ಕರ್ನಾಟಕ

karnataka

ETV Bharat / state

ಹಣಕಾಸಿನ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ.. ಮನೆಗೆ ಹೊಗಬೇಕಾದವ ಮಸಣ ಸೇರಿದ - undefined

ಜೊತೆಯಲ್ಲೇ ಕೂತು ಕುಡಿದವರೇ ತಮ್ಮ ಗೆಳೆಯನನ್ನ ಕೊಂದಿರುವ ಘಟನೆ ರಾಜಗೋಪಾಲನಗರದ ಐಪಿ ನಗರದಲ್ಲಿ ತಡರಾತ್ರಿ ನಡೆದಿದೆ.

ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್​​

By

Published : Apr 3, 2019, 6:07 PM IST

ಬೆಂಗಳೂರು :ಅವ್ನು ಕುಖ್ಯಾತ ಕಳ್ಳರ ಗ್ಯಾಂಗ್​ನ ಲೀಡರ್ ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದವನು, ಗೆಳೆಯರ ಜೊತೆ ಬಾರ್​​ನಲ್ಲಿ ಕೂತು ಮೋಜು ಮಸ್ತಿ ಮಾಡಿದ್ದ. ಇನ್ನೇನು ಮನೆಗೆ ಹೊರಡುವ ಟೈಮ್​​ನಲ್ಲಿ ಆ ಒಂದು ವಿಷಯಕ್ಕೆ ಶುರುವಾದ ಜಗಳ ಮನೆಗೆ ತೆರಳಬೇಕಿದ್ದವನನ್ನ ಮಸಣ ಸೇರುವಂತೆ ಮಾಡಿದೆ.

ಹಣ ಅನ್ನೋದು ಏನ್ ಬೇಕಾದ್ರೂ ಮಾಡಿಸತ್ತೆ.‌ ಅದರ ಮುಂದೆ ಯಾವ ಸಂಬಂಧಗಳೂ ನಿಲ್ಲಲ್ಲ ಅನ್ನೋ ಮಾತಿದೆ. ಜೊತೆಯಲ್ಲೇ ಕೂತು ಕುಡಿದವರೇ ತಮ್ಮ ಗೆಳೆಯನನ್ನ ಕೊಂದಿರುವ ಘಟನೆ ರಾಜಗೋಪಾಲನಗರದ ಐಪಿ ನಗರದಲ್ಲಿ ತಡರಾತ್ರಿ ನಡೆದಿದೆ. ನರಸಿಂಹ ಅಲಿಯಾಸ್ ಚೌಕಿ ನರಸಿಂಹ ಎಂಬುವನು ಮೂಲತ: ತುರುವೆಕೆರೆಯವನು. ಹಲವು ವರ್ಷಗಳ ಹಿಂದೆ ರಾಜಗೋಪಾಲನಗರದಲ್ಲಿ ನೆಲೆಸಿದ್ದ. ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ ನರಸಿಂಹ ಇತ್ತೀಚೆಗೆ ಹೊರ ಬಂದಿದ್ದ.

ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್​​

ನಿನ್ನೆ ನಂದಿನಿ ಲೇಔಟ್​​​ನ ಬಾರ್​​ವೊಂದರಲ್ಲಿ ಕೂತು ಪಾರ್ಟಿ ಮಾಡಿದ್ದಾನೆ. ನಂತರ ಕದ್ದ ಬೈಕ್​​​ಗಳ ಹಣದ ವಿಷಯಕ್ಕೆ ಸಂಬಂಧ ನರಸಿಂಹನಿಗೂ ಆತನ ಗೆಳೆಯರಿಗೂ ಜಗಳವಾಗಿದೆ. ಈ ವೇಳೆ ನರಸಿಂಹ ಬಾರ್​​ನಿಂದ ಹೊರಬಂದ ನಂತರ ಬೈಕ್​​​ಗಳಲ್ಲಿ ಫಾಲೋ ಮಾಡಿಕೊಂಡು ಬಂದು ನಾಲ್ವರು ಆರೋಪಿಗಳು ನರಸಿಂಹನನ್ನ ರಸ್ತೆಯಲ್ಲೇ ಅಡ್ಡಗಟ್ಟಿ ಚುಚ್ಚಿ ಕೊಂದಿದ್ದಾರೆ. ಬಾರ್​​​ನಲ್ಲಿ ಹಣಕಾಸಿನ ವಿಚಾರಕ್ಕೆ ಜಗಳವಾಗ್ತಿದ್ದಂತೆ ನರಸಿಂಹನ ಬಳಿ ಯಾವುದೂ ಹಣ ಇಲ್ಲ. ನಿಮಗ್ ನಾನ್ ಯಾವ್ದೋ ಹಣ ಕೊಡ್ಬೇಕಾಗಿಲ್ಲ ಅಂತಾ ಜೊತೆಯಲ್ಲಿದ್ದ ಗೆಳೆಯರಿಗೆ ಆವಾಜ್ ಹಾಕಿ ಬಾರ್​​​ನಿಂದ ಹೊರಬಂದಿದ್ದಾನೆ.

ನಂತರ ನರಸಿಂಹನನ್ನ ನಂದಿನಿಲೇಔಟ್​​ನಿಂದ ಐಪಿನಗರದವರೆಗೂ ಸುಮಾರು 6 ಕಿ.ಮೀ.ವರೆಗೂ ಬೈಕ್​​​ನಲ್ಲಿ ಹಿಂಬಾಲಿಸಿರೋ ಆರೋಪಿಗಳು. ಅನ್ನಪೂರ್ಣೇಶ್ವರಿ ನಗರ ಸೆಕೆಂಡ್ ಮೈನ್ ಬರ್ತಿದ್ದಂತೆ, ಬೈಕ್ ಅಡ್ಡಗಟ್ಟಿ ಚಾಕುವಿನಿಂದ ನರಸಿಂಹನ ಕತ್ತಿಗೆ ಇರಿದಿದ್ದಾರೆ. ನಾಲ್ಕು ಬಾರಿ ಚಾಕು ಇರಿತಕ್ಕೊಳಗಾಗುತ್ತಿದ್ದಂತೆ ನರಸಿಂಹ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ. ಆದರೆ, ಪ್ರಾಣ ಹೋಗಿದೆ ಅಂತಾ ತಿಳಿದರೂ ಬಿಡದ ಆರೋಪಿಗಳು ನರಸಿಂಹನ ಎದೆಭಾಗಕ್ಕೆ ಮತ್ತೆ 18 ಬಾರಿ ಚಾಕುವಿನಿಂದ ಇರಿದು ವಿಕೃತಿ ಮೆರೆದಿದ್ದಾರೆ. ಸದ್ಯ ಘಟನೆ ಸಂಬಂಧ ದೂರು ದಾಖಲಿಸಿಕೊಂಡಿರೋ ರಾಜಗೋಪಾಲನಗರ ಠಾಣೆ ಪೊಲೀಸರು, ಸಿಸಿಟಿವಿ ದೃಶ್ಯ ವಶಕ್ಕೆ ಪಡೆದು ಆರೋಪಿಗಳ ಬೆನ್ನತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details