ಕರ್ನಾಟಕ

karnataka

ETV Bharat / state

ಎಂಡಿ ಕೋರ್ಸ್ ಬಿಟ್ಟ ವಿದ್ಯಾರ್ಥಿಯಿಂದ ಪೂರ್ತಿ ಶುಲ್ಕ ಕೇಳಿದ್ದ ಕಾಲೇಜಿನ ಮನವಿ ತಿರಸ್ಕರಿಸಿದ ಹೈಕೋರ್ಟ್ - The petition filed by the Vaibhav Khosla to High Court

ವೈದ್ಯಕೀಯ ಪಿಜಿ ಕೋರ್ಸ್​ನ ಸೀಟನ್ನು ಕೊನೆಯ ಕೌನ್ಸಿಲಿಂಗ್​​ಗೆ ಮುನ್ನವೇ ಹಿಂದಿರುಗಿಸಿದ್ದರೂ ಕಾಲೇಜು ಆಡಳಿತ ಮಂಡಳಿ ಇಡೀ ಕೋರ್ಸ್​ನ ಫೀಸ್​​ ಕೇಳುತ್ತಿದೆ ಎಂದು ಆಕ್ಷೇಪಿಸಿ ಡಾ. ವೈಭವ್ ಖೋಸ್ಲ ಎಂಬುವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್​ ವಿದ್ಯಾರ್ಥಿಯಿಂದ ಒಂದು ಸೆಮಿಸ್ಟರ್ ಫೀಸ್​​​ ಕೇಳಬಹುದೇ ಹೊರತು, ಇಡೀ ಕೋರ್ಸ್​ನ ಶುಲ್ಕವನ್ನಲ್ಲ ಎಂದು ಹೈಕೋರ್ಟ್ ಆದೇಶಿಸಿದೆ..

High Court
ಹೈಕೋರ್ಟ್

By

Published : Feb 4, 2022, 8:46 PM IST

ಬೆಂಗಳೂರು :ಕೊನೆಯ ಕೌನ್ಸಿಲಿಂಗ್​​ಗೆ ಮುನ್ನವೇ ವಿದ್ಯಾರ್ಥಿ ಸೀಟು ಬಿಟ್ಟುಕೊಟ್ಟಿದ್ದಾರೆ. ಕೋರ್ಸ್​ನ ಮಧ್ಯಭಾಗದಲ್ಲಿ ಅಲ್ಲ. ಹೀಗಾಗಿ, ವಿದ್ಯಾರ್ಥಿಯಿಂದ ಒಂದು ಸೆಮಿಸ್ಟರ್ ಫೀಸ್​​​ ಕೇಳಬಹುದೇ ಹೊರತು, ಇಡೀ ಕೋರ್ಸ್​ನ ಶುಲ್ಕವನ್ನಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ವೈದ್ಯಕೀಯ ಪಿಜಿ ಕೋರ್ಸ್​ನ ಸೀಟನ್ನು ಕೊನೆಯ ಕೌನ್ಸಿಲಿಂಗ್​​ಗೆ ಮುನ್ನವೇ ಹಿಂದಿರುಗಿಸಿದ್ದರೂ ಕಾಲೇಜು ಆಡಳಿತ ಮಂಡಳಿ ಇಡೀ ಕೋರ್ಸ್​ನ ಫೀಸ್​​ ಕೇಳುತ್ತಿದೆ ಎಂದು ಆಕ್ಷೇಪಿಸಿ ಡಾ. ವೈಭವ್ ಖೋಸ್ಲ ಎಂಬುವರು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ನ್ಯಾಯಮೂರ್ತಿ ಎಮ್ ಜಿ ಎಸ್ ಕಮಲ್ ಅವರಿದ್ಧ ಪೀಠ ಈ ಆದೇಶ ಹೊರಡಿಸಿದೆ.

ಪ್ರಕರಣದ ಹಿನ್ನೆಲೆ :ಪಂಜಾಬ್​ನ ಅಮೃತ್‌ಸರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿದ್ದ ಡಾ. ವೈಭವ್ ಖೋಸ್ಲ 2018ರಲ್ಲಿ ಪಿಜಿ ಮಾಡುವ ನಿಟ್ಟಿನಲ್ಲಿ ನೀಟ್ ಪರೀಕ್ಷೆ ಬರೆದಿದ್ದರು. ಈ ವೇಳೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (ಕೆಇಎ) ನೋಂದಾಯಿಸಿಕೊಂಡಿದ್ದರು. ಬಳಿಕ ಲೂಧಿಯಾನದ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಎಸ್ ಆರ್ಥೋಪೆಡಿಕ್ಸ್ ಕೋರ್ಸ್​ಗೆ 2018ರ ಮೇ.24ರಂದು ದಾಖಲಾಗಿದ್ದರು.

ಈ ನಡುವೆ ಕೆಇಎ ನಡೆಸಿದ ಕೌನ್ಸಿಲಿಂಗ್​ನ ಮಾಪ್ ಅಪ್ ರೌಂಡ್​​ನಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಸೈಕಿಯಾಟ್ರಿ ಕೋರ್ಸ್​ಗೆ (ಮನೋವೈದ್ಯಶಾಸ್ತ್ರ) ಸೀಟು ಪಡೆದಿದ್ದರು. ಈ ವೇಳೆ ಮೂಲ ಶೈಕ್ಷಣಿಕ ದಾಖಲೆಗಳ ಜತೆ ಕೋರ್ಸ್ ಶುಲ್ಕವಾಗಿ 7,74,500 ರೂಪಾಯಿಯನ್ನು ಕೆಇಎನಲ್ಲಿ ಠೇವಣಿ ಮಾಡಿದ್ದರು.

ಇದನ್ನೂ ಓದಿ:ಕೋವಿಡ್ ಮಾರ್ಗಸೂಚಿ ಸಡಿಲಿಸಿದ ಹೈಕೋರ್ಟ್ : ಫೆಬ್ರವರಿ 7ರಿಂದ ಹೊಸ ನಿಯಮ ಜಾರಿ

ಅಂತಿಮವಾಗಿ ಲೂಧಿಯಾನದಲ್ಲಿ ಎಂಎಸ್ ಆರ್ಥೋಪೆಡಿಕ್ಸ್ ಕಲಿಯಲು ನಿರ್ಧರಿಸಿದ್ದ ರಾಜರಾಜೇಶ್ವರಿ ಕಾಲೇಜಿನಲ್ಲಿ ಸಿಕ್ಕಿದ್ದ ಸೈಕಿಯಾಟ್ರಿ ಕೋರ್ಸ್‌ನ ಸೀಟು ಹಿಂದಿರುಗಿಸಿರುವುದಾಗಿ ತಿಳಿಸಿ 2018ರ ಮೇ 29ರಂದು ಕೆಇಎ ಹಾಗೂ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ ಇ-ಮೇಲ್ ಕಳುಹಿಸಿದ್ದರು. ಬಳಿಕ ತಮ್ಮ ಮೂಲ ಶೈಕ್ಷಣಿಕ ದಾಖಲೆಗಳು ಹಾಗೂ ಠೇವಣಿ ಹಣ ಹಿಂದಿರುಗಿಸುವಂತೆ ಕಾಲೇಜು ಹಾಗೂ ಕೆಇಎಗೆ ಭೇಟಿ ನೀಡಿ ಮನವಿ ಮಾಡಿದ್ದರು.

2018ರ ಜೂನ್ 3ರಂದು ರಾಜರಾಜೇಶ್ವರಿ ಕಾಲೇಜು ಕೋರ್ಸ್ ಬಿಟ್ಟಿದ್ದರಿಂದ 3 ವರ್ಷದ ಕೋರ್ಸ್​ನ ಪೂರ್ತಿ ಶುಲ್ಕ 25.32 ಲಕ್ಷ ಪಾವತಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಡಾ. ವೈಭವ್ ಖೋಸ್ಲಾ, ತಾನು ಕೋರ್ಸ್​ನ ಕೊನೆಯ ಸುತ್ತಿನ ಕೌನ್ಸಿಲಿಂಗ್​​ಗೆ ಮುನ್ನ ಸೀಟು ಬಿಟ್ಟುಕೊಟ್ಟಿದ್ದೇನೆ.

ಕೋರ್ಸ್​ನ ಕೊನೆಯ ಕೌನ್ಸಿಲಿಂಗ್​ಗೆ 2018ರ ಮೇ 31ರ ಕೊನೆಯ ದಿನವಾಗಿತ್ತು. ಆದ್ದರಿಂದ, ಕಾಲೇಜು ಕೋರ್ಸ್​ನ ಪೂರ್ತಿ ಶುಲ್ಕ ಕೇಳದಂತೆ ಹಾಗೂ ಶೈಕ್ಷಣಿಕ ದಾಖಲೆಗಳು ಹಾಗೂ ಠೇವಣಿಯನ್ನು ಹಿಂದಿರುಗಿಸಲು ನಿರ್ದೇಶಿಸುವಂತೆ ಕೋರಿದ್ದರು. ಇದಕ್ಕೆ ಒಪ್ಪದ ಕಾಲೇಜು ಕೋರ್ಸ್‌ನ ಪೂರ್ತಿ ಶುಲ್ಕ ಪಾವತಿಸಿದರಷ್ಟೇ ದಾಖಲೆಗಳನ್ನು ಹಿಂದಿರುಗಿಸುವುದಾಗಿ ವಾದಿಸಿತ್ತು.

ಹೈಕೋರ್ಟ್ ತೀರ್ಪು :ವಾದ-ಪ್ರತಿವಾದ ಆಲಿಸಿದ ವಿಭಾಗೀಯ ಪೀಠ, ಅರ್ಜಿದಾರ ವಿದ್ಯಾರ್ಥಿ ತಾನು ಪಡೆದಿದ್ದ ಸೀಟನ್ನು ಕೋರ್ಸ್​ನ ಅಂತಿಮ ಸುತ್ತಿನ ಕೌನ್ಸಿಲಿಂಗ್​ಗೆ ಮುನ್ನವೇ ಹಿಂದಿರುಗಿಸಿರುವುದಾಗಿ ತಿಳಿಸಿದ್ದಾರೆ. ಈ ವಿಚಾರದಲ್ಲಿ ಯಾರ ಆಕ್ಷೇಪವೂ ಇಲ್ಲ. ಇನ್ನು ಅರ್ಜಿದಾರ ಕೋರ್ಸ್‌ನ ಮಧ್ಯಭಾಗದಲ್ಲೂ ಬಿಟ್ಟು ಹೋಗಿಲ್ಲ.

ಅದರಂತೆ ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಷನ್ ಅಂಡ್ ಅದರ್ಸ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಅರ್ಜಿದಾರ ವಿದ್ಯಾರ್ಥಿಯಿಂದ 3 ವರ್ಷದ ಕೋರ್ಸ್‌ನ ಸಂಪೂರ್ಣ ಶುಲ್ಕ ಕೇಳಲು ಕಾಲೇಜಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ, 2019ರ ಏಪ್ರಿಲ್‌ನಲ್ಲಿ ಹೈಕೋರ್ಟ್​ನ ಮಧ್ಯಂತರ ಆದೇಶದಂತೆ ಅರ್ಜಿದಾರರ ಮೂಲ ಶೈಕ್ಷಣಿಕ ದಾಖಲೆಗಳನ್ನು ಹಿಂದಿರುಗಿಸಲಾಗಿದೆ.

ಇನ್ನು ಅರ್ಜಿದಾರ ಶುಲ್ಕ ವಾಪಸ್​​ ಕೇಳುವ ಅಧಿಕಾರವನ್ನು ಈ ಹಿಂದೆ ಬಿಟ್ಟುಕೊಟ್ಟಿರುವುದರಿಂದ ಪ್ರಕರಣದಲ್ಲಿ ಯಾವುದೇ ಆದೇಶ ಹೊರಡಿಸುವ ಅವಶ್ಯಕತೆ ಇಲ್ಲವೆಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿದೆ.

For All Latest Updates

TAGGED:

ABOUT THE AUTHOR

...view details