ಕರ್ನಾಟಕ

karnataka

ETV Bharat / state

ಕ್ರಿಕೆಟ್​ಗೆ ಕಳ್ಳರ ಕಾಟ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತೆರಿಗೆ ಇಲಾಖೆ ಆಯುಕ್ತರ ಮೊಬೈಲ್​ಗೆ ಕನ್ನ! - ಕ್ರಿಕೆಟ್​ ಅಭಿಮಾನಿಗಳ ವಸ್ತು ಕಳವು

ಐಪಿಎಲ್​ ಹಬ್ಬದ ವೇಳೆ ಮಜಾ ಮಾಡಲು ಕ್ರಿಕೆಟ್​ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬಂದರೆ, ಇತ್ತ ಕಳ್ಳರು ಅಭಿಮಾನಿಗಳ ವಸ್ತುಗಳನ್ನು ಕಳವು ಮಾಡಿದ ಪ್ರಕರಣಗಳು ದಾಖಲಾಗಿವೆ.

Chinnaswamy stadium
Chinnaswamy stadium

By

Published : Apr 25, 2023, 1:01 PM IST

Updated : Apr 25, 2023, 3:28 PM IST

ಬೆಂಗಳೂರು:ಐಪಿಎಲ್ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಮೈದಾನಕ್ಕೆ ಹೋಗುವವರೇ ಎಚ್ಚರ. ಪಂದ್ಯ ವೀಕ್ಷಿಸುವ ಖುಷಿಯಲ್ಲಿರುವ ನಿಮ್ಮ ವಸ್ತುಗಳು ಮಂಗಮಾಯವಾಗಬಹುದು. ಐಪಿಎಲ್ ಪಂದ್ಯಗಳನ್ನೇ ಗುರಿಯಾಗಿಸಿಕೊಂಡಿರುವ ಕಳ್ಳರು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ತಮ್ಮ‌ ಕೈಚಳಕ ತೋರಿಸುತ್ತಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ನೋಡಲು ಬಂದಿದ್ದ ಅಭಿಮಾನಿ ಸಂದೀಪ್ ಎಂಬುವವರ ಕೆಟಿಎಂ ಡ್ಯೂಕ್ ಬೈಕ್ ಅನ್ನು ಕಳ್ಳರು ಎಗರಿಸಿದ್ದಾರೆ. ಬೌರಿಂಗ್ ಇನ್​ಸ್ಟಿಟ್ಯೂಟ್ ಬಳಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದ್ದು, ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಾದ ಬಳಿಕ ಚೆನ್ನೈ ಹಾಗೂ ಆರ್​ಸಿಬಿ ನಡುವಿನ ಪಂದ್ಯ ವೀಕ್ಷಿಸಲು ಬಂದಿದ್ದ ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಬಿ.ಆರ್. ರಮೇಶ್​​ರ ಮೊಬೈಲ್ ಕಳ್ಳತನವಾಗಿದೆ. ಗೇಟ್ ನಂಬರ್ 6 ರಲ್ಲಿ ಸರತಿ ಸಾಲಿನಲ್ಲಿದ್ದ ರಮೇಶ್​​ರ 80 ಸಾವಿರ ಮೌಲ್ಯದ ಸ್ಯಾಮ್ಸಂಗ್ ಎಸ್- 21 ಮೊಬೈಲ್ ಕಳ್ಳತನ ವಾಗಿದ್ದು, ಅವರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಂದ್ಯಗಳ ಫಲಿತಾಂಶ:ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಆರ್​ಸಿಬಿ ಕಾದಾಡಿತ್ತು. ಬೆಂಗಳೂರು ತಂಡ 8 ವಿಕೆಟ್​ಗಳ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟ್​ ಮಾಡಿದ್ದ 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ 7 ವಿಕೆಟ್​ ಕಳೆದುಕೊಂಡು 171 ರನ್​ ಗಳಿಸಿತ್ತು. ಗುರಿ ಬೆನ್ನಟ್ಟಿದ ಆರ್​ಸಿಬಿಗೆ ಚೇಸ್​ ಮಾಸ್ಟರ್​ ವಿರಾಟ್​ ಕೊಹ್ಲಿ, ನಾಯಕ ಫಾಫ್​ ಡು ಪ್ಲೆಸಿಸ್​ರ ಅದ್ಭುತ ಆಟ ಗೆಲುವು ತಂದುಕೊಟ್ಟಿತು.

ಕೊಹ್ಲಿ 49 ಎಸೆತಗಳಲ್ಲಿ 82 ರನ್​ ಬಾರಿಸಿದರೆ, ನಾಯಕ್​ ಡು ಪ್ಲೆಸಿಸ್​ 43 ಬಾಲ್​ಗಳಲ್ಲಿ 73 ರನ್ ಮಾಡಿ ಮುಂಬೈ ಬೌಲರ್​ಗಳನ್ನು ಚೆಂಡಾಡಿದ್ದರು. ಇದಕ್ಕೂ ಮೊದಲು ಮುಂಬೈನ ತಿಲಕ್​ ವರ್ಮಾ 84 ರನ್​ ಮಾಡಿದ್ದರು. ಚೆನ್ನೈ ವಿರುದ್ಧದ ಐದನೇ ಪಂದ್ಯದಲ್ಲಿ ಆರ್​ಸಿಬಿ 8 ರನ್​ಗಳಿಂದ ಸೋಲು ಕಂಡಿತ್ತು. ಶಿವಂ ದುಬೆ, ಡೆವೋನ್​ ಕಾನ್ವೆ ಬ್ಯಾಟಿಂಗ್​ ಬಲದಿಂದ 6 ವಿಕೆಟ್​ಗೆ 226 ರನ್​ ಗಳಿಸಿತ್ತು. ಚೆನ್ನೈ ನೀಡಿದ ಗುರಿಯನ್ನು ನಾಯಕ ಫಾಫ್​ ಡು ಪ್ಲೆಸಿಸ್​, ಗ್ಲೆನ್​ ಮ್ಯಾಕ್ಸವೆಲ್​ ಹೋರಾಟ ನಡೆಸಿದಾಗ್ಯೂ 218 ರನ್​ಗಳಿಸಿ 8 ರನ್ನಿಂದ ಸೋತಿತ್ತು.

ಬೈಕ್​ ಕಳ್ಳತನ ಕೇಸ್​:ಬೆಂಗಳೂರಿನಲ್ಲಿ ದುಬಾರಿ ಬೈಕ್‌ಗಳ ಕಳ್ಳತನ ಜೋರಾಗಿದೆ. ಹೊರವಲಯದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮಸಂದ್ರದ ವಿದ್ಯಾನಗರದಲ್ಲಿ ಸರಣಿ ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗಿವೆ. ವಿದ್ಯಾನಗರದ 5ನೇ ಕ್ರಾಸ್​​ನ​ ಬಹುಮಹಡಿ ಕಟ್ಟಡದ ಕೆಳಗೆ ನಿಲ್ಲಿಸುತ್ತಿದ್ದ ಬೈಕ್​ಗಳನ್ನು ಕದಿಯಲಾಗಿದೆ. ಇದರ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ರಾಯಲ್‌ ಎನ್‌ಫೀಲ್ಡ್ ಹಾಗೂ ಎಫ್​​​ಜೆಡ್​ ಬೈಕ್‌ಗಳನ್ನು ಕಳ್ಳರು ಕಳವು ಮಾಡಿದ್ದಾರೆ. ಬೆಳಗಿನ ಜಾವ ಎಲ್ಲರೂ ಸುಖ ನಿದ್ರೆಯಲ್ಲಿದ್ದಾಗ ಕನ್ನ ಹಾಕಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಪಾರ್ಕಿಂಗ್​ ಜಾಗದಲ್ಲಿ ನಿಲ್ಲಿಸಿದ್ದ ಬೈಕ್​ಗಳ ಹ್ಯಾಂಡಲ್ ಮುರಿದು, ಕದ್ದೊಯ್ಯುತ್ತಿರುವ ದೃಶ್ಯ ಸೆರೆಸಿಕ್ಕಿದೆ. ಬೈಕ್ ಮಾಲೀಕರು ಹೆಬ್ಬಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಓದಿ:ಕೊಲೆ ಪ್ರಕರಣದಲ್ಲಿ ಕಸ್ಟಡಿಯಿಂದ ತಪ್ಪಿಸಿಕೊಂಡ: 17 ವರ್ಷದ ಬಳಿಕ ಕಳ್ಳತನ ಪ್ರಕರಣದಲ್ಲಿ ಬಂಧನ

Last Updated : Apr 25, 2023, 3:28 PM IST

ABOUT THE AUTHOR

...view details