ಬೆಂಗಳೂರು:ನಗರದ ಟೆಂಡರ್ ಶ್ಯೂರ್ ರಸ್ತೆಗಳಲ್ಲಿ, ಪಾದಚಾರಿಗಳ ಸುರಕ್ಷತೆ ಹಾಗೂ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗಲು ಕಬ್ಬಿಣದ ಬೋಲ್ಲಾರ್ಡ್ ಅಳವಡಿಸಲಾಗಿದೆ. ಆದ್ರೆ ದುರಂತ ಅಂದ್ರೆ ಕಳ್ಳರು ಅದನ್ನೂ ಬಿಡದೆ ಕಳವು ಮಾಡಿದ್ದಾರೆ.
ಟೆಂಡರ್ ಶ್ಯೂರ್ ರಸ್ತೆಯ ಕಬ್ಬಿಣದ ತಡೆ ಕಂಬಗಳನ್ನೇ ಕದ್ದ ಖದೀಮರು! - BBMP latest news
ನಗರದ ಸೇಂಟ್ ಮಾರ್ಕ್ಸ್ ರಸ್ತೆಯ ಬ್ಯಾಂಕ್ ಆಫ್ ಇಂಡಿಯಾ ವೃತ್ತದಲ್ಲಿದ್ದ ಎಂಟು ಬೋಲ್ಲಾರ್ಡ್ಗಳನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಬಿಬಿಎಂಪಿ ದೂರು ದಾಖಲಿಸಿದೆ.
![ಟೆಂಡರ್ ಶ್ಯೂರ್ ರಸ್ತೆಯ ಕಬ್ಬಿಣದ ತಡೆ ಕಂಬಗಳನ್ನೇ ಕದ್ದ ಖದೀಮರು!](https://etvbharatimages.akamaized.net/etvbharat/prod-images/768-512-4984580-thumbnail-3x2-chai.jpg)
ಟೆಂಡರ್ ಶ್ಯೂರ್ ರಸ್ತೆ
ನಗರದ ಸೇಂಟ್ ಮಾರ್ಕ್ಸ್ ರಸ್ತೆಯ, ಬ್ಯಾಂಕ್ ಆಫ್ ಇಂಡಿಯಾ ಜಂಕ್ಷನ್ನಲ್ಲಿದ್ದ ಎಂಟು ಬೋಲ್ಲಾರ್ಡ್ಗಳ ಕಳ್ಳತನವಾಗಿದೆ. ಈ ಬಗ್ಗೆ ಬಿಬಿಎಂಪಿ ದೂರು ದಾಖಲಿಸಿದೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿರುವ ಆಯುಕ್ತರಾದ ಬಿ. ಹೆಚ್ ಅನಿಲ್ ಕುಮಾರ್, ಸಾರ್ವಜನಿಕರು ಇಂತಹ ಪ್ರಕರಣಗಳು ಕಂಡಾಗ ಪೊಲೀಸ್ ಕಂಟ್ರೋಲ್ ರೂಂ ಗಮನಕ್ಕೆ ತರಬೇಕು. ಸಾರ್ವಜನಿಕ ಆಸ್ತಿ ಉಳಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.