ಕರ್ನಾಟಕ

karnataka

By

Published : Jan 16, 2021, 3:52 PM IST

Updated : Jan 16, 2021, 10:16 PM IST

ETV Bharat / state

ಲಸಿಕೆ ಸುರಕ್ಷಿತವಾಗಿದ್ದು, ಯಾರೂ ಆತಂಕ ಪಡಬೇಕಾಗಿಲ್ಲ: ಸಚಿವ ಬೈರತಿ ಬಸವರಾಜ್ ಅಭಯ

ಲಸಿಕೆಯ ಸುರಕ್ಷಿತವಾಗಿದ್ದು, ಈ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ಈ ವ್ಯಾಕ್ಸಿನ್ ಕೊರೊನಾ ಮುಕ್ತ ದೇಶ ಮಾಡಲು ಸಹಕಾರಿಯಾಗಿದೆ. ಒಂದು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿಯವರ ಕಾಳಜಿ ಮತ್ತು ಪರಿಶ್ರಮದಿಂದ ಈ ಲಸಿಕೆ ಬಂದಿದ್ದು, ತುಂಬಾ ಸಂತೋಷವಾಗಿದೆ ಎಂದು ಸಚಿವ ಬೈರತಿ ಬಸವರಾಜ್ ತಿಳಿಸಿದರು.

Basavaraj
ತಿಳಿಸಿದರು.

ಬೆಂಗಳೂರು :ಕೆ.ಆರ್.ಪುರಂ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್​​ಗೆ ಸಚಿವ ಬೈರತಿ ಬಸವರಾಜ್ ಹಾಗೂ ಎಸ್​.ಟಿ.ಸೋಮಶೇಖರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಚಿವ ಬೈರತಿ ಬಸವರಾಜ್, ಮೊದಲು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಂದ್ರುಗೆ ಲಸಿಕೆ ನೀಡಲಾಗಿದೆ. ಎರಡನೆಯದಾಗಿ ಕೆ.ಆರ್.ಪುರಂನಲ್ಲಿ ಡಾಕ್ಟರ್ ಅಶೋಕ್​ ರೆಡ್ಡಿ ವ್ಯಾಕ್ಸಿನ್ ಪಡೆದಿದ್ದಾರೆ ಎಂದರು.
ಲಸಿಕೆಯ ಸುರಕ್ಷಿತವಾಗಿದ್ದು, ಈ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ಈ ವ್ಯಾಕ್ಸಿನ್ ಕೊರೊನಾ ಮುಕ್ತ ದೇಶ ಮಾಡಲು ಸಹಕಾರಿಯಾಗಿದೆ. ಒಂದು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿಯವರ ಕಾಳಜಿ ಮತ್ತು ಪರಿಶ್ರಮದಿಂದ ಈ ಲಸಿಕೆ ಬಂದಿದ್ದು, ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.

ಲಸಿಕೆ ಸುರಕ್ಷಿತವಾಗಿದ್ದು, ಯಾರೂ ಆತಂಕ ಪಡಬೇಕಾಗಿಲ್ಲ: ಸಚಿವ ಬೈರತಿ ಬಸವರಾಜ್ ಅಭಯ
ಇಡೀ ದೇಶಾದ್ಯಂತ ವ್ಯಾಪಿಸಿರುವ ಕೊರೊನಾವನ್ನು ಮುಕ್ತ ಮಾಡಲು ಸಂಜೀವಿನಿಯಾಗಿ ಲಸಿಕೆ ಕಾರ್ಯ ನಿರ್ವಹಿಸುವ ಮೂಲಕ ಹೊಸ ಹುರುಪು ನೀಡಲಿದೆ ಎಂದು ಹೇಳಿದರು.ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಲಸಿಕೆ ದೇಶದ ಅರ್ಥಿಕತೆ ಸೇರಿದಂತೆ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.
Last Updated : Jan 16, 2021, 10:16 PM IST

ABOUT THE AUTHOR

...view details