ಕರ್ನಾಟಕ

karnataka

By

Published : Aug 22, 2019, 11:17 PM IST

ETV Bharat / state

ಅಕ್ರಮ ಕಟ್ಟಡ ತೆರವಿಗೆ ಬಿಬಿಎಂಪಿಯಲ್ಲಿ ಕಾಸಿಲ್ಲ; ಹೈಕೋರ್ಟಲ್ಲಿ ಆರ್ಥಿಕ ಸ್ಥಿತಿ ಬಿಚ್ಚಿಟ್ಟ ಆಯುಕ್ತರು

ನಗರದಲ್ಲಿನ ಬಿಬಿಎಂಪಿ ವ್ಯಾಪ್ತಿಯ ಜಾಗದಲ್ಲಿ ಕಟ್ಟಲಾಗಿರುವ ಹಾಗೂ ಬಿಬಿಎಂಪಿ ಜಾಗವನ್ನು ಒತ್ತುವರಿ ಮಾಡಿರುವ ಭೂ ಕಬಳಿಕೆದಾರರನ್ನು ತೆರವುಗೊಳಿಸಲು ಬಿಬಿಎಂಪಿಯಲ್ಲಿ ಹಣಕಾಸು ಕೊರತೆ ಇದೆ ಎಂದು ಪಾಲಿಕೆ ಆಯುಕ್ತರೇ ಒಪ್ಪಿಕೊಂಡಿದ್ದಾರೆ.

ಹೈಕೋರ್ಟ್​

ಬೆಂಗಳೂರು: ನಗರದಲ್ಲಿನ ಬಿಬಿಎಂಪಿ ವ್ಯಾಪ್ತಿಯ ಜಾಗದಲ್ಲಿ ಕಟ್ಟಲಾಗಿರುವ ಹಾಗೂ ಬಿಬಿಎಂಪಿ ಜಾಗ ಒತ್ತುವರಿ ಮಾಡಿರುವ ಭೂಕಬಳಿಕೆದಾರರನ್ನ ತೆರವುಗೊಳಿಸಲು ಬಿಬಿಎಂಪಿಯಲ್ಲಿ ಹಣಕಾಸು ಕೊರತೆ ಇದೆ ಎಂದು ಪಾಲಿಕೆ ಆಯುಕ್ತರು ಒಪ್ಪಿಕೊಂಡಿದ್ದಾರೆ.

ಬೃಹತ್ ಬೆಂಗಳೂರು ಪಾಲಿಕೆ ಆಯುಕ್ತರೇ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ಸಂಗತಿ ಒಪ್ಪಿಕೊಂಡಿದ್ದಾರೆ. ಸರ್ಕಾರದ ಆಸ್ತಿ ಉಳಿಸಿಕೊಳ್ಳಲು ಹಣಕಾಸಿನ ಕೊರತೆ ಇರುವ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದ್ದು, ಈ ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿಯಾಗಿ ಪರಿಗಣಿಸಿ ವಿಚಾರಣೆ ನಡೆಸಲು ಮುಖ್ಯನ್ಯಾಯಮೂರ್ತಿ ಒಳಗೊಂಡ ವಿಭಾಗೀಯ ಪೀಠ ನಿರ್ಧರಿಸಿದೆ.

ಬಿಬಿಎಂಪಿ ಅನಧಿಕೃತ ಕಟ್ಟಡಗಳ ತೆರವು ವಿಚಾರಕ್ಕೆ ಕ್ರಮ ಕೈಗೊಳ್ಳಲು ಸಂಪೂರ್ಣ ವಿಫಲವಾಗಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಲು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್​ಗೆ ಆದೇಶ ನೀಡಿದ್ದು, ಈ ಅರ್ಜಿ ವಿಚಾರಕ್ಕೆ ಸೆ.6 ರಂದು ಅಗತ್ಯ ನಿರ್ದೇಶನ ನೀಡುವುದಾಗಿ ಹೈಕೋರ್ಟ್ ತಿಳಿಸಿದೆ.

ABOUT THE AUTHOR

...view details