ಬೆಂಗಳೂರು:ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಕೇರಳದ ಮಾಜಿ ಗೃಹ ಸಚಿವ ಬಾಲಕೃಷ್ಣನ್ ಕೊಡಿಯೇರಿ ಪುತ್ರ ಬಿನೇಶ್ ಕೊಡಿಯೇರಿಯನ್ನು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿಡಲಾಗಿದೆ.
ಜೈಲು ಪಾಲಾದ ಕೇರಳದ ಮಾಜಿ ಗೃಹ ಸಚಿವರ ಪುತ್ರ... ಮುಂದೆ ಕಾದಿದೆ ಎನ್ಸಿಬಿ ಕಂಟಕ..! - Binesh Kodiyeri arrested
ಕೇರಳದ ಮಾಜಿ ಗೃಹ ಸಚಿವ ಬಾಲಕೃಷ್ಣನ್ ಕೊಡಿಯೇರಿ ಮಗ ಬಿನೇಶ್ ಕೊಡಿಯೇರಿ ಸದ್ಯ ಜೈಲು ಪಾಲಾಗಿದ್ದಾನೆ. ಎನ್ಸಿಬಿಯಿಂದ ಬಂಧಿತನಾಗಿರುವ ಪ್ರಮುಖ ಆರೋಪಿ ಮೊಹಮ್ಮದ್ ಅನೂಪ್ ಜೊತೆ ಬಿನೇಶ್ ವಹಿವಾಟು ನಡೆಸುತ್ತಿದ್ದ ಎಂಬ ವಿಚಾರ ಎನ್ಸಿಬಿ ಗಮನಕ್ಕೆ ಬಂದಿದ್ದು, ಬಿನೇಶ್ ಮೇಲೆ ಎನ್ಸಿಬಿ ವಿಚಾರಣೆ ನಡೆಯಲಿದೆ.
ಸದ್ಯ ಇಡಿ ತನಿಖೆ ಮುಕ್ತಾಯವಾಗಿದೆ. ಆದರೆ, ಇಂದಿನಿಂದ ಬಿನೇಶ್ಗೆ ಎನ್ಸಿಬಿ ಕಂಟಕ ಶುರುವಾಗಿದೆ. ಇಡಿ ಅಧಿಕಾರಿಗಳು ಬಿನೇಶ್ ಕೊಡಿಯೇರಿ ಅಕ್ರಮ ಹಣದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ತನಿಖೆ ವೇಳೆ ಬಿನೇಶ್ ಬೆಂಗಳೂರು ಹಾಗೂ ಕೇರಳದಲ್ಲಿ ಐಷಾರಾಮಿ ಹೋಟೆಲ್ ನಡೆಸುತ್ತಿರುವ ವಿಚಾರ ತಿಳಿದು ಬಂದಿದೆ. ಅಲ್ಲದೇ ಈ ಹೋಟೆಲ್ಗಳಿಂದ ಬಿನೇಶ್ ಅಕೌಂಟ್ಗೆ ಬಹಳಷ್ಟು ಹಣ ಜಮಾವಣೆ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಕೇವಲ ಹೋಟೆಲ್ ಉದ್ಯಮ ನಡೆಸಿ ಅಷ್ಟು ಹಣಗಳಿಸಲು ಸಾಧ್ಯವಿಲ್ಲ ಎಂಬ ಶಂಕೆಯಿಂದ ಈ ಹಣದ ಮೂಲ ಪತ್ತೆ ಹಚ್ಚುವ ಕೆಲಸವಾಗುತ್ತಿದೆ.
ಇನ್ನು ಎನ್ಸಿಬಿಯಿಂದ ಬಂಧಿತನಾಗಿರುವ ಪ್ರಮುಖ ಆರೋಪಿ ಮೊಹಮ್ಮದ್ ಅನೂಪ್ ಜೊತೆ ಬಿನೇಶ್ ವಹಿವಾಟು ನಡೆಸುತ್ತಿದ್ದ ಎಂಬ ವಿಚಾರ ಎನ್ಸಿಬಿ ಗಮನಕ್ಕೆ ಬಂದಿದೆ. ನಗರದ ಕಮ್ಮನಹಳ್ಳಿಯಲ್ಲಿರುವ ರೆಸ್ಟೋರೆಂಟ್ನಲ್ಲಿ ಡ್ರಗ್ ಪೆಡ್ಲಿಂಗ್ ನಡೆಯುತ್ತಿರುವ ವಿಚಾರಕ್ಕೆ ಬೇಕಾದ ಸಾಕ್ಷಿ ಎನ್ಸಿಬಿ ಕೈಯಲ್ಲಿದೆ. ಹೀಗಾಗಿ ಸದ್ಯ ಎನ್ಸಿಬಿ ಅಧಿಕಾರಿಗಳು ಬಿನೇಶ್ ಕೊಡಿಯೇರಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಪರಪ್ಪನ ಅಗ್ರಹಾರದಲ್ಲಿರುವ ಮೊಹಮ್ಮದ್ ಅನೂಪ್ ಹಾಗೂ ಬಿನೇಶ್ ಕೊಡಿಯೇರಿಯ ತನಿಖೆ ಮಾಡಿ ಮಾಹಿತಿ ಪಡೆಯುವ ಸಾಧ್ಯತೆ ಇದೆ.