ಕರ್ನಾಟಕ

karnataka

By

Published : Jun 17, 2021, 6:57 PM IST

ETV Bharat / state

ಸಿಡಿ ಕೇಸ್: ಎಸ್​ಐಟಿಯಿಂದ ಶಂಕಿತ ಆರೋಪಿ ಶ್ರವಣ್​​​​ ವಿಚಾರಣೆ ಅಂತ್ಯ

ಶಂಕಿತ ಆರೋಪಿಗಳಾದ ನರೇಶ್ ಹಾಗೂ ಶ್ರವಣ್​ ಇಬ್ಬರನ್ನೂ ಮೂರು ಬಾರಿ ವಿಚಾರಣೆಗೊಳಪಡಿಸಿ ಹಲವು ಮಾಹಿತಿಯನ್ನ ಎಸ್ಐಟಿ ಕಲೆಹಾಕಿತ್ತು. ನಿನ್ನೆ ಸಹ ಸುಮಾರು 7 ಗಂಟೆಗಳ ಕಾಲ ನರೇಶ್​​ನನ್ನ ವಿಚಾರಣೆ ನಡೆಸಿದ್ದ ಎಸ್ಐಟಿ ಇಂದು ಶ್ರವಣ್ ವಿಚಾರಣೆ ಮಾಡಿದೆ.

sit-completes-enquiry-of-cd-case-accused-shravan
ಎಸ್​ಐಟಿಯಿಂದ ಶಂಕಿತ ಆರೋಪಿ ಶ್ರವಣ್​​​​ ವಿಚಾರಣೆ ಅಂತ್ಯ

ಬೆಂಗಳೂರು: ಮಾಜಿ ಸಚಿವರ ಬ್ಲ್ಯಾಕ್ ಮೇಲ್ ಪ್ರಕರಣ ಸಂಬಂಧ ಎಸ್ಐಟಿ ತನಿಖೆ ಚುರುಕುಗೊಳಿಸಿದೆ. ಶಂಕಿತ ಆರೋಪಿ ಶ್ರವಣ್​​​​ಗೆ ವಿಶೇಷ ತನಿಖಾ ತಂಡ (ಎಸ್ಐಟಿ) ವಿಚಾರಣೆ ನಡೆಸಿದ್ದು, ಹಲವು ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡಿದೆ. ಶಂಕಿತ ಆರೋಪಿಗಳಾದ ನರೇಶ್ ಹಾಗೂ ಶ್ರವಣ್​ ಇಬ್ಬರನ್ನೂ ಮೂರು ಬಾರಿ ವಿಚಾರಣೆಗೊಳಪಡಿಸಿ ಹಲವು ಮಾಹಿತಿಯನ್ನ ಎಸ್ಐಟಿ ಕಲೆಹಾಕಿತ್ತು.

ನಿನ್ನೆ ಸಹ ಸುಮಾರು 7 ಗಂಟೆಗಳ ಕಾಲ ನರೇಶ್​​ನನ್ನ ವಿಚಾರಣೆ ನಡೆಸಿದ್ದ ಎಸ್ಐಟಿ ಇಂದು ಶ್ರವಣ್ ವಿಚಾರಣೆ ಮುಗಿಸಿದೆ. ಆಡುಗೋಡಿ ಟೆಕ್ನಿಕಲ್ ಸೆಂಟರ್​ನಲ್ಲಿ ಎಸ್ಐಟಿ ವಿಚಾರಣೆಗೆ ಹಾಜರಾಗಿದ್ದ ಶ್ರವಣ್​ಗೆ ಎಸಿಪಿ ಧರ್ಮೆಂದ್ರ ಹಲವು ಪ್ರಶ್ನೆಗಳನ್ನ ಮುಂದಿಟ್ಟಿದರು. ವಿಡಿಯೋ ಮಾಡಲು ಬಳಸಿದ್ದ ಕ್ಯಾಮರಾ ಹಾಗೂ ಬ್ಯಾಂಕ್ ಅಕೌಂಟ್​ನಿಂದ ವರ್ಗಾವಣೆಯಾಗಿರುವ ಹಣದ ಕುರಿತು ದಾಖಲೆಗಳ ನೀಡುವಂತೆ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನರೇಶ್ ವಿಚಾರಣೆಗೆ ಒಳಪಡಿಸಿದಾಗ ನರೇಶ್ ಮಗಳ ನಾಮಕರಣಕ್ಕೆ ಖರ್ಚು ಮಾಡಿದ್ದ ಹಣ ಮತ್ತು ಶಿರಾದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಖರೀದಿ ಮಾತುಕತೆ, ಹೊಸ ಕಾರು ಕೊಂಡುಕೊಳ್ಳಲು ಮುಂದಾಗಿರುವುದರ ಬಗ್ಗೆ ಜ್ಯೂವೆಲ್ಲರಿ ಖರೀದಿ ಮಾಡಲು ಮುಂದಾಗಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆ ಕುರಿತು ಪ್ರಶ್ನೆ ಮಾಡಲಾಗಿದೆ. ಅದರ ಆದಾಯಕ್ಕಿಂತ ಹೆಚ್ಚಿನ ಹಣದ ಮೂಲಕ್ಕೆ ನರೇಶ್ ಬಳಿಯೂ ಸೂಕ್ತ ಉತ್ತರ ಸಿಕ್ಕಿಲ್ಲಾ ಎನ್ನಲಾಗಿದೆ.

ಇದನ್ನೂ ಓದಿ:ಅರಣ್ಯ ಇಲಾಖೆ ಕಾರ್ಯಾಚರಣೆ: ನಾಲ್ವರು ಶ್ರೀಗಂಧ ಕಳ್ಳರ ಬಂಧನ

For All Latest Updates

ABOUT THE AUTHOR

...view details