ಕರ್ನಾಟಕ

karnataka

ETV Bharat / state

ಸ್ಪೀಕರ್ ಭೇಟಿಯಾಗಲು ಹೊರಟ ಸಿದ್ದರಾಮಯ್ಯ ಟೀಂ - undefined

ಈಗಾಗಲೇ ಮೈತ್ರಿ ಸರ್ಕಾರ ಪತನವಾಗಿದ್ದು, ಇದಕ್ಕೆ ಮುಖ್ಯ ಕಾರಣೀಕರ್ತರು ಅತೃಪ್ತ ಶಾಸಕರು. ಮುಂಬೈನಲ್ಲಿರುವ ಅತೃಪ್ತ ಶಾಸಕರ ವಿರುದ್ಧ ಸ್ಪೀಕರ್​ಗೆ ದೂರು ನೀಡಲು ಮಾಜಿ ಸಿಎಂ ಹಾಗೂ ಸಂಗಡಿಗರು ಸ್ಪೀಕರ್​ ಬಳಿಗೆ ತೆರಳಿದ್ದಾರೆ.

ಸಿದ್ದು ಎಂಡ್​ ಟೀಂ

By

Published : Jul 24, 2019, 1:18 PM IST

ಬೆಂಗಳೂರು: ದೋಸ್ತಿ ಸರ್ಕಾರದ ಪತನದ ಬೆನ್ನಲ್ಲೇ ಕೆಪಿಸಿಸಿ ಕಚೇರಿಯಲ್ಲಿ ಸಭೆ ಕರೆಯಲಾಗಿದ್ದು, ಸಭೆಗೆ ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ , ಕೆಜೆ ಜಾರ್ಜ್ ಸೇರಿ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಭಾಗಿಯಾಗಲು ಬಂದಿದ್ದು, ಸಭೆಗೂ ಮುನ್ನವೇ ಸ್ಪೀಕರ್ ಅವ​ರನ್ನು ಭೇಟಿಯಾಗಲು ಸಿದ್ದು ಟೀಂ ಹೊರಟಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ತಂಡ

ಅತೃಪ್ತ ಶಾಸಕರ ವಿರುದ್ದ ದೂರು ನೀಡಲು ಕೆಪಿಸಿಸಿ ಕಚೇರಿಯಿಂದ ವಿಧಾನಸೌಧಕ್ಕೆ ಕಾಂಗ್ರೆಸ್ ನಾಯಕರ ತಂಡ ತೆರಳಿದ್ದು, ಮುಂಬೈಯಲ್ಲಿರುವ ಅತೃಪ್ತ ಶಾಸಕರ ವಿರುದ್ದ ಸ್ಪೀಕರ್ ಗೆ ದೂರು ಕೊಡಲಿದ್ದಾರೆ ಎಂದು ತಿಳಿದುಬಂದಿದೆ.

ದೂರು ಕೊಟ್ಟ ನಂತರ ಮತ್ತೆ ಕೆಪಿಸಿಸಿ ಕಚೇರಿಗೆ ಆಗಮಿಸಿ‌ ರಾಜಕೀಯ ಬೆಳವಣಿಗೆ ಕುರಿತು ಸಭೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

For All Latest Updates

TAGGED:

ABOUT THE AUTHOR

...view details