ಬೆಂಗಳೂರು: ಎರಡನೇ ಹಂತದ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದ್ದು,ಇಷ್ಟು ದಿನಗಳ ಕಾಲ ಮುಚ್ಚಲಾಗಿದ್ದ ಆರ್.ವಿ ರಸ್ತೆ ಮೆಟ್ರೋ ನಿಲ್ದಾಣದ ನೈಋತ್ಯ ದ್ವಾರ ಈಗ ಪ್ರಯಾಣಿಕರಿಗೆ ತೆರೆದಿದ್ದು, ಇದರ ಬೆನ್ನಲ್ಲೇ ಪಶ್ಚಿಮ ಭಾಗದ ದ್ವಾರ ಮುಚ್ಚಲು ಮೆಟ್ರೋ ಮುಂದಾಗಿದೆ.
ಎರಡನೇ ಹಂತದ ಕಾಮಗಾರಿಯಲ್ಲಿ ಸದ್ಯ ಸಂಚರಿಸುತ್ತಿರುವ ಯಲಚೇನಹಳ್ಳಿಯಿಂದ ನಾಗಸಂದ್ರ ಮಾರ್ಗವಾಗಿ ಸಂಚರಿಸುತ್ತಿರುವ ಹಸಿರು ಮಾರ್ಗದ ಟ್ರ್ಯಾಕಿನ ಪಕ್ಕದಲ್ಲಿ ಬೊಮ್ಮಸಂದ್ರ ಮತ್ತು ನಾಗಸಂದ್ರ ಮಾರ್ಗವಾಗಿ ನೂತನ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, ಅದರ ಸಲುವಾಗಿ ಇಂದಿನಿಂದ ಆರ್.ವಿ ರಸ್ತೆ ಮೆಟ್ರೊ ನಿಲ್ದಾಣದ ಪಶ್ಚಿಮ ದ್ವಾರ ಮುಚ್ಚಲಾಗುತ್ತಿದೆ.