ಕರ್ನಾಟಕ

karnataka

By

Published : Feb 3, 2021, 4:47 PM IST

Updated : Feb 3, 2021, 6:52 PM IST

ETV Bharat / state

ಜಾಮೀನಿನ ಮೇಲೆ ಹೊರಗಿರುವ ಯಡಿಯೂರಪ್ಪ ಸಿಎಂ ಹುದ್ದೆಯಲ್ಲಿ ಮುಂದುವರೆಯುವುದು ಸರಿಯೇ: ಸಿದ್ದರಾಮಯ್ಯ ಪ್ರಶ್ನೆ

ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗಣಿ ಸಚಿವ ಮುರುಗೇಶ್ ನಿರಾಣಿ ಅವರ ವಿರುದ್ಧ ಆರೋಪಗಳಿವೆ. ಈ ಸಂಬಂಧ ಹೈಕೋರ್ಟ್ ನೀಡಿದ ತೀರ್ಪನ್ನು ವಜಾ ಮಾಡುವಂತೆ ಇಬ್ಬರೂ ಸುಪ್ರೀಂಕೋರ್ಟ್​ಗೆ ಹೋದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿದೆ ಎಂದರು.

ಸಿದ್ದರಾಮಯ್ಯ
Siddaramaiah

ಬೆಂಗಳೂರು:ಡಿನೋಟಿಫಿಕೇಷನ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವುದು ಸರಿಯೇ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗಣಿ ಸಚಿವ ಮುರುಗೇಶ್ ನಿರಾಣಿ ಅವರ ವಿರುದ್ಧ ಆರೋಪಗಳಿವೆ. ಈ ಸಂಬಂಧ ಹೈಕೋರ್ಟ್ ನೀಡಿದ ತೀರ್ಪನ್ನು ವಜಾ ಮಾಡುವಂತೆ ಇಬ್ಬರೂ ಸುಪ್ರೀಂಕೋರ್ಟ್​ಗೆ ಹೋದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿದೆ ಎಂದರು.

ಹೀಗಾಗಿ ನಾಳೆ ಅವರ ಬಂಧನವಾಗಬಹುದು. ಹಾಗಾಗದಂತೆ ಸುಪ್ರೀಂಕೋರ್ಟ್ ನೀಡಿದ್ದರೂ ಇದರ ಆಧಾರದ ಮೇಲೆ ಹೊರಗಿರುವ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವೇ ಎಂದು ಪ್ರಶ್ನಿಸಿದಾಗ ಸದನದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್​ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಶಾಸಕರಾದ ಬೋಪಯ್ಯ ದನಿಗೂಡಿಸಿದರು. ಈ ಹಂತದಲ್ಲಿ ಸಿದ್ದರಾಮಯ್ಯ ಬೆಂಬಲಕ್ಕೆ ರಮೇಶ್ ಕುಮಾರ್ ಧಾವಿಸಿ ಪ್ರತಿಪಕ್ಷದ ನಾಯಕರ ಹೇಳಿಕೆ ಸಮರ್ಥಿಸಿಕೊಂಡರು, ಆಗ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಅದನ್ನು ವಿರೋಧಿಸಿದರು.

ನಿರೀಕ್ಷಣಾ ಜಾಮೀನು ಬಂದ ಇತಿಹಾಸ ಹೇಳಿದ ರಮೇಶ್​ ಕುಮಾರ್​:

ಸದ್ಯದ ಸ್ಥಿತಿಯಲ್ಲಿ ಮುಂದಿನ ಸನ್ನಿವೇಶದ ಬಗ್ಗೆ ಮಾತನಾಡುವುದು ಬೇಡ ಎಂದಾಗ ಪುನಃ ಮಾತನಾಡಿದ ರಮೇಶ್ ಕುಮಾರ್, ಕೇಂದ್ರದಲ್ಲಿ ಜನತಾದಳ ಸರ್ಕಾರ ಬರುವವರೆಗೆ ರಾಜಕಾರಣದಲ್ಲಿ ಯಾರೂ ನಿರೀಕ್ಷಣಾ ಜಾಮೀನು ಪಡೆಯುವ ಸ್ಥಿತಿ ಇರಲಿಲ್ಲ ಎಂದು ಹೇಳಿದರು.

ಬಳಿಕ ಸಿದ್ದರಾಮಯ್ಯ ಮಾತನಾಡಿ, ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳು, ಮಂತ್ರಿಗಳಿದ್ದಾರೆ.ಹೀಗಾಗಿ ಇವರು ಮುಂದುವರಿಯುವುದು ನೈತಿಕವಲ್ಲ ಎಂದು ಜನ ಹೇಳುತ್ತಾರೆ. ಹೀಗಾಗಿ ಅದನ್ನು ಪ್ರಸ್ತಾಪಿಸಿದ್ದೇನೆ ಎಂದರು.

ಓದಿ: 'ನೀನು ವಿಸ್ಕಿ ಕುಡಿದಿದ್ದೇನಪ್ಪಾ ಲಿಂಬಾವಳಿ'.. ಸಿದ್ದರಾಮಯ್ಯ ಹಾಕಿದ ಪ್ರಶ್ನೆಗೆ ತಬ್ಬಿಬ್ಬಾದ ಸಚಿವರು..

ಪುನಃ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಇರುವವರ ಮೇಲೆ ದೂರು ದಾಖಲಾಗುವುದು ಸಹಜ.ಇದು ಅವರಿವರಿಗೆ ಅಂತಲ್ಲ,ಬಹುತೇಕ ಎಲ್ಲರ ಮೇಲೆ ಇಂತಹ ಮೊಕದ್ದಮೆಗಳು ದಾಖಲಾಗಿವೆ. ಇದು ಜನರಿಗೂ ಗೊತ್ತಿದೆ. ದಾಖಲಾದ ಮೊಕದ್ದಮೆಗಳಲ್ಲಿ ಹಲವು ಮಂದಿ ನಿರ್ದೋಷಿಗಳು ಎಂದು ಹೊರಬಂದಿದ್ದಾರೆ. ಹೀಗಾಗಿ ಆರೋಪ ಬಂದ ಕೂಡಲೇ ಅದನ್ನು ದೊಡ್ಡದು ಮಾಡಲು ಸಾಧ್ಯವಿಲ್ಲ ಎಂದರು.

ಆಡಳಿತ ಪಕ್ಷದಲ್ಲಿದ್ದವರ ಮೇಲೂ ಆರೋಪಗಳು ಬರುತ್ತವೆ. ವಿರೋಧ ಪಕ್ಷಗಳ ಮೇಲೂ ಆರೋಪ ಬರುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದಾಗ ಮಧ್ಯೆ ಪ್ರವೇಶಿಸಿದ ರಮೇಶ್ ಕುಮಾರ್ ಈ ವಿಷಯವನ್ನು ನಾವೇಕೆ ಪ್ರಸ್ತಾಪಿಸಿದ್ದೇವೆ ಎಂದರೆ, ಈಗಿನ ಬೆಳವಣಿಗೆಗಳನ್ನು ಜನ ನೋಡುತ್ತಿರುತ್ತಾರೆ. ಹೀಗಾಗಿ ನಾವು ಇದರ ಬಗ್ಗೆ ಮಾತನಾಡದಿದ್ದರೆ ಇವರೇನು ಹೊಂದಾಣಿಕೆ ಮಾಡಿಕೊಂಡಿದ್ದಾರಾ ಅಂತ ಜನ ಪ್ರಶ್ನೆ ಮಾಡುತ್ತಾರೆ ಎಂದು ಹೇಳಿದರು.

ನಂತರ ಮಾತನಾಡಿದ ಸಿದ್ದರಾಮಯ್ಯ, ಇದು ಕೇವಲ ನೈತಿಕತೆಯ ಪ್ರಶ್ನೆ. ಈ ಹಿಂದೆ ನನ್ನ ಸರ್ಕಾರದಲ್ಲಿ ಸಚಿವರಾಗಿದ್ದ ಜಾರ್ಜ್ ಅವರ ಮೇಲೆ ಆರೋಪ ಬಂತು. ಸಿಬಿಐ ತನಿಖೆಗೆ ಆದೇಶ ನೀಡಲಾಯಿತು. ಜಾರ್ಜ್ ರಾಜೀನಾಮೆ ನೀಡಿದರು. ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಪ್ರಕರಣಗಳನ್ನು ನೋಡಬೇಕು ಎಂದರು.

ಈ ಹಿಂದೆ ನನ್ನನ್ನು ಸುಖಾಸುಮ್ಮನೆ ಬಲಿಪಶು ಮಾಡಲಿಲ್ಲವೇ?

ನಂತರ ಮಾಜಿ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಬಿಜೆಪಿಯವರು ನನ್ನ ಮೇಲೆ ಸದನದಲ್ಲಿ ಧರಣಿ ಮಾಡಿ ಸಿಬಿಐ ತನಿಖೆಗೆ ದಾರಿ ಮಾಡಿಕೊಟ್ಟರು. ಆದರೆ ಮುಂದೆ ಸಿಬಿಐ ನನ್ನನ್ನು ನಿರ್ದೋಷಿ ಎಂದು ಹೇಳಿತು. ಅದಾದ ನಂತರ ಮತ್ತೆ ಸಚಿವನಾದೆ ಎಂದು ಹೇಳಿದರು.

Last Updated : Feb 3, 2021, 6:52 PM IST

ABOUT THE AUTHOR

...view details