ಕರ್ನಾಟಕ

karnataka

ETV Bharat / state

ಏ. 14ಕ್ಕೆ ಲಾಕ್​ಡೌನ್ ಕೊನೆಗೊಳ್ಳೋದು ಅನುಮಾನ: ಸಿಎಂ ಬಿಎಸ್​ವೈ ಸುಳಿವು

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್​ಡೌನ್ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೆರವು ಮಾಡಲ್ಲ ಎನ್ನುವ ಸುಳಿವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ.

By

Published : Apr 6, 2020, 10:45 PM IST

Updated : Apr 7, 2020, 1:10 PM IST

CM. BS Yeduyurappa
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ವಿಧಿಸಲಾಗಿರುವ ಲಾಕ್​ಡೌನ್ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೆರವು ಮಾಡಲ್ಲ ಎನ್ನುವ ಸುಳಿವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದು, ಕೋವಿಡ್ ಹಾಟ್ ಸ್ಪಾಟ್ ಆಗಿರುವ ಜಿಲ್ಲೆಗಳಲ್ಲಿ ಮತ್ತೆ 14 ದಿನದ ಲಾಕ್​ಡೌನ್ ಮುಂದುವರೆಸುವ ಸಾದ್ಯತೆ ಹೆಚ್ಚಾಗಿದೆ.

ಏ. 14ಕ್ಕೆ ಲಾಕ್​ಡೌನ್ ಕೊನೆಗೊಳ್ಳೋದು ಅನುಮಾನ: ಸಿಎಂ ಬಿಎಸ್​ವೈ ಸುಳಿವು

ಲಾಕ್​ಡೌನ್ ಏಪ್ರಿಲ್ 14ರಂದು ವಾಪಸ್ ಪಡೆದರೆ ಇಷ್ಟು ದಿನದ ಶ್ರಮ ವ್ಯರ್ಥವಾಗಲಿದೆ. ಹೊಳೆಯಲ್ಲಿ ಹುಣಿಸೇಹಣ್ಣು ತೊಳೆದಂತಾಗಲಿದೆ ಎನ್ನುವ ನಿಲುವಿಗೆ ಬಂದಿರುವ ಸಿಎಂ, ಹಂತ ಹಂತವಾಗಿ ಲಾಕ್​ಡೌನ್ ಸಡಿಲಿಕೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಹಾಗಾಗಿ ಏಪ್ರಿಲ್ 14ಕ್ಕೆ ಲಾಕ್​ಡೌನ್ ಮುಗಿಯಲಿದೆ ಎನ್ನುವ ನಿರೀಕ್ಷೆಯಲ್ಲಿರುವ ರಾಜ್ಯದ ಜನರು ಮತ್ತೊಂದಷ್ಟು ದಿನ ಮನೆಯಲ್ಲೇ ಇರಲು ಮಾನಸಿಕವಾಗಿ ಸಿದ್ಧರಾದರೆ ಒಳಿತು ಎನ್ನಲಾಗುತ್ತಿದೆ.

Last Updated : Apr 7, 2020, 1:10 PM IST

ABOUT THE AUTHOR

...view details