ಕರ್ನಾಟಕ

karnataka

ETV Bharat / state

ಬೆಂಗಳೂರು ಗಲಭೆ ಪ್ರಕರಣ: ಮಾಜಿ ಮೇಯರ್​ ಸಂಪತ್​ ರಾಜ್​ಗೆ ಮತ್ತೆ ಸಿಸಿಬಿ ಬುಲಾವ್​

ಬೆಂಗಳೂರಿನ ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್​ಗೆ ಮತ್ತೆ ಸಂಕಷ್ಟ ಎದುರಾಗಿದೆ.

By

Published : Sep 18, 2020, 9:37 AM IST

fd
ವಿಚಾರಣೆಗೆ ಹಾಜರಾಗುವಂತೆ ಸಂಪತ್​ ರಾಜ್​ಗೆ ಸಿಸಿಬಿ ಬುಲಾವ್​

ಬೆಂಗಳೂರು: ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್​ಗೆ ಸಿಸಿಬಿ ಬುಲಾವ್ ನೀಡಿದೆ.

ಕಳೆದ ಬಾರಿ ವಿಚಾರಣೆಗೆ ಹಾಜರಾಗಿದ್ದ ಸಂಪತ್ ರಾಜ್​ ಸಿಸಿಬಿ ಪೊಲೀಸರ ಪ್ರಶ್ನೆಗೆ ತತ್ತರಿಸಿ ಹೋಗಿದ್ದರು. ಅಷ್ಟು ಮಾತ್ರವಲ್ಲದೇ ಸಂಪತ್​ ರಾಜ್​ ಅವರ ಐಫೋನ್ ಮೊಬೈಲ್​ನ್ನು ಜಪ್ತಿ ಮಾಡಿ ಎಫ್ಎಸ್ಎಲ್​ಗೆ ರವಾನಿನಿಸಲಾಗಿತ್ತು. ಸದ್ಯ ಮೊಬೈಲ್ ರಿಟ್ರೈವ್​ ಹಾಗೂ ಬಂಧಿತರ ಹೇಳಿಕೆಯ ಆಧಾರದ‌ ಮೇರೆಗೆ ಸಿಸಿಬಿ ಪೊಲೀಸರು ಮತ್ತೆ ವಿಚಾರಣೆಗೆ ಕರೆದಿದ್ದು, ವಿಚಾರಣೆ ವೇಳೆ ದ್ವಂದ್ವ ಹೇಳಿಕೆ ನೀಡಿದರೆ ಸಿಸಿಬಿ ಪೊಲೀಸರು ಬಂಧಿಸುವುದು ಬಹುತೇಕ ಖಚಿತ ಎನ್ನಲಾಗ್ತಿದೆ.

ಸದ್ಯ ಮಾಜಿ ಮೇಯರ್ ಕೊರೊನಾ ಪಾಸಿಟಿವ್ ಕಾರಣ ನೀಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಬಹುತೇಕವಾಗಿ ಇಂದು ವಿಚಾರಣೆಗೆ ಹಾಜರಾಗುವುದು ಅನುಮಾನ ಎನ್ನಲಾಗಿದೆ. ಹೀಗಾಗಿ ಸಿಸಿಬಿ ಪೊಲೀಸರು ಸದ್ಯ ಸಂಪತ್ ರಾಜ್ ಚಲನವಲನ ಗಮನಿಸುತ್ತಿದ್ದಾರೆ.

ABOUT THE AUTHOR

...view details