ಕರ್ನಾಟಕ

karnataka

ETV Bharat / state

ಮೋಹನ್ ಪ್ರಕಾಶ್​ರಲ್ಲಿ ಹೆಚ್ಚಿನ ಸ್ಥಾನದ ಬೇಡಿಕೆ ಇಟ್ಟ ಲಿಂಗಾಯತ ನಾಯಕರು

ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್​ರನ್ನು ಭೇಟಿ ಮಾಡಿದ ರಾಜ್ಯ ಲಿಂಗಾಯತ ಸಮುದಾಯದ ಕಾಂಗ್ರೆಸ್ ಮುಖಂಡರು ಹೆಚ್ಚಿನ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.

By

Published : Feb 16, 2023, 1:10 PM IST

Updated : Feb 16, 2023, 2:27 PM IST

Congress
ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್​ರನ್ನು ಭೇಟಿ ಮಾಡಿದ ರಾಜ್ಯ ಲಿಂಗಾಯತ ಸಮುದಾಯದ ಕಾಂಗ್ರೆಸ್ ಮುಖಂಡರು

ಬೆಂಗಳೂರು: ರಾಜ್ಯ ಲಿಂಗಾಯತ ಸಮುದಾಯದ ಕಾಂಗ್ರೆಸ್ ಮುಖಂಡರು ಇಂದು ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್​ರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ. ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್ ಅವರನ್ನು ಇಂದು ಭೇಟಿ ಮಾಡಿದ ಲಿಂಗಾಯತ ಮುಖಂಡರು ಸಮುದಾಯಕ್ಕೆ ಹೆಚ್ಚಿನ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.

ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರನ್ನು ಭೇಟಿಯಾದ ನಿಯೋಗದಲ್ಲಿ ಸಮುದಾಯದ ಮುಖಂಡರಾದ ಶಾಮನೂರು ಶಿವಶಂಕರಪ್ಪ, ಎಂಬಿ ಪಾಟೀಲ್, ಈಶ್ವರ ಖಂಡ್ರೆ, ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರು, ಅಲ್ಲಮ್ ವೀರಭದ್ರಪ್ಪ ಇದ್ದರು. 70 ಸ್ಥಾನಗಳಿಗೆ ಬೇಡಿಕೆ ಇಟ್ಟಿರುವ ಕಾಂಗ್ರೆಸ್ ಲಿಂಗಾಯತ ಮುಖಂಡರು ಹೆಚ್ಚು ಟಿಕೆಟ್ ಪಡೆದು, ಸಮುದಾಯದ ಶಾಸಕರು ಹೆಚ್ಚು ಗೆದ್ದರೆ ಸಿಎಂ ಸ್ಥಾನದ ಬೇಡಿಕೆ ಇಡುವ ಲೆಕ್ಕಾಚಾರದಲ್ಲಿ ಇದ್ದಾರೆ.

ಬಿಜೆಪಿ ಭರವಸೆಗೆ ಮಸಿ ಬಳಿದ ಕಾಂಗ್ರೆಸ್ ಕಾರ್ಯಕರ್ತರು

ಬಿಜೆಪಿ ಭರವಸೆಗೆ ಮಸಿ ಬಳಿದ ಕಾಂಗ್ರೆಸ್:ಚುನಾವಣಾ ಪ್ರಚಾರಕ್ಕೆ ರಾಜರಾಜೇಶ್ವರಿನಗರ ಕ್ಷೇತ್ರದೆಲ್ಲೆಡೆ "ಬಿಜೆಪಿಯೇ ಭರವಸೆ" ಎಂಬ ಘೋಷಣೆಯಡಿ ಬರೆಸಿದ್ದ ಪೇಂಟಿಂಗ್ ಗೆ 40% ಎಂದು ರಾಜರಾಜೇಶ್ವರಿನಗರ ಕಾಂಗ್ರೆಸ್‌ ಕಾರ್ಯಕರ್ತರು ಬರೆದಿದ್ದಾರೆ. ಸಚಿವ ಮುನಿರತ್ನಗೆ ಇದು ಇರಿಸು ಮುರಿಸು ತಂದಿದೆ.ಇನ್ನು ಬಿಜೆಪಿ ಜಾಹಿರಾತಿನ ಮೇಲೆ ಕಣ್ಣಿಗೆ ರಾಚುತ್ತಿರುವ 40% ಬರಹಗಳು, ಇದು ರಾಜರಾಜೇಶ್ವರಿನಗರ ಕಾಂಗ್ರೆಸ್ ಕಾರ್ಯಕರ್ತರ ವಿನೂತನ ಪ್ರತಿಭಟನೆ ಎಂದು ಹೇಳಿಕೊಳ್ಳಲಾಗಿದೆ.

ಬೆಂಗಳೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಖಾಲಿ ಗೋಡೆಗಳ ಮೇಲೆ ಬಿಜೆಪಿ ಸರ್ಕಾರ ಈ ರೀತಿಯ ಜಾಹಿರಾತು ಫಲಕಗಳನ್ನು ಅಳವಡಿಸಿದೆ. ಪೇಂಟಿಂಗ್ ಮೂಲಕ ಗೋಡೆಬರಹ ಮಾಡಿಸಿ ಸರ್ಕಾರದ ಸಾಧನೆಯನ್ನು ವಿವರಿಸಿದೆ. ಆದರೆ ಕಾಂಗ್ರೆಸ್ ನಾಯಕರು ರಾಜರಾಜೇಶ್ವರಿ ನಗರ ವ್ಯಾಪ್ತಿಯಲ್ಲಿ ಈ ಜಾಹಿರಾತಿನ ಮೇಲೆ 40% ಬರಹ ಬರೆದಿದೆ. ಇದನ್ನು ಕಂಡು ಬಿಬಿಎಂಪಿ ಅಧಿಕಾರಿಗಳ‌ ಮೇಲೆ ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಕೆಂಡಾಮಂಡಲರಾಗಿದ್ದಾರೆ, ಜೊತೆಗೆ ಸಾರ್ವಜನಿಕರ ಮುಂದೆ ಇರಿಸು-ಮುರಿಸು ತಪ್ಪಿಸಿಕೊಳ್ಳಲು ಬಿಬಿಎಂಪಿ ನೌಕರರಿಂದ ಪೂರ್ತಿ ಜಾಹಿರಾತನ್ನೇ ತೆಗೆಸುತ್ತಿರುವ ಮಾಹಿತಿ ಇದೆ.

ಸಿಎಂ ಪಟ್ಟದ ಇಂಗಿತ ವ್ಯಕ್ತಪಡಿಸಿದ ಪರಮೇಶ್ವರ್​:ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್​ ರವರು ತುಮಕೂರಿನ ಮಧುಗಿರಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಪ್ರಸ್ತುತ ಕಾಂಗ್ರೆಸ್​ ಪಕ್ಷದಲ್ಲಿ ಸುಮಾರು 10 ಜನರಿಗೆ ಸಿಎಂ ಆಗುವ ಆಸೆ ಇಟ್ಟುಕೊಂಡಿದ್ದಾರೆ. ಅದರಲ್ಲಿ ನಾನು ಒಬ್ಬನು. ರಾಜಕೀಯಕ್ಕೆ ಬರುವುದು ಅಧಿಕಾರ ಹಿಡಿಯೋಕೆ ತಾನೇ. ಹಾಗಾಗಿ ಎಲ್ಲರಿಗೂ ಸಿಎಂ ಆಗುವ ಆಸೆ ಇದ್ದೇ ಇರುತ್ತದೆ ಎಂದಿದ್ದಾರೆ.

ಇದನ್ನು ಓದಿ:ಕಾಂಗ್ರೆಸ್​ನಲ್ಲಿ 10 ಜನಕ್ಕೆ ಸಿಎಂ ಆಗುವ ಆಸೆ, ಅದ್ರಲ್ಲಿ ನಾನೂ ಒಬ್ಬ: ಪರಮೇಶ್ವರ್ ಹೇಳಿಕೆ

Last Updated : Feb 16, 2023, 2:27 PM IST

ABOUT THE AUTHOR

...view details