ಕರ್ನಾಟಕ

karnataka

ETV Bharat / state

ಅಂದು ಕರುಣಾಮಯಿ ’ಕರುಣಾ’ ಗೋಡೆ: ಇಂದು ಕೇಳುವವರೇ ಇಲ್ಲ - ಕರುಣಾಗೋಡೆ ಯೋಜನೆಗೆ ನಿರ್ವಹಣೆ ಕೊರತೆ ಸುದ್ದಿ

ಆರಂಭದ ದಿನ ಕರುಣಾ ಗೋಡೆ ಮುಂದೆ ನೂರಾರು ಕಾರ್ಮಿಕರು ಮುಗಿಬಿದ್ದಿದ್ದರು. ಆರಂಭದಲ್ಲಿ ಕೆಲವರು ದಿನಸಿ, ಹಣ್ಣು ಹಂಪಲು, ತರಕಾರಿ ತಂದಿರಿಸಿ ಉತ್ಸಾಹ ತೋರಿದ್ದರು. ವಲಸೆ ಕಾರ್ಮಿಕರು ಇದರ ಪ್ರಯೋಜನ ಪಡೆದು ಕೊಂಡಿದ್ದರು.

ಕರುಣಾಗೋಡೆ
ಕರುಣಾಗೋಡೆ

By

Published : Jun 16, 2020, 9:17 AM IST

ಬೆಂಗಳೂರು : ಕೋವಿಡ್‌- 19 ಸಂಕಷ್ಟದ ಸಂದರ್ಭದಲ್ಲಿ ಕಷ್ಟದಲ್ಲಿರುವ ಬಡವರಿಗೆ ನೆರವಾಗಲಿ ಎಂದು ಮಹದೇವಪುರದ ಶೀಗೆಹಳ್ಳಿ ಸಮೀಪದ ಫ‌ುಟ್‌ಪಾತ್‌ ಮೇಲೆ ದಾನಿಗಳ ಮತ್ತು ಬಡವರ ಸೇತುವಾಗಿ ಆರಂಭಿಸಿದ ಕರುಣಾ ಗೋಡೆ ಎನ್ನುವ ಯೋಜನೆ ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯಗೂಡಾಗಿದೆ.

ಕರುಣಾ ಗೋಡೆ

ಫ‌ುಟ್‌ಪಾತ್‌ ಮೇಲಿನ ಗೋಡೆಯಲ್ಲಿ ನಿರ್ಮಿಸಿರುವ ರ್ಯಾಪ್‌ ಬಳಿ ಬಟ್ಟೆಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿವೆ. ಬಳಸದೇ ಮನೆಯಲ್ಲಿ ಹಾಳಾಗುತ್ತಿರುವ ಅಗತ್ಯವಿಲ್ಲದ ವಸ್ತುಗಳಿದ್ದರೆ ಅದನ್ನು ದಾನಿಗಳು ತಂದು ಇಲ್ಲಿ ಇಡಲು ಅವಕಾಶ ಕಲ್ಪಿಸಲಾಗಿತ್ತು. ಅಗತ್ಯವಿದ್ದ ಬಡವರು ಅದನ್ನು ಬಳಕೆಗೆ ಕೊಂಡು ಹೋಗಲು ಅನುವು ಮಾಡಿಕೊಡಲಾಗಿತ್ತು. ಅದರಂತೆ ದಾನಿಗಳು ಬೃಹತ್‌ ಪ್ರಮಾಣದಲ್ಲಿ ಹಳೆಯ ಬಟ್ಟೆಗಳನ್ನು ರ್ಯಾಪ್‌ನಲ್ಲಿ ತಂದು ಇರಿಸಿದ್ದು, ಯಾರೂ ಕೂಡ ಕೊಂಡು ಹೋಗಿಲ್ಲ ಪರಿಣಾಮ ಬಟ್ಟೆ ಇನ್ನಿತರ ವಸ್ತುಗಳು ಗಾಳಿ ಮಳೆಗೆ ಒದ್ದೆಯಾಗಿ ಚೆಲ್ಲಾಪಿಲ್ಲಿಯಾಗಿ ರ್ಯಾಪ್‌ನಿಂದ ಕೆಳಗೆ ಹರಡಿ ಬಿದ್ದುಕೊಂಡಿವೆ.

ಓದಿ:ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಚಾರ್ಜಿಂಗ್​ ಪಾಯಿಂಟ್​ ಉಪಯೋಗಿಸ್ತೀರಾ? ಹಾಗಿದ್ರೆ ಎಚ್ಚರ!

ಆರಂಭದ ದಿನ ಕರುಣಾ ಗೋಡೆ ಮುಂದೆ ನೂರಾರು ಕಾರ್ಮಿಕರು ಮುಗಿಬಿದ್ದಿದ್ದರು. ಆರಂಭದಲ್ಲಿ ಕೆಲವರು ದಿನಸಿ, ಹಣ್ಣುಹಂಪಲು, ತರಕಾರಿ ತಂದಿರಿಸಿ ಉತ್ಸಾಹ ತೋರಿದ್ದರು. ವಲಸೆ ಕಾರ್ಮಿಕರು ಇದರ ಪ್ರಯೋಜನ ಪಡೆದು ಕೊಂಡಿದ್ದರು. ಅನಂತರದಲ್ಲಿ ಅವರೆಲ್ಲ ಊರುಗಳಿಗೆ ತೆರಳಿದ್ದಾರೆ ಈಗ ಈ ಬಟ್ಟೆಗಳನ್ನು ಕೇಳುವವರೇ ಇಲ್ಲದಂತಾಗಿದೆ.

ABOUT THE AUTHOR

...view details