ಕರ್ನಾಟಕ

karnataka

ETV Bharat / state

ನ್ಯೂ ಇಯರ್ ಮೂಡ್​ನಲ್ಲಿದ್ದ ಕುಟುಂಬಕ್ಕೆ ಶಾಕ್‌: ಪೊಲೀಸರೆಂದು ಯಾಮಾರಿಸಿ ಚಿನ್ನಾಭರಣ, ನಗದು ಲೂಟಿ! - ಹಣ ಮತ್ತು ಬಂಗಾರದೊಂದಿಗೆ ನಕಲಿ ಪೊಲೀಸರು ಪರಾರಿ

ನ್ಯೂ ಇಯರ್ ಸೆಲೆಬ್ರೆಷನ್ ಮೂದ್​ನಲ್ಲಿದ್ದ ಕುಟುಂಬವೊಂದಕ್ಕೆ ಖದೀಮರು ಶಾಕ್‌ ನೀಡಿದ್ದಾರೆ. ಆ ಕುಟುಂಬಕ್ಕೆ ಪೊಲೀಸರೆಂದು ಯಾಮಾರಿಸಿದ ಚಾಲಾಕಿಗಳು ಚಿನ್ನಾಭರಣ ಮತ್ತು ನಗದು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Thieves looted gold and money in Bengaluru, Thieves looted gold and money, fake police escaped with jewelry and cash, Bangalore crime news, ಚಿನ್ನ ಮತ್ತು ನಗದು ಲೂಟಿ ಮಾಡಿದ ಕಳ್ಳರು, ಬೆಂಗಳೂರು ಚಿನ್ನ ಮತ್ತು ನಗದು ಲೂಟಿ ಮಾಡಿದ ಕಳ್ಳರು, ಹಣ ಮತ್ತು ಬಂಗಾರದೊಂದಿಗೆ ನಕಲಿ ಪೊಲೀಸರು ಪರಾರಿ, ಬೆಂಗಳೂರು ಅಪರಾಧ ಸುದ್ದಿ,
ಪೊಲೀಸರೆಂದು ಯಾಮಾರಿಸಿ ಚಿನ್ನಾಭರಣ, ನಗದು ಲೂಟಿ

By

Published : Jan 1, 2022, 8:49 PM IST

ಬೆಂಗಳೂರು:ನಗರದಲ್ಲಿ ನ್ಯೂ ಇಯರ್ ಸೆಲೆಬ್ರೆಷನ್ ಎಂಜಾಯ್​ ಮಾಡುತ್ತಿದ್ದ ಕುಟುಂಬಕ್ಕೆ ಕಳ್ಳರು ಶಾಕ್‌ ನೀಡಿದ್ದಾರೆ. ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ದರೋಡೆ ಮಾಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ರಾಜಧಾನಿಯ ಮಹಾಲಕ್ಷ್ಮಿ ಲೇಔಟ್​ನಲ್ಲಿ ನಿನ್ನೆ (ಶುಕ್ರವಾರ) ಸಂಜೆ ಈ ಘಟನೆ ನಡೆದಿದೆ.

ಡಿ.31ರಂದು ವೆಂಕಟೇಶ್ ಎನ್ನುವವರ ಮನೆಗೆ ಮೂವರು ಖದೀಮರು ಎಂಟ್ರಿ ಕೊಟ್ಟಿದ್ದಾರೆ. ಇಬ್ಬರು ಪೊಲೀಸರೆಂದೂ ಹಾಗೂ ಒಬ್ಬ ಕಳ್ಳನನ್ನು ಎಳೆದು ತಂದಿರುವುದಾಗಿ ವ್ಯಕ್ತಿಗಳು ಹೇಳಿದ್ದಾರೆ. ಕಳ್ಳತನದ ವಸ್ತು ನಿಮಗೆ ಕೊಟ್ಟಿದ್ದಾನೆಂದು ಮನೆಯವರಿಗೆ ಹೆದರಿಸಿ ಚಿನ್ನಾಭರಣ ಹಾಗೂ ನಗದು ತೆಗೆದುಕೊಂಡು ಮೂವರು ಪರಾರಿಯಾಗಿದ್ದಾರೆ ಎಂದು ದೂರು ದಾಖಲಾಗಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಿಪಟೂರು ಪೊಲೀಸರು ಎಂದೂ ಮತ್ತು ವೆಂಕಟೇಶ್ ಮನೆಯಲ್ಲಿ ಹಣ, ಆಭರಣ ವಶಕ್ಕೆ ಪಡೆಯುತ್ತಿದ್ದೇವೆ ಎಂಬುದಾಗಿ ಹೇಳಿಕೊಂಡಿದ್ದಾರೆ. 600 ಗ್ರಾಂ ಚಿನ್ನಾಭರಣವನ್ನು ಮತ್ತು ಲಕ್ಷಾಂತರ ರೂ. ನಗದನ್ನು ದೋಚಿಕೊಂಡು ಹೋಗಿದ್ದಾರೆ ಎಂದು ದೂರು ನೀಡಲಾಗಿದೆ.

ಮೂವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಸಿಬ್ಬಂದಿ, ಪರಿಶೀಲನೆ ನಡೆಸುತ್ತಿದ್ದಾರೆ.

ABOUT THE AUTHOR

...view details