ಬೆಂಗಳೂರು: ಆರು ಮಂದಿ ಐಎಎಸ್ ಮತ್ತು ಒಬ್ಬರು ಐಎಫ್ಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆರು ಮಂದಿ ಐಎಎಸ್, ಓರ್ವ ಐಎಫ್ಎಸ್ ಅಧಿಕಾರಿಯ ವರ್ಗಾವಣೆ
ಆರು ಮಂದಿ ಐಎಎಸ್ ಮತ್ತು ಓರ್ವ ಐಎಫ್ಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಡಾ. ಎನ್.ನಾಗಾಂಬಿಕಾ ದೇವಿ- ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿಶೇಷ ಚೇತನರ ಸಬಲೀಕರಣ ಮತ್ತು ಹಿರಿಯ ನಾಗರಿಕ ಇಲಾಖೆ. ತುಷಾರ್ ಗಿರಿನಾಥ್ - ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ. ಹರ್ಷ ಗುಪ್ತಾ- ಆಯುಕ್ತರು, ಸಮೀಕ್ಷೆ ಮತ್ತು ಭೂ ದಾಖಲೆ ಇಲಾಖೆ. ಇದರ ಜೊತೆಗೆ ಹರ್ಷಗುಪ್ತಾ ಅವರಿಗೆ ಹೆಚ್ಚುವರಿಯಾಗಿ ಐಎಂಎ ಪ್ರಕರಣದ ವಿಶೇಷ ಅಧಿಕಾರಿಯಾಗಿ ಹೊಣೆ ನೀಡಲಾಗಿದೆ. ಎನ್. ಜಯರಾಂ- ಅಧ್ಯಕ್ಷರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ.
ಹೆಚ್.ಬಸವರಾಜೇಂದ್ರ- ಆಯುಕ್ತರು, ಪಶುಸಂಗೋಪನಾ ಇಲಾಖೆ. ಡಾ. ಎನ್.ಶಿವಶಂಕರ್ - ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಕೆಐಎಡಿಬಿ. ಇದರ ಜೊತೆಗೆ ಶಿವಶಂಕರ್ ಅವರಿಗೆ ಹೆಚ್ಚುವರಿಯಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಜವಾಬ್ದಾರಿ ವಹಿಸಲಾಗಿದೆ. ಐಎಫ್ಎಸ್ - ಎಸ್.ಆರ್.ನಟೇಶ್ ಅವರನ್ನು ಆನೆ ಯೋಜನೆ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.