ಕರ್ನಾಟಕ

karnataka

By

Published : Nov 30, 2019, 4:48 PM IST

ETV Bharat / state

ಕಾಂಗ್ರೆಸ್​​ ಅಭ್ಯರ್ಥಿ ಪರ ಸುನಾಮಿ ಕಿಟ್ಟಿ ಪ್ರಚಾರ... ಗೆದ್ದೇ ಗೆಲ್ತೀನಿ ಅಂದ್ರು ನಾಗರಜ್​​ ಪಾಳ್ಯ

ಯಶವಂತಪುರ ಉಪ ಚುನಾವಣೆಗೆ ಇನ್ನೇನು ಕೆಲವೆ ದಿನಗಳು ಬಾಕಿ ಇದ್ದು, ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್ ಪಾಳ್ಯ ಮನೆ ಮೆನೆಗೆ ತೆರಳಿ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಗ್ ಬಾಸ್ ಸ್ಪರ್ಧಿ ಸುನಾಮಿ ಕಿಟ್ಟಿ ಸಾಥ್ ನೀಡಿ ಕಾಂಗ್ರೆಸ್ ಪರ ಮತಯಾಚನೆ ಮಾಡಿದರು.

sunami-kitty-by-election-campaign
ಕಾಂಗ್ರೆಸ್ ಅಭ್ಯರ್ಥಿ ಪರ ಸುನಾಮಿ ಕಿಟ್ಟಿ ಪ್ರಚಾರ

ಬೆಂಗಳೂರು:ಉಪ ಚುನಾವಣೆಗೆ ಇನ್ನೇನು ಕೆಲವೆ ದಿನಗಳು ಬಾಕಿ ಇದ್ದು, ಇಂದು ನಾಗರಾಜ್ ಪಾಳ್ಯ ಮನೆ ಮೆನೆಗೆ ತೆರಳಿ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಗ್ ಬಾಸ್ ಸ್ಪರ್ಧಿ ಸುನಾಮಿ ಕಿಟ್ಟಿ ಸಾಥ್ ನೀಡಿದರು.

ಯಶವಂತಪುರದಲ್ಲಿ ಬಿಜೆಪಿ ಸೋಲುತ್ತೆ ಅಂತ ಸ್ವತಃ ಸಿಎಂಗೆ ಭಯ ಶುರುವಾಗಿದೆ. ಹೀಗಾಗಿ ಯಶವಂತಪುರ ಕ್ಷೇತ್ರಕ್ಕೆ ಎರಡು ಮೂರು ಬಾರಿ ಬರ್ತಿದ್ದಾರೆ. ಸಭೆ ಮೇಲೆ ಸಭೆ, ಪ್ರಚಾರ ಮಾಡ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ ಎಂದು ನಾಗರಾಜ್ ಪಾಳ್ಯ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಪರ ಸುನಾಮಿ ಕಿಟ್ಟಿ ಪ್ರಚಾರ

ಡಿಸೆಂಬರ್ 2ರಂದು ಯಶವಂತಪುರಕ್ಕೆ ಡಿಕೆಶಿ ಎಂಟ್ರಿ

ಕಾಂಗ್ರೆಸ್ ಪರ ಪ್ರಚಾರ ಮಾಡಲಿರೋ ಡಿ.ಕೆ.ಶಿವಕುಮಾರ್ ಡಿಸೆಂಬರ್ 2ರಂದು ಕ್ಷೇತ್ರದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರನ್ನ ಸೇರಿಸಿ ಸಮಾವೇಶ ಮಾಡಲಿದ್ದಾರೆ ಎಂದು ನಾಗರಾಜ್ ಪಾಳ್ಯ ತಿಳಿಸಿದ್ದಾರೆ.

For All Latest Updates

ABOUT THE AUTHOR

...view details