ಕರ್ನಾಟಕ

karnataka

By

Published : Jul 12, 2019, 9:39 PM IST

ETV Bharat / state

ರೀವರ್ಸ್​ ಆಪರೇಷನ್​ ಎಲ್ಲ ಏನೂ ಇಲ್ಲ.. ಸಚಿವ ಬಂಡೆಪ್ಪ ಕಾಶೆಂಪೂರ್

ರೀವರ್ಸ್​ ಆಪರೇಷನ್​ ಎಲ್ಲ ಏನೂ ಇಲ್ಲ. ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳಿಂದ ಜೆಡಿಎಸ್ ಶಾಸಕರು‌ ಮತ್ತೆ ರೆಸಾರ್ಟ್​ನತ್ತ ಆಗಮಿಸುತ್ತಿದ್ದೇವೆ ಅಷ್ಟೇ ಎಂದು ಸಚಿವ ಬಂಡೆಪ್ಪ ಕಾಶೆಂಪೂರ್‌ ತಿಳಿಸಿದ್ದಾರೆ.

ಸಚಿವ ಬಂಡೆಪ್ಪ ಕಾಶೆಂಪೂರ್

ಬೆಂಗಳೂರು:ಸೋಮವಾರದವರೆಗೆ ರೆಸಾರ್ಟ್​ನಲ್ಲಿರುತ್ತೇವೆ. ಇನ್ನುಳಿದ ಜೆಡಿಎಸ್ ಶಾಸಕರು ಬಸ್​ನಲ್ಲಿ ಬರುತ್ತಾರೆ. ಸಿಎಂ ಹೆಚ್​ಡಿಕೆ ಕೂಡ ಇಂದು ರಾತ್ರಿ ರೆಸಾರ್ಟ್​ಗೆ ಬರಲಿದ್ದಾರೆ.‌ ಪ್ರಸಕ್ತ ಚಟುವಟಿಕೆಗಳನ್ನು ಸ್ವತಃ ಗಮನಿಸಿ ಸಿಎಂ ವಿಶ್ವಾಸಮತಕ್ಕೆ ಮುಂದಾಗಿದ್ದಾರೆ.‌ ಇದು ಉತ್ತಮ ಬೆಳವಣಿಗೆ, ಇದನ್ನು ಸ್ವಾಗತಿಸುತ್ತೇನೆ.‌ ರೀವರ್ಸ್ ಆಪರೇಷನ್ ಎಲ್ಲ ಯಾವುದೂ ಇಲ್ಲ ಎಂದು ‌ದೇವನಹಳ್ಳಿ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದ್ರು.

ರಿವರ್ಸ್​ ಆಪರೇಷನ್​ ಇಲ್ಲ ಎಂದ ಸಚಿವ ಬಂಡೆಪ್ಪ ಕಾಶೆಂಪೂರ್

ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳಿಂದ ಜೆಡಿಎಸ್ ಶಾಸಕರು‌ ಮತ್ತೆ ರೆಸಾರ್ಟ್​ನತ್ತ ಆಗಮಿಸುತ್ತಿದ್ದು, ಬಂಡೆಪ್ಪ ಕಾಶೆಂಪೂರ್, ಸಾ ರಾ ಮಹೇಶ್ ದೇವನಹಳ್ಳಿ ಬಳಿ ಇರುವ ಗಾಲ್ಫ್ ಶೈರ್ ರೆಸಾರ್ಟ್​ಗೆ ಆಗಮಿಸಿದ್ದಾರೆ.

ABOUT THE AUTHOR

...view details