ಕರ್ನಾಟಕ

karnataka

ETV Bharat / state

8 ತಿಂಗಳ ಬಳಿಕ ಕಾಲೇಜುಗಳು ರೀ ಓಪನ್​: ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ! - ಕರ್ನಾಟಕ ಕಾಲೇಜುಗಳು ಆರಂಭ,

State wide colleges to resume, State wide colleges to resume partially today, Karnataka State wide colleges to resume partially today, Karnataka college resume, Karnataka college resume news, ರಾಜ್ಯಾದ್ಯಂತ ಕಾಲೇಜುಗಳು ಆರಂಭ, ಇಂದಿನಿಂದ ರಾಜ್ಯಾದ್ಯಂತ ಕಾಲೇಜುಗಳು ಆರಂಭ, ಇಂದಿನಿಂದ ಕರ್ನಾಟಕ ರಾಜ್ಯಾದ್ಯಂತ ಕಾಲೇಜುಗಳು ಆರಂಭ, ಕರ್ನಾಟಕ ಕಾಲೇಜುಗಳು ಆರಂಭ, ಕರ್ನಾಟಕ ಕಾಲೇಜುಗಳು ಆರಂಭ ಸುದ್ದಿ,
ನ್ಯಾಷನಲ್ ಕಾಲೇಜಿನಲ್ಲಿ ತರಗತಿ ನಾಳೆ ಆರಂಭ

By

Published : Nov 17, 2020, 10:34 AM IST

Updated : Nov 17, 2020, 8:54 PM IST

20:50 November 17

ಕಾಲೇಜಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭೇಟಿ

ಮೈಸೂರು:  ನಗರದ ಮಹಾರಾಣಿ ಮಹಿಳಾ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ಕಾಲೇಜಿಗೆ ಆಗಮಿಸಿದ್ದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಕೋವಿಡ್-19 ಪರೀಕ್ಷೆ ನಡೆಸಿದ ಬಗ್ಗೆ ಮಾಹಿತಿ ಪಡೆದ ಅವರು, ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಸಾರಿಗೆ ಹಾಗೂ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆ ಬಗ್ಗೆ ಚರ್ಚಿಸಿದರು. ಕಾಲೇಜಿನ ಕಟ್ಟಡ, ಶೌಚಾಲಯ, ಎಲ್ಲಾ ಕೊಠಡಿಗಳಲ್ಲಿನ ಪೀಠೋಪಕರಣ ಹಾಗೂ ಪಠ್ಯ ಸಾಮಗ್ರಿಗಳನ್ನು ಸ್ಯಾನಿಟೈಸ್ ಮಾಡುವುದರ ಸಂಬಂಧ ಮಾಹಿತಿ ಪಡೆದರು.

20:38 November 17

ಕೋವಿಡ್ ಪರೀಕ್ಷೆ ಕಡ್ಡಾಯ

ಲಿಂಗಸುಗೂರು: ಕಾಲೇಜಿಗೆ ಹಾಜರಾಗಲು ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ. ಹೀಗಾಗಿ ಮೊದಲ ಹಂತವಾಗಿ ಉಪನ್ಯಾಸಕರು, ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಮಾಸ್ಕ್​ ಧರಿಸುವುದು, ಹ್ಯಾಂಡ್ ಸ್ಯಾನಿಟೈಸರ್ ಬಳಕೆ, ಗ್ರಂಥಾಲಯ, ಕ್ಯಾಂಟೀನ್ ಬಂದ್ ಮಾಡುವುದು, ಅಂತರ ಕಾಯ್ದುಕೊಳ್ಳುವಂತ ಕಟ್ಟಳೆ ವಿಧಿಸಲಾಗಿದೆ.

19:56 November 17

ಮುಂಜಾಗೃತಾ ಕ್ರಮವಾಗಿ ಸಕಲ ಸಿದ್ಧತೆ

ಮುಂಜಾಗೃತಾ ಕ್ರಮವಾಗಿ ಸಕಲ ಸಿದ್ಧತೆ

ಬಾಗೇಪಲ್ಲಿ: ಇಲ್ಲಿನ ಕಾಲೇಜುಗಳಲ್ಲಿ ಸೋಂಕು ಹರಡದಂತೆ ಮುಂಜಾಗೃತಾ ಕ್ರಮವಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಪತ್ರಕರ್ತರೊಂದಿಗೆ ಪ್ರತಿಕ್ರಿಯಿಸಿದ ಬಾಗೇಪಲ್ಲಿ ಪಟ್ಟಣದ ಪದವಿ ಕಾಲೇಜು ಪ್ರಾಂಶುಪಾಲರಾದ ನಾರಾಯಣ ವೈ ಮಾತನಾಡಿ ತರಗತಿ ಕೊಠಡಿಯ ಬೋಧನೆಯ ಜತೆಗೆ ಆನ್‌ಲೈನ್‌ ಹಾಗೂ ಆಫ್ ಲೈನ್‌ ಬೋಧನೆಗಳು ನಿರಂತರವಾಗಿರಲಿವೆ. ಸುರಕ್ಷತಾ ಕ್ರಮವಾಗಿ ಕಾಲೇಜು ಆವರಣವನ್ನು ಸ್ಯಾನಿಟೈಸ್‌ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

17:52 November 17

ತರಗತಿಗೆ ಬಾರದ ವಿದ್ಯಾರ್ಥಿಗಳು

ಕಾರವಾರ: ಇಂದಿನಿಂದ ಪದವಿ ತರಗತಿಗಳನ್ನು ತೆರೆಯಲು ಸರ್ಕಾರ ಅನುಮತಿಸಿದ್ದು, ಕಾರವಾರದಲ್ಲಿ ಕಾಲೇಜುಗಳು ಆರಂಭವಾಗಿದ್ದರೂ ಸಹ ವಿದ್ಯಾರ್ಥಿಗಳು ಕಾಲೇಜಿನತ್ತ ಮುಖಮಾಡದಿರುವುದು ಕಂಡುಬಂದಿದೆ.

ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಪ್ರಾಯೋಗಿಕವಾಗಿ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಅದರಂತೆ ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿ ಪ್ರತಿಯೊಬ್ಬ ವಿದ್ಯಾರ್ಥಿಯ ಕೋವಿಡ್ ಪ್ರಮಾಣಪತ್ರವನ್ನು ಪರಿಶೀಲಿಸಿ ತರಗತಿಗಳಿಗೆ ಹಾಜರಾಗಲು ವ್ಯವಸ್ಥೆ ಮಾಡಲಾಗಿತ್ತು. ಆದ್ರೆ ಕೆಲವೇ ಕೆಲವು ವಿದ್ಯಾರ್ಥಿಗಳು ಮಾತ್ರ ಕಾಲೇಜುಗಳಿಗೆ ಆಗಮಿಸಿದ್ದು ಬಹುತೇಕ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. 

16:47 November 17

ವಿದ್ಯಾರ್ಥಿಗಳಿಗೆ ಹೂ, ಚಾಕಲೇಟ್ ನೀಡಿ ಸ್ವಾಗತ

ಬಾಗಲಕೋಟೆ:  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿ ಕಾಲೇಜಿಗೆ ಬರಮಾಡಿಕೊಳ್ಳಲಾಯಿತು.  

ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಹೂ, ಚಾಕಲೇಟ್ ನೀಡಿ ಸ್ವಾಗತಿಸಿದರು. 10 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜ್​ಗೆ ಆಗಮಿಸಿದ ಹಿನ್ನೆಲೆ,ಚಪ್ಪಾಳೆ ತಟ್ಟಿ ಸಿಬ್ಬಂದಿ , ಆಡಳಿತ ಮಂಡಳಿಯವರು ಬರಮಾಡಿಕೊಂಡರು. 

16:03 November 17

ಕೋವಿಡ್ ವರದಿ, ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ: ಪ್ರಾಂಶುಪಾಲ ಹರೀಶ್

ಕೋವಿಡ್ ವರದಿ, ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ

ಸಕಲೇಶಪುರ: ಕಾಲೇಜುಗಳಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಹರೀಶ್ ಅವರು ಹೇಳಿದ್ದಾರೆ.  

ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ಕೋವಿಡ್ -19 ಆರ್ ಟಿ ಪಿ ಸಿ ಆರ್ ನ ನೆಗೆಟಿವ್ ವರದಿ ಮತ್ತು ಕಾಲೇಜಿಗೆ ಬರಲು ಪೋಷಕರ ಒಪ್ಪಿಗೆಯ ಪತ್ರ  ತರಬೇಕು ಎಂದು ಹೇಳಿದರು.  ತಾಲೂಕಿನ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಗಿದೆ. ಪ್ರಸಕ್ತ ವರ್ಷ ಬಿಎ, ಬಿಕಾಂ, ಬಿಬಿಎ ಯ ಮೂರು ವಿಭಾಗಗಳಿಂದ 445 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಾಲೇಜಿನಲ್ಲಿ ಉತ್ತಮವಾದ ಮೂಲಸೌಕರ್ಯಗಳ ಇರುವುದರಿಂದ ಪ್ರತಿ ವರ್ಷವೂ ದಾಖಲಾತಿ ಪ್ರಮಾಣದಲ್ಲಿ ಗಣನೀಯ ಏರಿಕೆ ಯಾಗುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.  

15:29 November 17

ಕಾಲೇಜಿನತ್ತ ಮುಖ ಮಾಡದ ವಿದ್ಯಾರ್ಥಿಗಳು

ಕಾಲೇಜಿನತ್ತ ಮುಖ ಮಾಡದ ವಿದ್ಯಾರ್ಥಿಗಳು

ನವಲಗುಂದ: ಕಳೆದು ಏಳು ತಿಂಗಳುಗಳಿಂದ ಮುಚ್ಚಿದ್ದ ಕಾಲೇಜುಗಳು ಆರಂಭವಾಗಿದ್ದು, ನವಲಗುಂದದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಆರಂಭವಾದರೂ ಸಹ ಇತ್ತ ಮುಖ ಮಾಡಿಲ್ಲ.  

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಕೊರೊನಾ ಮಾರ್ಗಸೂಚಿಯಂತೆ ಸಿದ್ಧತೆ ಮಾಡಿಕೊಂಡಿದ್ದು, ಕಾಲೇಜಿನ ಆವರಣ ಮತ್ತು ತರಗತಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಈ ಹಿನ್ನೆಲೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳನ್ನು ನಡೆಸಲು ಅವಕಾಶ ನೀಡಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಸಂಜೊತಾ ಶಿರಸಂಗಿ ತಿಳಿಸಿದ್ದಾರೆ. 

15:02 November 17

ವಿದ್ಯಾರ್ಥಿಗಳಿಂದ ಸರಸ್ವತಿಗೆ ಪೂಜೆ

ವಿದ್ಯಾರ್ಥಿಗಳಿಂದ ಸರಸ್ವತಿಗೆ ಪೂಜೆ

ವಿಜಯಪುರ: ಕೊರೊನಾ ಭೀತಿಯಿಂದ ಬಂದ್ ಆಗಿದ್ದ ಕಾಲೇಜುಗಳು ಇಂದಿನಿಂದ ಪುನರಾರಂಭಗೊಳ್ಳುತ್ತಿರುವ ಬೆನ್ನಲ್ಲೇ  ಎಬಿವಿಪಿ ಸಂಘಟನೆ ಕಾರ್ಯಕರ್ತರು ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಗರದ ಕೆಸಿಪಿ ಪದವಿ ಕಾಲೇಜಿನಲ್ಲಿ ಎಬಿವಿಪಿ ಸಂಘಟನೆ ಕಾರ್ಯಕರ್ತರು, ಸರಸ್ವತಿ ಭಾವಚಿತ್ರಕ್ಕೆ ಪೂಜೆ ವಿಶೇಷ ಪೂಜೆ ಸಲ್ಲಿಸ ವಿದ್ಯಾರ್ಥಿಗಳಲ್ಲಿರುವ ಕೊರೊನಾ ಭಯ ದೂರು ಮಾಡುವಂತೆ ಪ್ರಾರ್ಥಿಸಿದರು.

14:58 November 17

ಕೊರೊನಾ ಟೆಸ್ಟ್​ ಮಾಡಿಸಿಕೊಂಡು ಬಂದ ಓರ್ವ ವಿದ್ಯಾರ್ಥಿ

ಕೊರೊನಾ ಟೆಸ್ಟ್​ ಮಾಡಿಸಿಕೊಂಡು ಬಂದ ಓರ್ವ ವಿದ್ಯಾರ್ಥಿ

ಕುಷ್ಟಗಿ: ಕಾಲೇಜಿಗೆ ಓರ್ವ ವಿದ್ಯಾರ್ಥಿ ಹಾಜರಾದರೂ ಕೂಡ ಟೆಸ್ಟ್ ಕಡ್ಡಾಯ ಹಿನ್ನೆಲೆ ಹಾಗೂ  ಪಾಲಕರ ಒಪ್ಪಿಗೆ ಪತ್ರ ಇಲ್ಲದ ಕಾರಣ ವಾಪಸ್ಸಾಗಬೇಕಾಯಿತು.  ಈ ಕುರಿತು ಪ್ರಾಚಾರ್ಯ ಬಿ.ಎಂ.ಕಂಬಳಿ ಮಾಹಿತಿ ನೀಡಿ, ಕಾಲೇಜಿನಲ್ಲಿ ಕೋವಿಡ್ ಮಾರ್ಗಸೂಚಿಯನ್ವಯ ಕ್ರಮ ಕೈಗೊಳ್ಳಲಾಗಿದೆ. ಕಾಲೇಜು ಬೋಧಕರು, ಬೋದಕೇತರ ಸಿಬ್ಬಂದಿ ಕೋವಿಡ್ ಆರ್ ಟಿ ಪಿಸಿಅರ್ ಟೆಸ್ಟ್ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆ ಕ್ರಮವಹಿಸಿದೆ ಎಂದರು.

ಕಾಲೇಜಿನಲ್ಲಿ 257 ಅಂತಿಮ ಬಿಎ ವ್ಯಾಸಾಂಗದಲ್ಲಿ ಶೇ.50 ರಷ್ಟು ಆಫ್ ಲೈನ್ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಹಾಜರಾಗುವ ವಿದ್ಯಾರ್ಥಿ ಕೋವಿಡ್ ಟೆಸ್ಟ್, ಪಾಲಕರ ಒಪ್ಪಿಗೆ ಪತ್ರ ಕಡ್ಡಾಯವಾಗಿದೆ ಎಂದರು.

13:25 November 17

ಬೆಳಗಾವಿಯಲ್ಲಿ ಸಿಬ್ಬಂದಿಗೆ ಕೊರೊನಾ ಪರೀಕ್ಷೆ

ಬೆಳಗಾವಿಯಲ್ಲಿ ಸಿಬ್ಬಂದಿಗೆ ಕೊರೊನಾ ಪರೀಕ್ಷೆ

ಬೆಳಗಾವಿ:ಕಾಲೇಜು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಜಿಲ್ಲಾ ಆರೋಗ್ಯ ಇಲಾಖೆಯಿಂದ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ಡಿಗ್ರಿ ಕಾಲೇಜುಗಳಲ್ಲಿ ಸಿಬ್ಬಂದಿಗೆ ಕೊರೊನಾ ತಪಾಸಣೆ ಮಾಡಲಾಗುತ್ತಿದೆ.

13:25 November 17

ಚಿಕ್ಕಮಗಳೂರಿನಲ್ಲಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಮತ್ತೆ ವಾಪಸ್

ಚಿಕ್ಕಮಗಳೂರಿನಲ್ಲಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಮತ್ತೆ ವಾಪಸ್

ಚಿಕ್ಕಮಗಳೂರು: ಎಂಟು ತಿಂಗಳ ಬಳಿಕ ಚಿಕ್ಕಮಗಳೂರಿನಲ್ಲಿ ಇಂದು ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಮತ್ತೆ ವಾಪಸ್ ಹೋಗುತ್ತಿದ್ದಾರೆ. ಚಿಕ್ಕಮಗಳೂರಿನ ಐಡಿಎಸ್​ಜಿ ಕಾಲೇಜಿನ ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ಮಾಡಿಸದ ಕಾರಣ ಕಾಲೇಜಿನಿಂದ ಮಾಹಿತಿ ಪಡೆದು ವಾಪಸ್ ಹೋದರು. 

13:04 November 17

ಯಾದಗಿರಿಯಲ್ಲಿ ಕಾಲೇಜುಗಳ ಆರಂಭಕ್ಕೆ ಕೋವಿಡ್​ ವರದಿ ವಿಘ್ನ!

ಯಾದಗಿರಿಯಲ್ಲಿ ಕಾಲೇಜುಗಳ ಆರಂಭಕ್ಕೆ ಕೋವಿಡ್​ ವರದಿ ವಿಘ್ನ

ಯಾದಗಿರಿ:ಕೋವಿಡ್​ ನಿಯಮದಂತೆ ರಾಜ್ಯಾದ್ಯಂತ ಸರಕಾರ ಇಂದಿನಿಂದ ಕಾಲೇಜು ಆರಂಭಿಸಲು ಸೂಚನೆ ನೀಡಿದೆ. ಯಾದಗಿರಿಯಲ್ಲಿ ಮಾತ್ರ ಕಾಲೇಜುಗಳ ಆರಂಭಕ್ಕೆ ಕೊವೀಡ್ ವರದಿ ವಿಘ್ನ ತಂದಿದೆ. ಆರೋಗ್ಯ ಇಲಾಖೆ ಕೊವೀಡ್ ವರದಿ ನೀಡದೇ ನಿರ್ಲಕ್ಷ್ಯ ಮಾಡಿದ್ದಕ್ಕೆ ಯಾದಗಿರಿ ಜಿಲ್ಲೆಯಲ್ಲಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. 

13:00 November 17

ಗಣಿನಾಡಿನಲ್ಲಿ ಕಾಲೇಜು ಆರಂಭ: ಆರ್​ಟಿಪಿಸಿಆರ್ ಟೆಸ್ಟ್ ಕಡ್ಡಾಯ

ಗಣಿನಾಡಿನಲ್ಲಿ ಕಾಲೇಜು ಆರಂಭ: ಆರ್​ಟಿಪಿಸಿಆರ್ ಟೆಸ್ಟ್ ಕಡ್ಡಾಯ

ಬಳ್ಳಾರಿ:ಇಂದಿನಿಂದ ಗಣಿನಾಡು ಬಳ್ಳಾರಿ ಜಿಲ್ಲಾದ್ಯಂತ ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳು ಶುರುವಾಗಿವೆ. ಕಾಲೇಜು ಆಡಳಿತ ಮಂಡಳಿಗಳು ಆರ್​ಟಿಪಿಸಿಆರ್ ಟೆಸ್ಟಿಂಗ್ ವರದಿ ಕಡ್ಡಾಯ ಮಾಡಿವೆ. ವಿದ್ಯಾರ್ಥಿಗಳು ಕ್ಲಾಸ್​ ಎಂಟ್ರಿಗೂ ಮುನ್ನ ಕೋವಿಡ್ ವರದಿ ಸಲ್ಲಸಬೇಕಾಗಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. 

12:31 November 17

ರಾಣೆಬೆನ್ನೂರು ಸರ್ಕಾರಿ ಕಾಲೇಜು ಆರಂಭ

ರಾಣೆಬೆನ್ನೂರು ಸರ್ಕಾರಿ ಕಾಲೇಜು ಆರಂಭ

ರಾಣೆಬೆನ್ನೂರ: ನಗರದ ಸರ್ಕಾರಿ ‌ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊರೊನಾ ಕ್ರಮಗಳನ್ನು ಅನುಸರಿಸಿ ತರಗತಿಗಳನ್ನು ಪ್ರಾರಂಭ ಮಾಡಲಾಗಿದೆ. ಸರ್ಕಾರಿ ಕಾಲೇಜು ಹೊರತು ಪಡಿಸಿ ಖಾಸಗಿ ಕಾಲೇಜು ಸಹ ಬಾಗಿಲು ತೆರೆದಿವೆ. ಆದರೆ, ವಿದ್ಯಾರ್ಥಿಗಳು ಮಾತ್ರ ಹಾಜರಾಗಲು ಹಿಂದೇಟು ಹಾಕಿದ್ದಾರೆ.

12:29 November 17

ವಿದ್ಯಾರ್ಥಿಗಳಿಗೆ ಭೌತಿಕ ಪಾಠವೇ ಉತ್ತಮ: ಉಪನ್ಯಾಸಕಿ ಡಾ.ಎಚ್‌. ಎಸ್ ಸುನಂದಾ

ವಿದ್ಯಾರ್ಥಿಗಳಿಗೆ ಭೌತಿಕ ಪಾಠವೇ ಉತ್ತಮ: ಉಪನ್ಯಾಸಕಿ ಡಾ.ಎಚ್‌. ಎಸ್ ಸುನಂದ

ಹಾಸನ:ಕೊರೋನಾ ಭಯದ ನಡುವೆ 8 ತಿಂಗಳ ಬಳಿಕ ಪ್ರಥಮ ಬಾರಿಗೆ ಪದವಿ, ಸ್ನಾತಕೋತ್ತರ ಕಾಲೇಜುಗಳು ಆರಂಭಗೊಂಡಿವೆ. ಹಾಸನದಲ್ಲಿ ಬಹುತೇಕ ಕಾಲೇಜುಗಳು ಆರಂಭಗೊಂಡಿದ್ದು, ನಗರದ ಎ.ವಿ. ಕಾಂತಮ್ಮ ಕಾಲೇಜೀನ ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದಿರುವ ಪತ್ರಗಳನ್ನು ಹಿಡಿದು ಕಾಲೇಜಿಗೆ ಹಾಜರಾದರು. ಕಾಲೇಜಿಗೆ ಬಾರದೇ ಇರುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಶಾಲೆಗಳಬ್ನು ನಡೆಸಲು ಆಡಳಿತ ಮಂಡಳಿ ಮುಂದಾಗಿದೆ‌. ಆದರೆ, ಆನ್‌ಲೈನ್‌ನಲ್ಲಿ ಪಾಠ ಕೇಳುವುದಕ್ಕಿಂತಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಭೌತಿಕವಾಗಿ ಪಾಠ ಕೇಳಿದರೆ ಉತ್ತಮ ಎಂದು ಉಪನ್ಯಾಸಕಿ ಡಾ.ಎಚ್‌. ಎಸ್. ಸುನಂದಾ ತಿಳಿಸಿದರು.

12:29 November 17

ಚಾಮರಾಜನಗರ ಕಾಲೇಜುಗಳಲ್ಲಿ ಶುರುವಾಯ್ತು ವಿದ್ಯಾರ್ಥಿಗಳ ಕಲರವ!

ಚಾಮರಾಜನಗರ ಕಾಲೇಜುಗಳಲ್ಲಿ ಶುರುವಾಯ್ತು ವಿದ್ಯಾರ್ಥಿಗಳ ಕಲರವ

ಚಾಮರಾಜನಗರ: ಬರೋಬ್ಬರಿ 8 ತಿಂಗಳಗಳ ಬಳಿಕ ಕಾಲೇಜು ಕ್ಯಾಂಪಸ್​ಗಳಲ್ಲಿ ವಿದ್ಯಾರ್ಥಿಗಳ ಕಲರವ ಆರಂಭವಾಗಿದ್ದು, ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 

12:28 November 17

ಧಾರವಾಡದಲ್ಲಿ ಕಾಲೇಜಿಗೆ ಬರಲು ಹಿಂದೇಟು ಹಾಕಿದ ವಿದ್ಯಾರ್ಥಿಗಳು

ಧಾರವಾಡದಲ್ಲಿ ಕಾಲೇಜಿಗೆ ಬರಲು ಹಿಂದೇಟು ಹಾಕಿದ ವಿದ್ಯಾರ್ಥಿಗಳು

ಧಾರವಾಡ:ಕೊರೊನಾ ವೈರಸ್ ಹಾವಳಿಯಿಂದ ಬಂದ್ ಆಗಿದ್ದ ಪದವಿ ಕಾಲೇಜುಗಳು ಇಂದಿನಿಂದ ಆರಂಭಕ್ಕೆ ರಾಜ್ಯ ಸರ್ಕಾರ ಆದೇಶ ನೀಡಿರುವುದು ಗೊತ್ತಿರುವ ವಿಚಾರ. ಆದ್ರೆ ಕಾಲೇಜುಗಳಿಗೆ ಆಗ‌ಮಿಸಲು ವಿದ್ಯಾರ್ಥಿ ಹಿಂದೇಟು ಹಾಕುತ್ತಿದ್ದಾರೆ.

12:26 November 17

ಕಲಬುರಗಿಯಲ್ಲಿ ಕಾಲೇಜುಗಳ ಕಡೆ ಮುಖ ಮಾಡದ ವಿದ್ಯಾರ್ಥಿಗಳು

ಕಲಬುರಗಿಯಲ್ಲಿ ಕಾಲೇಜುಗಳ ಕಡೆ ಮುಖ ಮಾಡದ ವಿದ್ಯಾರ್ಥಿಗಳು

ಕಲಬುರಗಿ:ರಾಜ್ಯ ಸರ್ಕಾರದ ಅನುಮತಿ ನಂತರ ಕಾಲೇಜುಗಳ ಪುನಾರಂಭವಾಗಿದೆ. ಇಂದಿನಿಂದ ಡಿಗ್ರಿ ಅಂತಿಮ ವರ್ಷ ಹಾಗೂ ಪಿಜಿ ತರಗತಿಗಳ ಪುನರಾರಂಭ ಕಾಲೇಜುಗಳ ಕಡೆ ವಿದ್ಯಾರ್ಥಿಗಳು ಮುಖಮಾಡಿಲ್ಲ.

12:26 November 17

ಬೆಳಗಾವಿಯಲ್ಲಿ ಕಾಲೇಜ್​ ಆರಂಭ... ಉಚಿತ ಕೋವಿಡ್​ ಟೆಸ್ಟ್​ಗೆ ಆಗ್ರಹಿಸಿದ ಬಡ ವಿದ್ಯಾರ್ಥಿಗಳು!

ಬೆಳಗಾವಿಯಲ್ಲಿ ಉಚಿತ ಕೋವಿಡ್​ ಟೆಸ್ಟ್​ಗೆ ಆಗ್ರಹಿಸಿದ ಬಡ ವಿದ್ಯಾರ್ಥಿಗಳು

ಬೆಳಗಾವಿ:ಕೊರೊನಾ ವೈರಸ್ ಪಿಡುಗಿನ ಹಿನ್ನೆಲೆ ಕಳೆದ ಏಂಟು ತಿಂಗಳಿನಿಂದ ಬಂದ್ ಆಗಿದ್ದ ಕಾಲೇಜಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ರಾಜ್ಯದಲ್ಲಿ ಇಂದಿನಿಂದ ಕಾಲೇಜುಗಳು ಆರಂಭಗೊಂಡಿವೆ. ಆದರೆ, ವಿದ್ಯಾರ್ಥಿಗಳು ‌ಮಾತ್ರ ಕಾಲೇಜಿನತ್ತ ಸುಳಿಯದಿರುವ ಪರಿಣಾಮ ಜಿಲ್ಲೆಯ ಬಹುತೇಕ ಕಾಲೇಜುಗಳಲ್ಲಿ ಬಿಕೋ ಎನ್ನುತ್ತಿವೆ. ಇನ್ನು ಕಾಲೇಜುಗಳ ಪ್ರವೇಶಕ್ಕೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿದೆ. ಹೀಗಾಗಿ ಕೆಲ ಬಡ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಕೋವಿಡ್ ಟೆಸ್ಟ್ ಇದ್ದರಷ್ಟೇ ಕಾಲೇಜಿನಲ್ಲಿ ಪ್ರವೇಶ ನೀಡಲಾಗುತ್ತಿದೆ‌. ಕೋವಿಡ್ ಟೆಸ್ಟ್​ಗೆ ಸಾವಿರಾರು ರೂಪಾಯಿ ಹಣ ಕೇಳುತ್ತಿದ್ದಾರೆ.ಇದರಿಂದ ಬಡ ವಿದ್ಯಾರ್ಥಿಗಳೆಲ್ಲರಿಗೂ ಉಚಿತ ಕೋವಿಡ್ ಟೆಸ್ಟ್ ಮಾಡಬೇಕೆಂದು ಆಗ್ರಹಿಸಿದ್ದಾರೆ.

12:23 November 17

ಕಾಲೇಜಿಗೆ ಬರಲು ಮನಸ್ಸು ಮಾಡದ ‘ಮೈಸೂರು’ ಮಹಾರಾಣಿಯರು!

ಕಾಲೇಜಿಗೆ ಬರಲು ಮನಸು ಮಾಡದ ಮೈಸೂರು ಮಹಾರಾಣಿಯರು

ಮೈಸೂರು: ಇಂದಿನಿಂದ ಪದವಿ ಮಟ್ಟದ ಕಾಲೇಜುಗಳು ಆರಂಭವಾಗಿವೆ. ನಿರೀಕ್ಷೆ ಮಟ್ಟದಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿಲ್ಲ. ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ 2,800 ವಿದ್ಯಾರ್ಥಿಯರ ಪೈಕಿ, 700 ಮಂದಿ ಅಂತಿಮ ವರ್ಷದ ವಿದ್ಯಾರ್ಥಿಗಳಿದ್ದಾರೆ. ಕೊರೊನಾ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂಬ ಭಯದಿಂದಲೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.ಇಂದು ಕೇವಲ 20 ವಿದ್ಯಾರ್ಥಿಗಳು ಮಾತ್ರ ಕಾಲೇಜಿಗೆ ಆಗಮಿಸಿದ್ದಾರೆ. 

12:20 November 17

ಕೊಪ್ಪಳದಲ್ಲಿ ಕೊರೊನಾ ಹಾವಳಿ ಮಧ್ಯೆ ಓಪನ್​ ಆದ ಕಾಲೇಜುಗಳು

ಕೊಪ್ಪಳದಲ್ಲಿ ಕೊರೊನಾ ಹಾವಳಿ ಮಧ್ಯೆ ಓಪನ್​ ಆದ ಕಾಲೇಜುಗಳು

ಕೊಪ್ಪಳ:ಕೊರೊನಾ ಭೀತಿ ಹಿನ್ನೆಲೆಯಲ್ಲಿ ಬಾಗಿಲು ಹಾಕಿಕೊಂಡಿದ್ದ ಶಿಕ್ಷಣ ಸಂಸ್ಥೆಗಳು ಈಗ ಒಂದೊಂದಾಗಿ ಓಪನ್ ಆಗುತ್ತಿವೆ. ಇಂದಿನಿಂದ ಪದವಿ ಕಾಲೇಜು ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆ ಕೊಪ್ಪಳದಲ್ಲಿಯೂ ಪದವಿ ಕಾಲೇಜುಗಳು ಇಂದಿನಿಂದ ಶುರುವಾಗಿವೆ. ಆದರೆ ಆರಂಭದ ದಿನವೇ ವಿದ್ಯಾರ್ಥಿಗಳು ಕಾಲೇಜಿನತ್ತ ಸುಳಿದಿಲ್ಲ.

11:48 November 17

ಚಿತ್ರದುರ್ಗದಲ್ಲಿ ಇಂದಿನಿಂದ ಕಾಲೇಜುಗಳ ಪುನಾರಂಭ, ಬಾರದ ವಿದ್ಯಾರ್ಥಿಗಳು

ಚಿತ್ರದುರ್ಗದಲ್ಲಿ ಇಂದಿನಿಂದ ಕಾಲೇಜುಗಳ ಪುನರಾರಂಭ, ಬಾರದ ವಿದ್ಯಾರ್ಥಿಗಳು

ಚಿತ್ರದುರ್ಗ:ಇಂದಿನಿಂದ ಕಾಲೇಜುಗಳ ಪುನರಾರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದೆ. ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಆರಂಭಕ್ಕೆ ಸಿಬ್ಬಂದಿ ಭರಪೂರ ಸಿದ್ದತೆ ನಡೆಸಿದ್ದರು ಮಕ್ಕಳು ಆಗಮಿಸಲೇ ಇಲ್ಲ. ವಿದ್ಯಾರ್ಥಿಗಳ ಆಗಮನಕ್ಕೆ ಕಾಲೇಜಿನ ಮುಂಭಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಾಕ್ಸ್, ಥರ್ಮಲ್ ಸ್ಕ್ರೀನಿಂಗ್, ಒಂದು ಡೆಸ್ಕ್​ಗೆ ಇಬ್ಬರು ವಿದ್ಯಾರ್ಥಿಗಳು ಕೂರಿಸುವ ವ್ಯವಸ್ಥೆಯನ್ನು ಕಾಲೇಜಿನ ಸಿಬ್ಬಂದಿ ಮಾಡಿದ್ದಾರೆ. ಅದ್ರೇ ಕಾಲೇಜು ಓಪನ್ ಆದ್ರೂ ವಿಧ್ಯಾರ್ಥಿಗಳು ಕಾಲೇಜಿನತ್ತ ಬಾರದೇ ಇರುವುದರಿಂದ ಸಿದ್ಧತೆ ವ್ಯರ್ಥವಾದಂತಾಗಿದೆ.  

11:44 November 17

ಮಂಗಳೂರಿನಲ್ಲಿ ಕಾಲೇಜುಗಳು ಆರಂಭ

ಮಂಗಳೂರಿನಲ್ಲಿ ಕಾಲೇಜುಗಳು ಆರಂಭ

ಮಂಗಳೂರು: ಕೋವಿಡ್ ಹಿನ್ನೆಲೆ ಸ್ಥಗಿತಗೊಂಡಿರುವ ಮಂಗಳೂರು ವಿವಿ ವ್ಯಾಪ್ತಿಯಡಿಯಲ್ಲಿನ ಎಲ್ಲ ಕಾಲೇಜುಗಳ ಸ್ನಾತಕ, ಸ್ನಾತಕೋತ್ತರ ಅಂತಿಮ ಪದವಿ ತರಗತಿಗಳು ಕೋವಿಡ್ ನಿಯಮದಂತೆ ಇಂದಿನಿಂದ ಆರಂಭವಾಗಿದೆ. ನಗರದ ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಸರಕಾರದ ಎಸ್ಒಪಿ ನಿಯಮಗಳನ್ನು ಪಾಲಿಸಿ ತರಗತಿಗಳನ್ನು ಆರಂಭಿಸಲಾಗಿದೆ‌. ಕಡ್ಡಾಯವಾಗಿ ಕೋವಿಡ್ ತಪಾಸಣೆಗೊಳಗಾಗಿ ನೆಗೆಟಿವ್ ಬಂದಿರುವ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಮಾತ್ರ ತರಗತಿಗೆ ಹಾಜರಾಗಲು ಅನುಮತಿ ಇದೆ. ಉಪನ್ಯಾಸಕರು ಮಾಸ್ಕ್, ಫೇಸ್ ಶೀಲ್ಡ್ ಮಾಸ್ಕ್ ಗಳನ್ನು ಧರಿಸಿ ಬೋಧನೆ ಮಾಡುತ್ತಿದ್ದಾರೆ.

11:38 November 17

ಚಿಕ್ಕೋಡಿ ಕಾಲೇಜುಗಳು ರೀ ಓಪನ್​

ಚಿಕ್ಕೋಡಿಯಲ್ಲಿ ಕಾಲೇಜುಗಳು ಆರಂಭ...

ಚಿಕ್ಕೋಡಿ (ಬೆಳಗಾವಿ):ಇಂದಿನಿಂದ ಪದವಿ ಕಾಲೇಜಗಳು ಪುನಾರಾಂಭ ಹಿನ್ನೆಲೆಯಲ್ಲಿ ತರಗತಿ ಆರಂಭಿಸಲು ಕಾಲೇಜುಗಳಿಂದ ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಸ್ಯಾನಟೈಸೇಷನ್, ಸೋಷಿಯಲ್ ಡಿಸ್ಟನ್ಸಿಂಗ್ ಸೇರಿದಂತೆ ಕಾಲೇಜುಗಳಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ‌. ಕಾಲೇಜುಗಳು ಆರಂಭವಾದರೂ ಕಾಲೇಜುಗಳತ್ತ ಮುಖ ಮಾಡದ ಚಿಕ್ಕೋಡಿ ಉಪವಿಭಾಗದ ವಿದ್ಯಾರ್ಥಿಗಳು.

11:35 November 17

ರಾಯಚೂರಿನಲ್ಲಿ ವಿದ್ಯಾರ್ಥಿನಿ ಒಬ್ಬಳಿಗೇ ಪಾಠ ಮಾಡಿದ ಉಪನ್ಯಾಸಕ!

ರಾಯಚೂರಿನಲ್ಲಿ ಕಾಲೇಜುಗಳು ಆರಂಭ

ರಾಯಚೂರು:ಕೊರೊನಾ ಸೋಂಕಿನ ಭೀತಿ ನಡುವೆ ಇಂದಿನಿಂದ ರಾಯಚೂರು ಜಿಲ್ಲೆಯಲ್ಲಿ ಕಾಲೇಜುಗಳು ಪ್ರಾರಂಭಿಸಲಾಗಿದೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಇಂದು ಬಂದಿದ್ದ ಒಬ್ಬ ವಿದ್ಯಾರ್ಥಿನಿಗೆ ಉಪನ್ಯಾಸಕರು ತರಗತಿ ನಡೆಸಿದರು. ‘ಇಂದಿನಿಂದ ಕಾಲೇಜುಗಳು ಆರಂಭಗೊಂಡಿವೆ. ಇಂದು ಬೆರಳಣಿಕೆಯಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ. ಎರಡ್ಮೂರು ದಿನಗಳಲ್ಲಿ ವಿದ್ಯಾರ್ಥಿಗಳ ಬರುವ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ’ ಎಂದು ಕಾಲೇಜಿನ ಪ್ರಾಂಶುಪಾಲರಾದ ಮಲ್ಲನಗೌಡ ತಿಳಿಸಿದರು. 

11:29 November 17

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳ ಆಗಮನಕ್ಕಾಗಿ ಕಾದು ಕುಳಿತ ಉಪನ್ಯಾಸಕರು!

ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳಿಲ್ಲದೆ ಬಿಕೋ ಎನ್ನುತ್ತಿರುವ ಕ್ಲಾಸ್​ಗಳು

ಹುಬ್ಬಳ್ಳಿ: 8 ತಿಂಗಳ ನಂತರ ಕಾಲೇಜುಗಳು ಆರಂಭವಾಗಿವೆ. ಆದ್ರೂ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬಹುತೇಕ ಕಾಲೇಜಗಳತ್ತ ವಿದ್ಯಾರ್ಥಿಗಳು ಮುಖ ಮಾಡಿಲ್ಲ. ಕೊರೊನಾ ಭೀತಿ ಹಿನ್ನೆಲೆ ಕೊರೊನಾ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಅದರ ಜೊತೆಗೆ 3 ದಿನಗಳಿಂದ ಹಬ್ಬದಲ್ಲಿ ವಿದ್ಯಾರ್ಥಿಗಳು ತೊಡಗಿದ್ದರಿಂದ ಕಾಲೇಜಿಗೆ ಬರುಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕಾಲೇಜುಗಳ ಆವರಣಗಳು ಬಿಕೋ ಎನ್ನುತ್ತಿವೆ. ಇನ್ನು ವಿದ್ಯಾರ್ಥಿಗಳ ಆಗಮನಕ್ಕಾಗಿ ಕಾಲೇಜು ಸಿಬ್ಬಂದಿ ಕಾದು ಕುಳಿತಿದ್ದರು.‌

11:24 November 17

ಮೈಸೂರಿನಲ್ಲಿ ಕೋವಿಡ್​ ನಿಯಮ ಪಾಲಿಸಿ ಕಾಲೇಜಿನೊಳಗೆ ನಡೆದ ವಿದ್ಯಾರ್ಥಿಗಳು

ಮೈಸೂರಿನಲ್ಲಿ ಕೋವಿಡ್​ ನಿಯಮ ಪಾಲಿಸಿ ಕಾಲೇಜಿನೊಳಗೆ ನಡೆದ ವಿದ್ಯಾರ್ಥಿಗಳು

ಮೈಸೂರು: ಇಂದು ರಾಜ್ಯಾದ್ಯಂತ ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಾಲೇಜು ಪುನರ್ ಆರಂಭಗೊಂಡಿದೆ. ನಗರದ ಮಹಾರಾಣಿ ಪದವಿ ಕಾಲೇಜಿನಲ್ಲಿ ಕೋವಿಡ್ ನಿಯಮದೊಂದಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಕಾಲೇಜು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು ಸಾಮಾಜಿಕ ಅಂತರ, ಮಾಸ್ಕ್ ಧರಿಸಿ ಮತ್ತು ಸ್ಯಾನಿಟೈಸರ್ ಬಳಸಿಕೊಂಡು ಕಾಲೇಜಿನೊಳಗೆ ಪ್ರವೇಶಿಸುತ್ತಿದ್ದಾರೆ. 

11:13 November 17

ಕೋಲಾರ ಜಿಲ್ಲಾಧಿಕಾರಿಯಿಂದ ಮಹಿಳಾ ಕಾಲೇಜ್​ ಪರಿಶೀಲನೆ

ಕೋಲಾರದ ಮಹಿಳಾ ಕಾಲೇಜಿಗೆ ಆಗಮಿಸಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಸತ್ಯಭಾಮ

ಕೋಲಾರ: ರಾಜ್ಯಾದ್ಯಂತ ಅಂತಿಮ ಪದವಿ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಾಲೇಜು ಪ್ರಾರಂಭಿಸಬೇಕೆಂಬ ಸರ್ಕಾರದ ಸೂಚನೆಯಂತೆ ಕೋಲಾರದಲ್ಲೂ ಕಾಲೇಜುಗಳು ಪ್ರಾರಂಭವಾಗಿವೆ. ಅದರಂತೆ ಇಂದು ಪದವಿ ವಿದ್ಯಾರ್ಥಿಗಳ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಕೊಠಡಿಗಳನ್ನ ಕಾಲೇಜು ಸಿಬ್ಬಂದಿ ಸ್ವಚ್ಚತೆಗೊಳಿಸುತ್ತಿರುವುದು ಕಂಡು ಬಂತು. ಇನ್ನು ಜಿಲ್ಲಾದ್ಯಂತ ಕಾಲೇಜುಗಳು ತೆರೆದಿದ್ದು, ಪ್ರತಿ ಕೊಠಡಿ ಸಹ ಸ್ವಚ್ಚತೆ ಮಾಡಿ ಸ್ಯಾನಿಟೈಸ್​ ಮಾಡಲಾಗಿದೆ. ಅಲ್ಲದೇ ರಜೆ ಮೂಡ್​​​ನಿಂದ ಹೊರಬಾರದ ವಿದ್ಯಾರ್ಥಿಗಳು ಕ್ಲಾಸ್​ಗೆ ಬರಲು ನಿರಾಸಕ್ತಿ ವಹಿಸಿದ್ದು, ವಿದ್ಯಾರ್ಥಿಗಳು ಒಬ್ಬರಾಗಿಯೇ ಕಾಲೇಜುಗಳ ಕಡೆ ಮುಖ ಮಾಡುತ್ತಿದ್ದಾರೆ.

11:05 November 17

ಹಾವೇರಿಯಲ್ಲಿ ಕಾಲೇಜಿನ ಹತ್ತಿರವೂ ಸುಳಿಯದ ವಿದ್ಯಾರ್ಥಿಗಳು!

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೃಶ್ಯ

ಹಾವೇರಿ:ರಾಜ್ಯಾದ್ಯಂತ ಇಂದಿನಿಂದ ಕಾಲೇಜುಗಳು ಆರಂಭವಾಗಿವೆ. ಆದ್ರೆ ಹಾವೇರಿಯಲ್ಲಿ ವಿದ್ಯಾರ್ಥಿಗಳು ಕಾಲೇಜಿನತ್ತ ಸುಳಿಯುತ್ತಿಲ್ಲ. ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಠಡಿಗಳಿಗೆ ಸ್ಯಾನಿಟೈಸ್ ಮಾಡಿಸಿ, ಸ್ಯಾನಿಟೈಸರ್ ಇಟ್ಟರೂ ಸಹ ವಿದ್ಯಾರ್ಥಿಗಳು ಕಾಲೇಜ್​ಗೆ ಆಗಮಿಸುತ್ತಿಲ್ಲ. ಪದವಿ ಮತ್ತು ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿ 890 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶೇಕಡಾ ಐವತ್ತರಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಮಾಹಿತಿ ನೀಡಿದ್ದರು. ಆದರೂ ಸಹ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿಲ್ಲ. ವಿದ್ಯಾರ್ಥಿಗಳು ಬರುತ್ತಾರೆಂದು ಉಪನ್ಯಾಸಕರು ಮತ್ತು ಸಿಬ್ಬಂದಿ ಕಾಯುತ್ತಿದ್ದಾರೆ. 

09:47 November 17

ನ್ಯಾಷನಲ್ ಕಾಲೇಜಿನಲ್ಲಿ ತರಗತಿಗಳು ನಾಳೆಯಿಂದ ಆರಂಭ

ನಾಳೆಯಿಂದ ನ್ಯಾಷನಲ್ ಕಾಲೇಜ್​ ಆರಂಭ

ಬೆಂಗಳೂರು:ರಾಜ್ಯಾದ್ಯಂತ ಇಂದು ಪದವಿ ಕಾಲೇಜುಗಳು ಆರಂಭವಾಗಿವೆ. ಇತ್ತ ನಗರದ ನ್ಯಾಷನಲ್ ಕಾಲೇಜಿನ ಆಡಳಿತ ಮಂಡಳಿ ಕಾಲೇಜು ಆರಂಭ ಮಾಡಿಲ್ಲ. ಅತ್ತ ದೀಪಾವಳಿ ಹಬ್ಬದ ನಂತರ ಕಾಲೇಜು ಆರಂಭಕ್ಕೆ ಬೇಸರ ವ್ಯಕ್ತಪಡಿಸಿದೆ. ಇತ್ತ ಹಬ್ಬ ಮುಗಿದು ಮುಂದಿನ ವಾರ ಕಾಲೇಜು ಆರಂಭಿಸಿದ್ದರೆ ಏನು ಸಮಸ್ಯೆ ಆಗುತ್ತಿತ್ತು? ಅಂತ ಸರ್ಕಾರದ ನಿರ್ಧಾರಕ್ಕೆ ಪೋಷಕರಿಂದ ಅಸಮಾಧಾನ ವ್ಯಕ್ತವಾಗಿದೆ. ಇಂದಿನ ಬೆಳವಣಿಗೆ ನೋಡಿಕೊಂಡು ನಂತರ ಕಾಲೇಜು ಆರಂಭಿಸಲು ಕೆಲ‌ ಕಾಲೇಜುಗಳು ನಿರ್ಧಾರ ಮಾಡಿವೆ.  

Last Updated : Nov 17, 2020, 8:54 PM IST

ABOUT THE AUTHOR

...view details