹೊಂದಿಸಿಕೊಡಬೇಕಿತ್ತು. ಜನವರಿ 24 ಜಿಂದಾಲ್ ಕೆನರಾ ಬ್ಯಾಂಕ್ ಅಕೌಂಟ್​ನಿಂದ 3 ಲಕ್ಷ ಹಣವನ್ನ ಡ್ರಾ ಮಾಡಿದ್ದಾರೆ. ಇನ್ನುಳಿದ 2 ಲಕ್ಷ ಹಣವನ್ನು ಹೊಂದಿಸಲು ಮಾಂಗಲ್ಯ ಸರ ಅಡವಿಡಲು ಕಾರಿನಲ್ಲಿ ಬರುವಾಗ ಇದರ ನಡುವೆ ಸ್ನೇಹಿತರ ಅಂಗಡಿಯಲ್ಲಿ ಟೀ ಕುಡಿಯಲು ಹೋಗಿದ್ದರು ಎಂಬುದು ತಿಳಿದುಬಂದಿದೆ. ಖದೀಮರು ಅಂಗಡಿಯಿಂದ ಬ್ಯಾಗ್ ತಗೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಗ್ಗೆ ಬಹಳ ಅಭಿಮಾನವಿದೆ : ಸಚಿವ ಡಾ.ಕೆ. ಸುಧಾಕರ್

For All Latest Updates

TAGGED:

ABOUT THE AUTHOR

...view details