ಕರ್ನಾಟಕ

karnataka

ETV Bharat / state

ಕೂಡಿಟ್ಟ 25 ಸಾವಿರ ರೂ. ಸಿಎಂ ಪರಿಹಾರ ನಿಧಿಗೆ ನೀಡಿದ ಪುಟಾಣಿಗಳು

ಹಾವೇರಿ ಜಿಲ್ಲೆಯ ಮೂವರು ಪುಟ್ಟ ಪುಟ್ಟ ವಿದ್ಯಾರ್ಥಿನಿಯರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಸಾಥ್​​ ನೀಡಿದ್ದಾರೆ. ವಿಶೇಷವೆಂದರೆ ಮನೆಯಲ್ಲಿ ಪಾಕೆಟ್ ಮನಿ ಮೂಲಕ ಹಲವು ವರ್ಷದಿಂದ ಕೂಡಿಟ್ಟಿದ್ದ 25 ಸಾವಿರ ರೂಪಾಯಿ ಹಣವನ್ನು ಪರಿಹಾರ ನಿಧಿಗೆ ನೀಡಿ ಜನರ ಮನಗೆದ್ದಿದ್ದಾರೆ.

By

Published : Apr 28, 2020, 11:51 PM IST

The School childrens who donated the 25 thousands to CM Relief Fund
3 ವರ್ಷದಿಂದ ಕೂಡಿಟ್ಟಿದ್ದ 25 ಸಾವಿರ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ ಪುಟಾಣಿ ಮಕ್ಕಳು

ಬೆಂಗಳೂರು:ಕೊರೊನಾ ವಿರುದ್ಧದ ಹೋರಾಟಕ್ಕೆ ಆರ್ಥಿಕ ಸಹಾಯದ ಮೂಲಕ ಸಾಕಷ್ಟು ಸಂಘ ಸಂಸ್ಥೆಗಳು, ಕಂಪನಿಗಳು, ಗಣ್ಯರು, ಉದ್ಯಮಿಗಳು ದೇಣಿಗೆ ನೀಡಿ ನೆರವಾಗುತ್ತಿದ್ದಾರೆ. ಆದರೆ, ಚಿಣ್ಣರು ತಾವು ಕೂಡಿಟ್ಟ ಹಣವನ್ನು ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ನೀಡುವ ಮೂಲಕ ವಿಶೇಷವಾಗಿ ರಾಜ್ಯದ ಗಮನ ಸೆಳೆದಿದ್ದಾರೆ.

ಹಾವೇರಿ ಜಿಲ್ಲೆಯ ಮೂವರು ಪುಟ್ಟ ಪುಟ್ಟ ವಿದ್ಯಾರ್ಥಿನಿಯರು ಇನ್ನು ಈಗಷ್ಟೇ ಶಾಲೆಯಂಗಳದಲ್ಲಿ ಹೆಜ್ಜೆ ಇಟ್ಟಿದ್ದಾರೆ, ಆಟವಾಡುವ ವಯಸ್ಸಿನ ಈ ಕಂದಮ್ಮಗಳು ಇದೀಗ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಸಾಥ್​​ ನೀಡಿದ್ದಾರೆ.

ಹಾವೇರಿಯ ವಿದ್ಯಾರ್ಥಿನಿಯರಾದ ಅವನಿ, ಸನ್ನಿಧಿ ಹಾಗೂ ದೀಪ್ತಿ ತಾವು ಕಳೆದ 3 ವರ್ಷಗಳಿಂದ ಕೂಡಿಟ್ಟಿದ್ದ ಬರೋಬ್ಬರಿ 25 ಸಾವಿರ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಸರ್ಕಾರಕ್ಕೆ ನೆರವಾಗುವ ಮೂಲಕ ನಾಡಿನ ಗಮನ ಸೆಳೆದಿದ್ದಾರೆ. ಇನ್ನು ಈ ಅಪರೂಪದ ದೇಣಿಗೆಗೆ ಸಿಎಂ‌ ಸಂತಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details