ಕರ್ನಾಟಕ

karnataka

ಗ್ರಾಮ ಪಂಚಾಯ್ತಿ ಚುನಾವಣೆ: ರೌಡಿ ಶೀಟರ್​ಗಳಿಗೆ ಬಿಸಿ ಮುಟ್ಟಿಸಿದ ಎಸ್ಪಿ ಚೆನ್ನಣ್ಣನವರ್

ಆನೇಕಲ್-ಬೆಂಗಳೂರನ್ನು ಬೆಚ್ಚಿ ಬೀಳಿಸಿದ ಬೆಸ್ತಮಾನಹಳ್ಳಿ ಸುನಿಲ್ ಕೊಲೆ ಪ್ರಕರಣದಲ್ಲಿ ಭಾಗಿಯಾದ ರೌಡಿ ಶೀಟರ್​ಗಳು ಮತ್ತವರ ಹಿಂಬಾಲಕರ ಪಡೆಗಳನ್ನು ಪ್ರತ್ಯೇಕವಾಗಿ ಕರೆಸಿ ಎಸ್ಪಿ ಚೆನ್ನಣ್ಣನವರ್​ ಎಚ್ಚರಿಕೆ ನೀಡಿದರು.

By

Published : Aug 11, 2020, 7:12 AM IST

Published : Aug 11, 2020, 7:12 AM IST

Anekal
ರೌಡಿಗಳಿಗೆ ಎಚ್ಚರಿಕೆ ನೀಡಿದ ಎಸ್ಪಿ

ಆನೇಕಲ್: ಮುಂಬರುವ ಗ್ರಾಮ ಪಂಚಾಯ್ತಿ ಚುನಾವಣೆ ಹಾಗೂ ಆನೇಕಲ್ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಗಳ ಪೂರ್ವ ತಯಾರಿಗಾಗಿ ರೌಡಿಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆ ಆನೇಕಲ್ ಪೊಲೀಸ್ ಠಾಣಾ ಅಂಗಳದಲ್ಲಿ ರೌಡಿ ಶೀಟರ್​ಗಳಿಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಡಿ ಚೆನ್ನಣ್ಣನವರ್ ಬಿಸಿ ಮುಟ್ಟಿಸಿದರು.

ಆನೇಕಲ್ ಪೊಲೀಸ್ ಠಾಣಾ ಅಂಗಳದಲ್ಲಿ ರೌಡಿಗಳಿಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಡಿ ಚೆನ್ನಣ್ಣನವರ್ ಎಚ್ಚರಿಕೆಯನ್ನು ನೀಡಿದರು.

ಆನೇಕಲ್-ಬೆಂಗಳೂರನ್ನು ಬೆಚ್ಚಿ ಬೀಳಿಸಿದ ಬೆಸ್ತಮಾನಹಳ್ಳಿ ಸುನಿಲ್ ಕೊಲೆ ಪ್ರಕರಣದಲ್ಲಿ ಭಾಗಿಯಾದ ರೌಡಿ ಶೀಟರ್​ಗಳು ಮತ್ತವರ ಹಿಂಬಾಲಕರ ಪಡೆಗಳನ್ನು ಪ್ರತ್ಯೇಕವಾಗಿ ಕರೆಸಿ ಎಸ್​ಪಿ ಎಚ್ಚರಿಕೆ ನೀಡಿದರು.

ಪ್ರತಿ ಬಾರಿ ಎಚ್ಚರಿಕೆ ನೀಡಿದರೂ ದಪ್ಪ ಚರ್ಮವಿದ್ದಂತೆ ಆನೇಕಲ್ ಭಾಗದಲ್ಲಿ ರೌಡಿಗಳು ಮೆರೆದಾಟ ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ. ಐದಾರು ಪ್ರಕರಣಗಳಲ್ಲಿ ಭಾಗಿಯಾದ ರೌಡಿ ಆಸಾಮಿಗಳಿಗೆ ಗೂಂಡಾ ಕಾಯ್ದೆಗೆ ಫಿಕ್ಸ್ ಮಾಡುವುದಾಗಿ ತಿಳಿಸಿದ್ದಾರೆ. ಹದಿನೈದು ದಿನಗಳಲ್ಲಿಯೇ ಈ ಕೆಲಸ ಮುಗಿಸುತ್ತೇವೆ ಎಂದು ಚೆನ್ನಣ್ಣನವರ್​ ಮಾಹಿತಿ ನೀಡಿದರು.

ABOUT THE AUTHOR

...view details