ಕರ್ನಾಟಕ

karnataka

ETV Bharat / state

ಸ್ಪೈಸ್ ​ಜೆಟ್​ನಿಂದ ಕೋಟಿ ಕಂಠ ಗಾಯನಕ್ಕೆ ಬೆಂಬಲ.. ಆಗಸದಲ್ಲಿ ಮೊಳಗಿದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು

ಸ್ಪೈಸ್​ಜೆಟ್​ನಿಂದ ಕೋಟಿ ಕಂಠ ಗಾಯನಕ್ಕೆ ಬೆಂಬಲ ಸಿಕ್ಕಿದೆ. ಆಗಸದಲ್ಲಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡು ಹಾಡುವ ಮೂಲಕ ವಿಮಾನದ ಸಿಬ್ಬಂದಿ ಮತ್ತು ಪ್ರಯಾಣಿಕರು ಕೋಟಿ ಕಂಠ ಗಾಯನಕ್ಕೆ ಬೆಂಬಲಿಸಿದರು.

By

Published : Oct 28, 2022, 12:56 PM IST

Koti Kantha Gayana function  Spicejet support to Koti Kanta Gayana  minister sunil kumar tweet  ಸ್ಪೈಸ್​ಜೆಟ್​ನಿಂದ ಕೋಟಿ ಕಂಠ ಗಾಯನಕ್ಕೆ ಬೆಂಬಲ  ಹುಟ್ಟಿದ್ದರೆ ಕನ್ನಡ ನಾಡಲ್ಲಿ ಹುಟ್ಟಬೇಕು  ರಾಜ್ಯ ಸರ್ಕಾರ ಕೋಟಿ ಕಂಠ ಗಾಯನ ಎಂಬ ವಿನೂತನ ಅಭಿಯಾನ  ಕೋಟಿ ಕಂಠ ಗಾಯನ ಆಕಾಶದಲ್ಲೂ ಗಮನ  ಕನ್ನಡ ಭಾಷೆಗೆ ನಮನ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನೀಲ್ ಕುಮಾರ್  ಸಚಿವ ವಿ ಸುನೀಲ್ ಕುಮಾರ್ ಟ್ವೀಟ್​
ಆಗಸದಲ್ಲಿ ಮೊಳಗಿದ ಹುಟ್ಟಿದ್ದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು

ಬೆಂಗಳೂರು:ಕನ್ನಡ ರಾಜ್ಯೋತ್ಸವದ ನಿಮಿತ್ತ ರಾಜ್ಯ ಸರ್ಕಾರ ಕೋಟಿ ಕಂಠ ಗಾಯನ ಎಂಬ ವಿನೂತನ ಅಭಿಯಾನ ಆರಂಭಿಸಿದ್ದು, ಈ ಕೋಟಿ ಕಂಠ ಗಾಯನ ಆಕಾಶದಲ್ಲೂ ಗಮನ ಸೆಳೆಯಿತು. ಇಂದು ಬೆಳಂಬೆಳಗ್ಗೆಯೇ ಸ್ಪೈಸ್ ಜೆಟ್​ನಲ್ಲಿ ವಿಮಾನದ ಸಿಬ್ಬಂದಿ ಹಾಗೂ ಪ್ರಯಾಣಿಕರು ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ್ದರು.

ಹೌದು, ಆಗಸದಲ್ಲಿ ವಿಮಾನ ಸಿಬ್ಬಂದಿ ಮತ್ತು ಪ್ರಯಾಣಿಕರು ಕನ್ನಡಾಭಿಮಾನವನ್ನು ಮೆರೆದಿದ್ದಾರೆ. ವರನಟ ಡಾ. ರಾಜ್ ಕುಮಾರ್ ಹಾಡಿರುವ ಡಾ. ಹಂಸಲೇಖ ರಚಿಸಿರುವ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು' ಎಂಬ ಗೀತೆ ಹಾಡುವ ಮೂಲಕ ಕನ್ನಡ ಭಾಷೆಗೆ ನಮನ ಸಲ್ಲಿಸಿದರು.

ಇನ್ನು ಈ ವಿಡಿಯೋವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನೀಲ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

ಓದಿ:ವಿಶ್ವ ದಾಖಲೆ ನಿರ್ಮಿಸಿದ ಕೋಟಿ ಕಂಠ ಗಾಯನ: ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ದನಿಯಾದ ಸಿಎಂ

ABOUT THE AUTHOR

...view details