ಕರ್ನಾಟಕ

karnataka

ETV Bharat / state

ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಎನ್​​ಪಿಎ ಹೆಚ್ಚಳ... ಬ್ಯಾಂಕ್ ವ್ಯವಹಾರಗಳ ಮೇಲೆ ನಿರ್ಬಂಧ ಹೇರಿದ ಆರ್​ಬಿಐ - Shree Guru Raghavendra Co-operative Bank

ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್​​ನ ಎನ್​ಪಿಎ ಹೆಚ್ಚಿದನ್ನು ಗಮನಿಸಿ, ಆರ್​​ಬಿಐ ಬ್ಯಾಂಕ್ ವ್ಯವಹಾರಗಳ ಮೇಲೆ ನಿರ್ಬಂಧ ಹೇರಿದೆ.

Shree Guru Raghavendra Co-operative Bank
Shree Guru Raghavendra Co-operative Bank

By

Published : Jan 14, 2020, 5:46 PM IST

ಬೆಂಗಳೂರು:ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದಷ್ಟು ವಸೂಲಾತಿಯಾಗದ ಸಾಲ (ಎನ್​ಪಿಎ) ಬಾಕಿ ಉಳಿದುಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕು ಈ ಸಹಕಾರಿ ಬ್ಯಾಂಕಿಗೆ, ಆರು ತಿಂಗಳವರೆಗೆ ವಿವಿಧ ನಿರ್ಬಂಧಗಳನ್ನು ಹೇರಿದೆ.

ಒಬ್ಬ ಗ್ರಾಹಕರು ಆರು ತಿಂಗಳಲ್ಲಿ 35 ಸಾವಿರ ರೂಗಿಂತ ಹೆಚ್ಚು ಹಣ ವಿತ್​ಡ್ರಾ ಮಾಡುವಂತಿಲ್ಲ ಎಂದೂ ಸೂಚಿಸಿದ್ದು,ಬ್ಯಾಂಕಿನ ಗ್ರಾಹಕರು ಎಷ್ಟೇ ಠೇವಣಿ ಇಟ್ಟಿದ್ದರೂ, ಮುಂದಿನ ಸೂಚನೆವರೆಗೂ ಕೇವಲ 35,000 ರೂಪಾಯಿ ಅಷ್ಟೇ ಹಿಂಪಡೆಯಬಹುದು.

ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಎನ್​​ಪಿಎ ಹೆಚ್ಚಳ

ಸದ್ಯಕ್ಕೆ ಈಗ ಬ್ಯಾಂಕ್ ಆಡಳಿತ ಮಂಡಳಿ ನಗರದ ಆರ್​ಬಿಐ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದು, ಹೇರಿದ ನಿರ್ಬಂಧಗಳನ್ನು ಸಡಿಲಿಕೆ ಮಾಡಲು ಬ್ಯಾಂಕ್ ಆಡಳಿತ ಮಂಡಳಿ ಮನವಿಯನ್ನು ಮಾಡುತ್ತಿದೆ. ಸಭೆಯ ನಂತರ ಬ್ಯಾಂಕ್ ಆಡಳಿತ ಮಂಡಳಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಬ್ಯಾಂಕ್​ನ ಗ್ರಾಹಕರಾದ ರಾಮಚಂದ್ರು ಮಾತನಾಡಿ, ನಮಗೆ ಬ್ಯಾಂಕ್ ಮೇಲೆ ಪೂರ್ಣ ವಿಶ್ವಾಶವಿದೆ. ನಾನು 7 ಲಕ್ಷ ರೂಪಾಯಿ ಠೇವಣಿಯನ್ನು ಇಟ್ಟಿದ್ದೇನೆ. ಸಮಯಕ್ಕೆ ಸರಿಯಾಗಿ ಬ್ಯಾಂಕ್ ಬಡ್ಡಿಯನ್ನು ನೀಡುತ್ತಿತ್ತು. ಕೆಲ ತಪ್ಪುಗಳಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಹಣ ಸುರಕ್ಷಿತವಾಗಿ ಇರುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ABOUT THE AUTHOR

...view details