ಕರ್ನಾಟಕ

karnataka

ETV Bharat / state

ಎತ್ತಿನಹೊಳೆ ಯೋಜನೆ ಮುಗಿಯಲ್ಲ, ಜನರಿಗೆ ನೀರಿಲ್ಲ: ಆಂಜನೇಯ ರೆಡ್ಡಿ

ಎತ್ತಿನಹೊಳೆ ಯೋಜನೆ ಮುಗಿಯುವುದಿಲ್ಲ, ಜನರಿಗೆ ಕುಡಿಯುವುದಕ್ಕೆ ನೀರು ಸಿಗುವುದಿಲ್ಲ ಎಂದು ಸರ್ಕಾರದ ವಿರುದ್ಧ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

By

Published : Apr 14, 2019, 7:02 PM IST

ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆಂಜನೇಯ ರೆಡ್ಡಿ

ಬೆಂಗಳೂರು:ಎರಡು ವರ್ಷದಲ್ಲಿ ಈ ಭಾಗದ ಜನರಿಗೆ ಎತ್ತಿನಹೊಳೆ ಯೋಜನೆಯ ಮೂಲಕ ನೀರು ತರಿಸುತ್ತೇನೆ ಎಂದು ಹೇಳಿ ಸಂಸದರಾಗಿ ಆಯ್ಕೆಯಾದ ಎಂ.ವೀರಪ್ಪ ಮೊಯ್ಲಿ ಹತ್ತು ವರ್ಷಗಳಾದರೂ ನೀರು ತಂದಿಲ್ಲ ಎಂದು ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ಹೇಳಿದರು.

ಶಾಶ್ವತ ನೀರಾವರಿ ಹೋರಾಟ ಸಮಿತಿಯ ನೀರಾವರಿ ಪ್ರಣಾಳಿಕೆ ಬಿಡುಗಡೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನೀರಾವರಿ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ಕೋಲಾರ, ದೇವನಹಳ್ಳಿ, ಚಿಕ್ಕಬಳ್ಳಾಪುರ ಸೇರಿದಂತೆ ಈ ಭಾಗದ ಜನರು ನೀರಿಗಾಗಿ ಹಾತೊರೆಯುತ್ತಿದ್ದಾರೆ. ಬಯಲು ಪ್ರದೇಶ ಭಾಗದ ಜನರಿಗೆ ಪ್ರಮುಖವಾಗಿ ನೀರು ಬೇಕಿದ್ದು, ಅದನ್ನು ಒದಗಿಸುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವಿಫಲವಾಗಿವೆ. 2009 ರಲ್ಲಿ ವೀರಪ್ಪಮೊಯ್ಲಿ ಅವರು ಈ ಭಾಗದಲ್ಲಿ ಚುನಾವಣೆಗೆ ಸ್ಪರ್ಧಿಸುವಾಗ ಎರಡು ವರ್ಷದಲ್ಲಿ ನೀರು ತರುತ್ತೇನೆ ಎಂದು ಹೇಳಿದ್ದರು. ಆದರೆ ಇದುವರೆಗೂ ನೀರು ಬಂದಿಲ್ಲ. ‌ಅದು ಬರುವುದೂ ಇಲ್ಲ ಎಂದು ಮೊಯ್ಲಿ ವಿರುದ್ದ ಅಸಮಾಧಾನ ಹೊರಹಾಕಿದರು.

ಎಲ್ಲಾ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ತಯಾರು ಮಾಡಿ ಹೊರಡಿಸುತ್ತವೆ. ಆದ್ರೆ ಪ್ರಣಾಳಿಕೆ ಅಂಶಗಳನ್ನು ಯಾರೂ ಕೂಡಾ ಜಾರಿಗೆ ತರುವುದಿಲ್ಲ. ಅದಕ್ಕಾಗಿ ನಾವೇ ಹೊಸದಾಗಿ ಸಮಸ್ಯೆಗೆ ಪರಿಹಾರ ಹುಡುಕುವಂತಹ ಪ್ರಣಾಳಿಕೆಯನ್ನ ಹೊರಡಿಸಿದ್ದೇವೆ ಎಂದರು.

ಯೋಜನೆಯ ಬಗ್ಗೆ ರಾಜಕಾರಣಿಗಳ ಬೇಜವಾಬ್ದಾರಿತನವನ್ನು ಉಲ್ಲೇಖಿಸುತ್ತಾ ಅವರು, ಎತ್ತಿನ ಹೊಳೆ ಕಾಮಗಾರಿಗೆ ಸಾವಿರಾರು ಕೋಟಿ ವೆಚ್ಚವಾಗಿದೆ, ಅದ್ರೆ ನೀರು ಮಾತ್ರ ಬಂದಿಲ್ಲ ಇದರ ವಿರುದ್ಧ ಸಿಬಿಐ ತನಿಖೆಯಾಗಿಬೇಕಿದೆ ಎಂದು ಆಗ್ರಹಿಸಿದರು.

ಕಳೆದ ಐದು ವರ್ಷಗಳಲ್ಲಿ ಹೊಸಕೋಟೆಯ ಬಿಜೆಪಿ ನಾಯಕ ಬಚ್ಚೆಗೌಡರು ಶಾಶ್ವತ ನೀರಾವರಿ ಬಗ್ಗೆ ಹೋರಾಟ ಮಾಡಬೇಕಿತ್ತು. ಆದರೆ ಅವರು ಆ ಕೆಲಸ ಮಾಡಿಲ್ಲ. ಈಗ ಚುನಾವಣೆಯ ಹಿನ್ನೆಲೆಯಲ್ಲಿ ಜನರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದರು.

ABOUT THE AUTHOR

...view details