ಕರ್ನಾಟಕ

karnataka

ETV Bharat / state

ಮಂಗಳೂರು ಗಲಭೆ ಪ್ರಕರಣ: ವಿಶೇಷ ಅಭಿಯೋಜಕರಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ನೇಮಕ - Senior counsel C.V Nagesh appointed of Special Prosecutor,

ಮಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಪ್ರಕರಣವನ್ನು ವಾದಿಸಲು ಸರ್ಕಾರದ ಪರವಾಗಿ ವಾದ ಮಂಡಿಸಲು ವಿಶೇಷ ಅಭಿಯೋಜಕರಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ನೇಮಕಗೊಂಡಿದ್ದಾರೆ.

Senior counsel C.V Nagesh appointed, Senior counsel C.V Nagesh appointed of Special Prosecutor, Mangalore riots case, Mangalore riots case news, ಹಿರಿಯ ವಕೀಲ ಸಿ.ವಿ. ನಾಗೇಶ್ ನೇಮಕ, ವಿಶೇಷ ಅಭಿಯೋಜಕರಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ನೇಮಕ, ಮಂಗಳೂರು ಗಲಭೆ ಪ್ರಕರಣ, ಮಂಗಳೂರು ಗಲಭೆ ಪ್ರಕರಣ ಸುದ್ದಿ,
ಕೃಪೆ: ಸಾಮಾಜಿಕ ಜಾಲತಾಣ

By

Published : Mar 6, 2020, 11:07 PM IST

ಬೆಂಗಳುರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆದ ವೇಳೆ ಗಲಭೆ ಸೃಷ್ಟಿಸಿದವರ ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಸರ್ಕಾರದ ಪರ ವಾದಿಸಲು ಹಿರಿಯ ವಕೀಲ ಸಿ.ವಿ. ನಾಗೇಶ್ ಅವರನ್ನು ನೇಮಕಗೊಂಡಿದ್ದಾರೆ.

ಇದನ್ನು ಓದಿ:ಬೀದರ್​ನ ಶಾಹೀನ್​ ಶಾಲೆ ವಿರುದ್ಧ ದೇಶದ್ರೋಹ ಪ್ರಕರಣ: ಪಿಐಎಲ್ ವಜಾಗೊಳಿಸಿದ ಸುಪ್ರೀಂ

ಪ್ರತಿಭಟನೆ ರಾಜಕೀಯವಾಗಿಯೂ ತಳುಕು ಹಾಕಿಕೊಂಡಿರುವುದರಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನಾಕಾರರ ಪರ ಈಗಾಗಲೇ ಹಿರಿಯ ವಕೀಲರು ವಾದ ಮಂಡಿಸುತ್ತಿದ್ದಾರೆ. ಈ ಹಿನ್ನೆಲೆ ಅಭಿಯೋಜನೆಯ ಪರ ವಾದಿಸಲು ಕ್ರಿಮಿನಲ್ ಪ್ರಕರಣಗಳಲ್ಲಿ ಹೆಚ್ಚಿನ ಅನುಭವ ಇರುವ ವಕೀಲರ ಅಗತ್ಯವಿತ್ತು. ಹೀಗಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್​ ಅವರನ್ನು ವಿಶೇಷ ಅಭಿಯೋಜಕರಾಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.

ಇದನ್ನು ಓದಿ:ಸ್ಲಂ ಭರತನ ಎನ್​​ಕೌಂಟರ್​ಗೆ ಸೈಲೆಂಟ್​​​ ಆದ ರೌಡಿಗಳು: ಒಂದೇ ದಿನ ಐವರ ಶರಣಾಗತಿ​​

ವಿಶೇಷ ಅಭಿಯೋಜಕರಾಗಿ ಸಿ.ವಿ.ನಾಗೇಶ್ ವಿಚಾರಣಾ ನ್ಯಾಯಾಲಯಗಳಲ್ಲಿ ವಾದಿಸುವುದಿಲ್ಲ. ಬದಲಿಗೆ ಹೈಕೋರ್ಟ್​ನಲ್ಲಿ ಮಾತ್ರ ಅಭಿಯೋಜನೆ ಪರ ವಾದ ಮಂಡಿಸಲಿದ್ದಾರೆ.

ABOUT THE AUTHOR

...view details