ಕರ್ನಾಟಕ

karnataka

ETV Bharat / state

ಶಾಸಕರು ಅನರ್ಹ: ಸ್ಪೀಕರ್​​ ವಿರುದ್ದ ​ಬಿಜೆಪಿ ನಾಯಕರ ಆಕ್ರೋಶ - BJP barrage against Speaker Ramesh Kumar

ಸ್ಪೀಕರ್ ರಮೇಶ್​ ಕುಮಾರ್​ ಬಂಡಾಯವೆದ್ದ ಕಾಂಗ್ರೆಸ್ ಹಾಗು ಜೆಡಿಎಸ್‌ನ 14 ಶಾಸಕರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಸುದ್ದಿಗೋಷ್ಠಿ ನಡೆಸಿ ಸ್ಪೀಕರ್​ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಪೀಕರ್​ ರಮೇಶ್​ ಕುಮಾರ್ ವಿರುದ್ಧ ​ಬಿಜೆಪಿಗರು ಕೆಂಡಾಮಂಡಲ

By

Published : Jul 28, 2019, 1:35 PM IST

ಬೆಂಗಳೂರು:ರಾಜೀನಾಮೆ ನೀಡಿದ ಮೈತ್ರಿ ಕೂಟದ 14 ಶಾಸಕರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಸ್ಪೀಕರ್​ ವಿರುದ್ದ ಕೆಂಡಾಮಂಡಲರಾಗಿದ್ದಾರೆ.

ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಸುಪ್ರೀಂಕೋರ್ಟ್ ಆದೇಶದಂತೆ ಶಾಸಕರು ಮತ್ತೆ ಎರಡನೇ ಬಾರಿ ಕ್ರಮಬದ್ಧ ರಾಜೀನಾಮೆ ಕೊಟ್ಟಿದ್ರು. ಆದರೆ ಸ್ಪೀಕರ್ ರಾಜಕೀಯ ದುರುದ್ದೇಶದಿಂದ ಶಾಸಕರನ್ನು ಅನರ್ಹಗೊಳಿಸಿದ್ದಾರೆ. ಈ ಕ್ರಮ ದೋಷಪೂರಿತವಾಗಿದ್ದು,ಇದನ್ನು ಪ್ರಶ್ನಿಸಿ ಅನರ್ಹಗೊಂಡ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರ್ತಾರೆ ಎಂದರು. ಶಾಸಕರೇ ಸ್ವಇಚ್ಛೆಯಿಂದ ರಾಜಿನಾಮೆ ನೀಡಿದ್ದು, ಸುಪ್ರೀಂನಲ್ಲಿ ಎಲ್ಲಾ ಶಾಸಕರಿಗೆ ನ್ಯಾಯ ಸಿಗುತ್ತೆ. ರಮೇಶ್ ಕುಮಾರ್ ನಾನು ಸಂವಿಧಾನದ ರಕ್ಷಕ ಅಂತಾರೆ. ಇತಿಹಾಸದಲ್ಲಿ ಉಳಿಯುವ ತೀರ್ಪು ನೀಡ್ತೀನಿ ಎಂದಿದ್ದರು. ಆದರೀಗ 14 ಜನ ಶಾಸಕರನ್ನ ಅನರ್ಹಗೊಳಿಸಿದ್ದು ಇತಿಹಾಸದಲ್ಲಿ ‌ಕಪ್ಪು ಚುಕ್ಕೆ ಎಂದು ಕಾರಜೋಳ ಕಿಡಿ ಕಾರಿದ್ದಾರೆ.

ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಮಾತನಾಡಿ, ಯಾರೂ ಒಪ್ಪುವ ರೀತಿಯ ತೀರ್ಪು ಇದಲ್ಲ. ವೈಯಕ್ತಿಕವಾಗಿ ಸ್ವತಂತ್ರವಾಗಿ ರಾಜೀನಾಮೆ ನೀಡಬಹುದು ಎಂದು ನಿಯಮವಿದ್ದು, ಸ್ಪೀಕರ್ ಶನಿವಾರ, ಭಾನುವಾರ ರಜೆ ದಿನ ಕೆಲಸ ಮಾಡೊಲ್ಲ ಎನ್ನುತ್ತಿದ್ದರು. ಆದರೆ ಇಂದು ಭಾನುವಾರ ಸ್ಪೀಕರ್ ಹೇಗೆ ರಾಜೀನಾಮೆ ವಿಚಾರದ ಬಗ್ಗೆ ಕ್ರಮಕೈಗೊಂಡರು ಎಂದು ಅವರೇ ಹೇಳಬೇಕು. ನಾಳೆ ವಿಧಾನಸಭೆ ಅಧಿವೇಶನವಿದ್ದು, ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.

ಎಲ್ಲ ಶಾಸಕರ ರಾಜೀನಾಮೆ ಅಂಗೀಕರಿಸದೇ ಅನರ್ಹ ಮಾಡಿರೋದು ಪಕ್ಷಪಾತದ ತೀರ್ಮಾನವಾಗಿದ್ದು, ರಾಜಕೀಯ ಪಕ್ಷಗಳ ಒತ್ತಡಕ್ಕೆ ಸ್ಪೀಕರ್ ಮಣಿದಿದ್ದಾರೆ. ಶಾಸಕರು ಯಾರೂ ಈ ಕ್ರಮಕ್ಕೆ ಹೆದರುವ ಅಗತ್ಯವಿಲ್ಲ. ಅನರ್ಹಗೊಂಡವರು ಕಾನೂನು ಹೋರಾಟ ನಡೆಸ್ತಾರೆ ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದ್ದಾರೆ.

ABOUT THE AUTHOR

...view details