ಕರ್ನಾಟಕ

karnataka

ETV Bharat / state

ಶ್ರೀ ನಂದಿಕೇಶ್ವರ ಸ್ವಾಮಿ ಕುಂಭಾಭಿಷೇಕ: ‌ವಿಶೇಷ ಪೂಜೆ ಸಲ್ಲಿಸಿದ ಸಿಎಂ - ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರಿನ ಮಹದೇವಪುರ ಕ್ಷೇತ್ರದ ಬೈರತಿ ಗ್ರಾಮದಲ್ಲಿರುವ ಪುರಾತನ ಕಾಲದ ಶ್ರೀ ನಂದಿಕೇಶ್ವರ ಸ್ವಾಮಿ ದೇವಾಲಯದಲ್ಲಿ ನಿನ್ನೆ ಅದ್ಧೂರಿಯಾಗಿ ಕುಂಭಾಭಿಷೇಕ ಕಾರ್ಯಕ್ರಮ ನೆರವೇರಿಸಲಾಗಿದ್ದು, ‌ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಶ್ರೀ ನಂದಿಕೇಶ್ವರ ಸ್ವಾಮಿ ಕುಂಭಾಭಿಷೇಕದಲ್ಲಿ ಸಿಎಂ ಭಾಗಿ
ಶ್ರೀ ನಂದಿಕೇಶ್ವರ ಸ್ವಾಮಿ ಕುಂಭಾಭಿಷೇಕದಲ್ಲಿ ಸಿಎಂ ಭಾಗಿ

By

Published : Mar 16, 2022, 6:45 AM IST

ಬೆಂಗಳೂರು/ಕೆ.ಆರ್.ಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಮಹದೇವಪುರ ಕ್ಷೇತ್ರದ ಬೈರತಿ ಗ್ರಾಮದಲ್ಲಿ ನಡೆದ ಶ್ರೀ ನಂದಿಕೇಶ್ವರ ಸ್ವಾಮಿ ದೇವಾಲಯದ ಕುಂಭಾಭಿಷೇಕದಲ್ಲಿ‌ ಭಾಗಿಯಾಗಿ, ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿದ ಸಚಿವ ಬೈರತಿ ಬಸವರಾಜ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿರುವುದನ್ನು ನೆನೆದು ವೇದಿಕೆಯಲ್ಲಿ ಭಾವುಕರಾದರು. ಸರ್ಕಾರಿ ಶಾಲೆಯಲ್ಲಿ ಓದಿಕೊಂಡು ಬೆಳೆದ ನಾವು ಶಾಸಕರಾಗಿ, ಮಂತ್ರಿಗಳಾಗಿ ಜನರ ಸೇವೆ ಮಾಡುತ್ತೇವೆ ಎಂದು ಕೊಂಡಿರಲಿಲ್ಲ. ಆದರೆ, ನಿಮ್ಮೆಲ್ಲರ ಆಶೀರ್ವಾದದಿಂದ ಜನರ‌ ಸೇವೆ ಮಾಡುವಂತಾಗಿದೆ ಎಂದರು.

ಶ್ರೀ ನಂದಿಕೇಶ್ವರ ಸ್ವಾಮಿ ಕುಂಭಾಭಿಷೇಕದಲ್ಲಿ ಸಿಎಂ ಭಾಗಿ

ಈ ವೇಳೆ ಆರೋಗ್ಯ ಸಚಿವ ಸುಧಾಕರ್, ಶಾಸಕ ಸುರೇಶ್ ಸೇರಿದಂತೆ ಮತ್ತಿತರೆ ನಾಯಕರು ಭಾಗಿಯಾಗಿ ದೇವರ ದರ್ಶನ ಪಡೆದರು.

ಇದನ್ನೂ ಓದಿ:ಮಾ. 22ರಂದು ವಾಜಪೇಯಿ ಮೈದಾನದಲ್ಲಿ ಯೋಗಿ ಆದಿತ್ಯನಾಥ್​ ಪ್ರಮಾಣವಚನ?

ABOUT THE AUTHOR

...view details