ಕರ್ನಾಟಕ

karnataka

ಯುವತಿಗೆ ಶಾಪಿಂಗ್​, ಪಾರ್ಟಿ ಅಂತಾ ಪೀಡಿಸಿದ ಆರೋಪ: ಚಿಗುರು ಮೀಸೆ ಶಿಕ್ಷಕನಿಗೆ ರಸ್ತೆಯಲ್ಲೇ ಥಳಿತ

By

Published : Dec 31, 2019, 5:21 PM IST

ನ್ಯೂ ಇಯರ್ ಪೂರ್ವಭಾವಿಯಾಗಿ ಶಾಪಿಂಗ್ ಹಾಗೆ ಪಾರ್ಟಿಗೆ ಹೋಗೋಣವೆಂದು ಯುವತಿಯನ್ನು ಪೀಡಿಸುತ್ತಿದ್ದ ಆರೋಪದ ಮೇಲೆ ದೈಹಿಕ ಶಿಕ್ಷಕನಿಗೆ ನಡು ರಸ್ತೆಯಲ್ಲೇ ಧರ್ಮದೇಟು ನೀಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ‌.

Student Beat Sports Teacher In Bangalore
ನ್ಯೂ ಇಯರ್​ ಪಾರ್ಟಿ ಹೋಗೋಣ ಎಂದ ದೈಹಿಕ ಶಿಕ್ಷಕನಿ ಬಿತ್ತು ಧರ್ಮದೇಟು

ಬೆಂಗಳೂರು: ನ್ಯೂ ಇಯರ್ ಪೂರ್ವಭಾವಿಯಾಗಿ ಶಾಪಿಂಗ್ ಮತ್ತು ಪಾರ್ಟಿಗೆ ಹೋಗೋಣವೆಂದು ಯುವತಿಗೆ ಪೀಡಿಸುತ್ತಿದ್ದ ಆರೋಪದ ಮೇಲೆ ದೈಹಿಕ ಶಿಕ್ಷಕನಿಗೆ ರಸ್ತೆಯಲ್ಲೇ ಧರ್ಮದೇಟು ನೀಡಿರುವ ಘಟನೆ ನಗರದಲ್ಲಿ ನಡೆದಿದೆ‌.

ಯುವತಿಗೆ ಶಾಪಿಂಗ್​, ಪಾರ್ಟಿ ಅಂತಾ ಪೀಡಿಸಿದ ಆರೋಪ

ಮಾರತ್ತಹಳ್ಳಿಯ ಖಾಸಗಿ ಕಾಲೇಜಿನ ದೈಹಿಕ‌ಶಿಕ್ಷಕ ಜಾನ್ಯು ಯುವತಿಯೋರ್ವಳಿಗೆ ಹೊಸ ವರ್ಷಾಚರಣೆಗೆ ಶಾಪಿಂಗ್, ಪಬ್ ಬಾರ್​ಗೆ ಜೊತೆಯಲ್ಲಿ ಪಾರ್ಟಿಗೆ ಬರುವಂತೆ ಪೀಡಿಸುತ್ತಿದ್ದ ಎನ್ನಲಾಗ್ತಿದೆ. ನೊಂದ ಯುವತಿ ಎಷ್ಟೇ ಬಾರಿ ಬರಲ್ಲ ಎಂದರೂ ಹಿಂಸೆ ನೀಡುತ್ತಿದ್ದನಂತೆ. ಈ ವಿಷಯ ತಿಳಿದ ಯುವತಿ ಮತ್ತು ಆಕೆಯ ಸ್ನೇಹಿತರು ಆರೋಪಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details