ಬೆಂಗಳೂರು: ವಿಜಯದಶಮಿ ಹಾಗೂ ಚತ್ ಹಬ್ಬಾಚರಣೆ ಇರುವ ಕಾರಣ ನೈರುತ್ಯ ರೈಲ್ವೆ ವಿಭಾಗ 22 ವಿಶೇಷ ರೈಲುಗಳನ್ನು ಓಡಿಸಲಿದೆ.
ಹಬ್ಬದ ಈ ಎಲ್ಲಾ ವಿಶೇಷ ರೈಲುಗಳು ಕಾಯ್ದಿರಿಸಿದ ಸೇವೆಗಳು ಆಗಿವೆ. ಕೊರೊನಾ ಹಿನ್ನೆಲೆಯಲ್ಲಿ ಪ್ರತಿ ಪ್ರಯಾಣಿಕರು ಥರ್ಮಲ್ ಸ್ಕೀನಿಂಗ್ಗೆ ಒಳಗಾಗಬೇಕು. ಸಾಮಾಜಿಕ ಅಂತರ ನಿಯಮ ಪಾಲಿಸಿ ಫೇಸ್ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ. ರೈಲು ಪ್ರಯಾಣದ ವೇಳೆ ಕೋವಿಡ್ ಪ್ರೋಟೋಕಾಲ್ ಎಂದಿನಂತೆ ಜಾರಿಯಲ್ಲಿ ಇರಲಿದೆ ಎಂದು ಇಲಾಖೆ ಸ್ಪಷ್ಟವಾಗಿ ತಿಳಿಸಿದೆ.
ರೈಲು ಸೇವೆಗಳ ವಿವರ:
1) ಯಶವಂತಪುರ - ಕೊರ್ಬಾ (ಛತ್ತೀಸ್ಗಡ)ಸೂಪರ್ ಫಾಸ್ಟ್ ವೀಕ್ಲಿ ಎಕ್ಸ್ಪ್ರೆಸ್ ಸ್ಪೆಷಲ್ ಟ್ರೈನ್
*ಯಶವಂತಪುರದಿಂದ ಅಕ್ಟೋಬರ್ 23 ರಿಂದ ನವೆಂಬರ್ 27 ರವರೆಗೆ ಪ್ರತಿ ಶುಕ್ರವಾರದಂದು ಸಂಚಾರ.
*ಕೊರ್ಬಾದಿಂದ ಅಕ್ಟೋಬರ್ 25 ರಿಂದ ನವೆಂಬರ್ 29 ರವರೆಗೆ ಸಂಚಾರ.
2) ಮೈಸೂರು-ವಾರಣಾಸಿ ವೀಕ್ಲಿ ಎಕ್ಸ್ಪ್ರೆಸ್ ಸ್ಪೆಷಲ್ ಟ್ರೈನ್
*ಅಕ್ಟೋಬರ್ 20 ರಿಂದ ನವೆಂಬರ್ 26 ರವರೆಗೆ ಸಂಚಾರ- ಪ್ರತಿ ಮಂಗಳವಾರ ಮತ್ತು ಗುರುವಾರ ಮೈಸೂರಿನಿಂದ ಹೊರಡಲಿದೆ.
*ವಾರಣಾಸಿಯಿಂದ ಅಕ್ಟೋಬರ್ 22 ರಿಂದ ಸಂಚಾರ ಆರಂಭಗೊಂಡು ನವೆಂಬರ್ 28ರವರೆಗೆ ಸಂಚಾರ ನಡೆಸಲಿದೆ.
3) ಅಹಮದಾಬಾದ್- ಯಶವಂತಪುರ ವೀಕ್ಲಿ ಎಕ್ಸ್ಪ್ರೆಸ್ ಸ್ಪೆಷಲ್ ಟ್ರೈನ್
*ಅಹಮದಾಬಾದ್ನಿಂದ ಅಕ್ಟೋಬರ್ 27 ರಿಂದ ಡಿಸೆಂಬರ್ 1 ರವರೆಗೆ ಸಂಚಾರ.
*ಯಶವಂತಪುರದಿಂದ ಅಕ್ಟೋಬರ್ 25 ರಿಂದ ನವೆಂಬರ್ 29ರವರೆಗೆ ಸಂಚಾರ.
4) ಗಾಂಧಿಧಾಮ-ಕೆಎಸ್ಆರ್ ಬೆಂಗಳೂರುವೀಕ್ಲಿ ಎಕ್ಸ್ಪ್ರೆಸ್ ಸ್ಪೆಷಲ್ ರೈಲು
*ಗಾಂಧಿಧಾಮದಿಂದ ಅಕ್ಟೋಬರ್ 10 ರಿಂದ ಡಿಸೆಂಬರ್ 1 ರವರೆಗೆ ಸಂಚಾರ.
*ಕೆಎಸ್ಆರ್ ಬೆಂಗಳೂರಿನಿಂದ ಅಕ್ಟೋಬರ್ 24 ರಿಂದ ನವೆಂಬರ್ 28ರ ವರೆಗೆ ಸಂಚಾರ.
5) ಹುಬ್ಬಳ್ಳಿ-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ಪ್ರೆಸ್ ಸ್ಪೆಷಲ್ ರೈಲು
*ಹುಬ್ಬಳ್ಳಿಯಿಂದ ಅಕ್ಟೋಬರ್ 22 ರಿಂದ ನವೆಂಬರ್ 30ರವರೆಗೆ ಸಂಚಾರ.
*ಲೋಕಮಾನ್ಯ ತಿಲಕ್ ಟರ್ಮಿನಸ್ನಿಂದ ನವೆಂಬರ್ 23 ರಿಂದ ಡಿಸೆಂಬರ್ 1 ರವರೆಗೆ ಸಂಚಾರ ಮಾಡಲಿದೆ.