ಕರ್ನಾಟಕ

karnataka

ETV Bharat / state

ಬೆಂಗಳೂರು: ಬೇಡ ಜಂಗಮ ಜನಾಂಗದಿಂದ ಸತ್ಯ ಪ್ರತಿಪಾದನಾ ಸತ್ಯಾಗ್ರಹ - sathya prathipadhana sathyagraha conducted by Beda Jangama in Bengaluru

ನಮ್ಮ ಜನಾಂಗವನ್ನು ಪರಿಶಿಷ್ಟ ಜಾತಿಯಿಂದ ಕೈಬಿಡುವ ಹುನ್ನಾರ ನಡೆದಿದೆ. ಇದನ್ನು ವಿರೋಧಿಸಿ ನಾವು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದು ಬೇಡ ಜನವಾಂಗದ ಪ್ರತಿಭಟನಾಕಾರರು ತಿಳಿಸಿದರು.

ಬೇಡ ಜಂಗಮ ಜನಾಂಗದಿಂದ ಸತ್ಯ ಪ್ರತಿಪಾದನಾ ಸತ್ಯಾಗ್ರಹ
ಬೇಡ ಜಂಗಮ ಜನಾಂಗದಿಂದ ಸತ್ಯ ಪ್ರತಿಪಾದನಾ ಸತ್ಯಾಗ್ರಹ

By

Published : Jun 30, 2022, 10:21 PM IST

ಬೆಂಗಳೂರು: ಬೇಡ ಜಂಗಮ ಜನಾಂಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಸತ್ಯ ಪ್ರತಿಪಾದನ ಸತ್ಯಾಗ್ರಹ ನಡೆಯುತ್ತಿದೆ. ಪರಿಶಿಷ್ಟ ಪಂಗಡದಲ್ಲಿರುವ ಜಂಗಮರೇ ಬೇರೆ, ಬೇಡ ಜಂಗಮರೇ ಬೇರೆ ಎನ್ನುವ ವಾದವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.


ಪರಿಶಿಷ್ಟ ಪಂಗಡದಲ್ಲಿರುವ ವೀರಶೈವ ಲಿಂಗಾಯತ ಉಪ ಜಾತಿಯಾಗಿ ಬೇಡ ಜಂಗಮರು ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಆದರೆ, ನಮ್ಮ ಜನಾಂಗವನ್ನು ಪರಿಶಿಷ್ಟ ಜಾತಿಯಿಂದ ಕೈಬಿಡುವ ಹುನ್ನಾರ ನಡೆದಿದೆ. ಇದನ್ನು ವಿರೋಧಿಸಿ ನಾವು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ. ಶಾಂತಿಯುತ ಸತ್ಯಾಗ್ರಹಕ್ಕಾಗಿ ಆಗಮಿಸುತ್ತಿದ್ದ ನಮ್ಮವರನ್ನು ತಡೆಯಲಾಗಿದೆ. ತಕ್ಷಣ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು.

ಇದನ್ನೂ ಓದಿ:ಸಾಲುಮರದ ತಿಮ್ಮಕ್ಕ ಪರಿಸರದ ರಾಯಭಾರಿ, ಸರ್ಕಾರದಿಂದ ವಿಶೇಷ ಸೌಲಭ್ಯ: ಸಿಎಂ ಬೊಮ್ಮಾಯಿ

For All Latest Updates

TAGGED:

ABOUT THE AUTHOR

...view details