ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ಸಂಕಷ್ಟಕ್ಕೆ ಮಿಡಿದ ಬೆಂಗಳೂರು ವಿಮಾನ ನಿಲ್ದಾಣ... ನಿತ್ಯವೂ 3500 ಊಟದ ಪೊಟ್ಟಣ ವಿತರಣೆ - corona news

ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಂಪಸ್​​ನಲ್ಲಿರುವ ಕಾರ್ಪೊರೇಟ್​ ಸಂಸ್ಥೆಗಳು ಲಾಕ್​ಡೌನ್​​ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಒದಗಿಸುತ್ತಿದೆ. ಸುಮಾರು 3,500 ದೈನಂದಿನ ಊಟದ ಪೊಟ್ಟಣಗಳಲ್ಲಿ ಮಧ್ಯಾಹ್ನದ ಭೋಜನಕ್ಕಾಗಿ 2,000 ಪೊಟ್ಟಣಗಳು ಮತ್ತು ರಾತ್ರಿಯ ಭೋಜನಕ್ಕಾಗಿ 1,500 ಭೋಜನದ ಪೊಟ್ಟಣಗಳನ್ನು ವಿತರಿಸಲಾಗುತ್ತದೆ.

ನಮ್ಮ ಚೇತನ ಮುಖಾಂತರ ಬೆಂಗಳೂರು ವಿಮಾನ ನಿಲ್ದಾಣದಿಂದ ಸೇವೆ!
ನಮ್ಮ ಚೇತನ ಮುಖಾಂತರ ಬೆಂಗಳೂರು ವಿಮಾನ ನಿಲ್ದಾಣದಿಂದ ಸೇವೆ!

By

Published : Apr 5, 2020, 9:52 AM IST

ಬೆಂಗಳೂರು: ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ನಾಗರಿಕರ ಬೆಂಬಲಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಮ್ಮ ಚೇತನ ಹೆಸರಿನ ಹೊಸ ಉಪಕ್ರಮಕ್ಕೆ ಚಾಲನೆ ನೀಡಿದೆ.

ನಮ್ಮ ಚೇತನ ಮುಖಾಂತರ ಬೆಂಗಳೂರು ವಿಮಾನ ನಿಲ್ದಾಣದಿಂದ ಸೇವೆ!

ಬೆಂಗಳೂರು ವಿಮಾನ ನಿಲ್ದಾಣದ ಕ್ಯಾಂಪಸ್​​ಲ್ಲಿರುವ ಇತರೆ ಕಾರ್ಪೋರೇಟ್ ಸಂಸ್ಥೆಗಳಾದ ಎಚ್ಎಂಎಸ್ ಹೋಸ್ಟ್, ಸತೀಸ್ ಡೈನಿಂಗ್, ತಾಜ್ ಬೆಂಗಳೂರು, ಟ್ರಾವಲ್ ಫುಡ್ ಸರ್ವೀಸಸ್(ಟಿಎಫ್ಎಸ್) ಗಳೊಂದಿಗೆ ಕೈಗೂಡಿಸಿ ಜಂಟಿ ಕಾರ್ಯವನ್ನು ಆರಂಭಿಸಿದೆ. ಇದರಡಿಯಲ್ಲಿ ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಪ್ರತಿದಿನ 3,500 ಆಹಾರದ ಪೊಟ್ಟಣಗಳನ್ನು ಪೂರೈಸಲಾಗುತ್ತಿದೆ.

ನಮ್ಮ ಚೇತನ ಮುಖಾಂತರ ಬೆಂಗಳೂರು ವಿಮಾನ ನಿಲ್ದಾಣದಿಂದ ಸೇವೆ!

ಜಿಲ್ಲಾಡಳಿತದ ಬೆಂಬಲದ ಜೊತೆಗೆ ಬೆಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತಲಿನಲ್ಲಿ ಅಗತ್ಯವಿರುವವರಿಗೆ ಈ ಆಹಾರವನ್ನು ತಲುಪಿಸಲಾಗುತ್ತದೆ. ಸುಮಾರು 3,500 ದೈನಂದಿನ ಊಟದ ಪೊಟ್ಟಣಗಳಲ್ಲಿ ಮಧ್ಯಾಹ್ನದ ಭೋಜನಕ್ಕಾಗಿ 2,000 ಪೊಟ್ಟಣಗಳು ಮತ್ತು ರಾತ್ರಿಯ ಭೋಜನಕ್ಕಾಗಿ 1,500 ಭೋಜನದ ಪೊಟ್ಟಣಗಳನ್ನು ವಿತರಿಸಲಾಗುತ್ತದೆ.

ನಮ್ಮ ಚೇತನ’ ಎಂಬ ಯೊಜನಾ ಕ್ರಮವನ್ನು ನಾವು ಆರಂಭಿಸಿದ್ದೇವೆ. ಈ ಮುಖಾಂತರ ಪ್ರಸ್ತುತ ಸನ್ನಿವೇಶದಲ್ಲಿ ಬಳಲುತ್ತಿರುವ ನಮ್ಮಿಂದಾದ ಸಹಕಾರ ಮಾಡುತ್ತಿದ್ದೇವೆ ಎಂದು ಎಂದು ಬಿಐಎಎಲ್​ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮಾರರ್ ಹೇಳಿದ್ದಾರೆ.

ABOUT THE AUTHOR

...view details