ಕರ್ನಾಟಕ

karnataka

ETV Bharat / state

ಅಳ್ನಾವರ-ಅಂಬೇವಾಡಿ ರೈಲ್ವೆಯನ್ನು ಶೀಘ್ರ ಪ್ರಾರಂಭಿಸಿ: ಕೇಂದ್ರಕ್ಕೆ ದೇಶಪಾಂಡೆ ಪತ್ರ

ಅಳ್ನಾವರ-ಅಂಬೇವಾಡಿ ರೈಲ್ವೆಯನ್ನು ಶೀಘ್ರ ಪ್ರಾರಂಭಿಸಿ ಎಂದು ಕೇಂದ್ರಕ್ಕೆ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಪತ್ರ ಬರೆದಿದ್ದಾರೆ.

By

Published : Oct 21, 2019, 3:13 PM IST

ದೇಶಪಾಂಡೆ

ಬೆಂಗಳೂರು:ಅಳ್ನಾವರ -ಅಂಬೇವಾಡಿ ರೈಲ್ವೆ ಮಾರ್ಗವನ್ನು ಶೀಘ್ರ ಪ್ರಾರಂಭಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಪತ್ರ ಬರೆದಿದ್ದಾರೆ.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಪತ್ರ ಬರೆದಿರುವ ದೇಶಪಾಂಡೆ

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರಿಗೆ ಪತ್ರ ಬರೆದಿರುವ ದೇಶಪಾಂಡೆ ಅವರು, ಈ ಭಾಗದ ರೈಲು ಮಾರ್ಗವನ್ನು ಶೀಘ್ರ ಪ್ರಾರಂಭಿಸುವಂತೆ ಆಗ್ರಹಿಸಿದ್ದಾರೆ. ಈಗಾಗಲೇ ಈ ಮಾರ್ಗದಲ್ಲಿ ಯಶಸ್ವಿ ಸಂಚಾರಿ ಪರೀಕ್ಷೆ ನಡೆದಿದೆ. ಬೆಳಗಾವಿಯಿಂದ ದಾಂಡೇಲಿಗೆ ನೇರ ಸಂಪರ್ಕಕ್ಕೆ ಕ್ರಮ ಕೈಗೊಳ್ಳಿ, ಹುಬ್ಬಳ್ಳಿ-ಧಾರವಾಡದಿಂದ ನೇರ ಸಂಪರ್ಕ ಒದಗಿಸಿ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಗಲಿದೆ ಎಂದು ಪತ್ರದಲ್ಲಿ ದೇಶಪಾಂಡೆ ವಿವರಿಸಿದ್ದಾರೆ.

ಈ ವಿಷಯವನ್ನು ಪ್ರಾಧಾನ್ಯತೆ ಮೇರೆಗೆ ಪರಿಗಣಿಸಿ, ರೈಲು ಸಂಚಾರ ಆರಂಭಿಸಿ ಎಂದು ದೇಶಪಾಂಡೆ ಮನವಿ ಮಾಡಿದ್ದಾರೆ.

ABOUT THE AUTHOR

...view details