ಕರ್ನಾಟಕ

karnataka

ETV Bharat / state

ಬಿಎಸ್​​ವೈ ಸಂಪುಟ ಸೇರುವವರ ಪಟ್ಟಿ ಇನ್ನೂ ಸಸ್ಪೆ‌ನ್ಸ್: ಬೆಳಗ್ಗೆ ಕರೆ ಮಾಡಿ ಮಾಹಿತಿ ನೀಡ್ತಾರಂತೆ ಸಿಎಂ!

ಸಚಿವ ಸಂಪುಟ ವಿಸ್ತರಣೆ ಕುರಿತು ನಾಳೆವರೆಗೂ ಸಸ್ಪೆನ್ಸ್ ಬಿಟ್ಟುಕೊಡದಿರಲು ಹೈಕಮಾಂಡ್ ಸಂದೇಶ ರವಾನಿಸಿದೆ. ಹೀಗಾಗಿ ನೂತನ‌ ಸಚಿವರಾಗುವವರಿಗೆ ನಾಳೆ ಬೆಳಗ್ಗೆ ದೂರವಾಣಿ ಕರೆ ಮಾಡಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚಿಸಲಿದ್ದಾರೆ.

By

Published : Aug 20, 2019, 12:38 AM IST

ಬಿ.ಎಸ್. ಯಡಿಯೂರಪ್ಪ

ಬೆಂಗಳೂರು:ಕೇಂದ್ರ ಸಚಿವ ಸಂಪುಟ ರಚನೆ ವೇಳೆ ಕಾಯ್ದುಕೊಂಡಿದ್ದ ಗೌಪ್ಯತೆ ತಂತ್ರವನ್ನೇ, ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿಯೂ ಬಿಜೆಪಿ ಹೈಕಮಾಂಡ್ ಅನುಸರಿಸಿದೆ. ಪ್ರಮಾಣ ವಚನಕ್ಕೂ 2 ಗಂಟೆ ಮೊದಲು ದೂರವಾಣಿ ಕರೆ ಮೂಲಕ ಮಾಹಿತಿ ರವಾನಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ನಾಳೆವರೆಗೂ ಸಸ್ಪೆನ್ಸ್ ಬಿಟ್ಟು ಕೊಡದಿರಲು ಹೈಕಮಾಂಡ್ ಸಂದೇಶ ರವಾನಿಸಿದ್ದು, ಅದಕ್ಕಾಗಿ ನೂತನ‌ ಸಚಿವರಾಗುವವರಿಗೆ ನಾಳೆ ಬೆಳಗ್ಗೆ ದೂರವಾಣಿ ಕರೆ ಮಾಡಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚಿಸಲಿದ್ದಾರೆ.

ಕೇಂದ್ರದ ಕ್ಯಾಬಿನೆಟ್ ರಚನೆ ವೇಳೆ ಮಾಡಿದ್ದನ್ನೇ, ರಾಜ್ಯ ಸಂಪುಟ ವೇಳೆಯಲ್ಲೂ ಬಿಜೆಪಿ ಅನುಸರಿಸುತ್ತಿದ್ದು, ಯಡಿಯೂರಪ್ಪ ನಾಳೆವರೆಗೂ ಯಾರ್ಯಾರು ಸಚಿವರಾಗಲಿದ್ದಾರೆಂಬ ಗುಟ್ಟು ಬಿಡದಿರಲು ನಿರ್ಧರಿಸಿದ್ದಾರೆ. ನಾಳೆ ಪ್ರಮಾಣ ವಚನ‌ ಕಾರ್ಯಕ್ರಮಕ್ಕೂ 2 ಗಂಟೆ ಮೊದಲು ಕರೆ ಮಾಡಿ‌ ತಿಳಿಸಲಿದ್ದಾರೆ.

ಈಗಾಗಲೇ ಎಲ್ಲಾ ಶಾಸಕರು ನಾಳಿನ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ನಾಳೆ ಕೊನೆ ಕ್ಷಣದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವವರಿಗೆ ಖುದ್ದು ಕರೆ ಮಾಡಿ ಮಾಹಿತಿ ನೀಡಲಿದ್ದಾರೆ.

ABOUT THE AUTHOR

...view details