ಕರ್ನಾಟಕ

karnataka

ETV Bharat / state

ಪರಪ್ಪನ ಅಗ್ರಹಾರ ಜೈಲಲ್ಲಿ ಎದುರು-ಬದುರಾದ ಮಾಜಿ ಮೇಯರ್-ಮಾಜಿ ಮಿನಿಸ್ಟರ್

ಬೆಂಗಳೂರಿನ ಪರಪ್ಪನ ಅಗ್ರಹಾರ ಸದ್ಯ ಪ್ರಮುಖ ವ್ಯಕ್ತಿಗಳನ್ನೇ ವಿಚಾರಣಾ ಕೈದಿಗಳಾಗಿ ಸೇರಿಸಿಕೊಂಡಿದೆ. ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಮೇಯರ್​ ಸಂಪತ್​ ಹಾಗೂ ಐಎಂಎ ಬಹುಕೋಟಿ ಹಗರಣದ ಆರೋಪಿಯಾಗಿರುವ ಮಾಜಿ ಸಚಿವ ರೋಷನ್​​ ಬೇಗ್​ ಇಬ್ಬರೂ ಸದ್ಯ ಪರಪ್ಪನ ಅಗ್ರಹಾರದ ಅತಿಥಿಗಳಾಗಿದ್ದಾರೆ.

By

Published : Nov 23, 2020, 10:02 AM IST

sampath raj and roshan beg in -parappana agarahara jail
ಜೈಲಲ್ಲಿ ಒಂದಾದ ಮಾಜಿ ಮೇಯರ್

ಬೆಂಗಳೂರು: ಪರಪ್ಪನ ಅಹ್ರಹಾರ ಜೈಲು ಸದ್ಯ ಹೈ- ಫೈ ವ್ಯಕ್ತಿಗಳು ಇರುವ ಕೇಂದ್ರವಾಗಿದೆ. ಹೊರಗೆ ಐಷಾರಾಮಿ ಬದುಕನ್ನ ನಡೆಸುತ್ತಿದ್ದವರಿಗೆ ಸದ್ಯ ಜೈಲಲ್ಲಿ ವಿಚಾರಣಾ ಕೈದಿಗಳಾಗಿ ಇರುವುದು ಅನಿವಾರ್ಯವಾಗಿದೆ.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಇಟ್ಟ ಪ್ರಕರಣದ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್​​ ರಾಜ್ ಸದ್ಯ ಜಯದೇವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮತ್ತೆ ಜೈಲು ಪಾಲಾಗಿದ್ದಾರೆ. ಹಾಗೆ ಇತ್ತ ನಿನ್ನೆ ರಾತ್ರಿ ಐಎಂಎ ಪ್ರಕರಣದಲ್ಲಿ ಮನ್ಸೂರ್ ಖಾನ್​ನಿಂದ ಲಂಚ ಪಡೆದಿರುವ ಮಾಜಿ ಮಿನಿಸ್ಟರ್ ರೋಷನ್ ಬೇಗ್ ಕೂಡ ಪರಪ್ಪನ ಅಗ್ರಹಾರ ಸೇರಿದ್ದಾರೆ. ಆದರೆ ಸದ್ಯ ಕೊರೊನಾ ಇರುವ ಕಾರಣ ಹೊರಗಡೆಯಿಂದ ಬರುವ ಪ್ರತಿ ವ್ಯಕ್ತಿಗಳಿಗೆ 14 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಹೀಗಾಗಿ ಸದ್ಯ ಇಬ್ಬರನ್ನ ಪ್ರತ್ಯೇಕ ಸೆಲ್​ನಲ್ಲಿ ಇರಿಸಲಾಗಿದೆ.

ಇಬ್ಬರು ಎದುರು - ಬದುರು ಬ್ಯಾರಕ್ ನಲ್ಲಿದ್ದಾರೆ. ಇಬ್ಬರು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡವರು. ಸದ್ಯ ಬೇರೆ ಬೇರೆ ಪ್ರಕರಣದಲ್ಲಿ ತಪ್ಪು ಮಾಡಿ ಜೈಲು ಕಂಬಿ ಎಣಿಸುವಂತಾಗಿದೆ. ಜೈಲಾಧಿಕಾರಿಗಳು ಇಬ್ಬರಿಗೂ ನಿಯಮವನ್ನ ಹೇರಿದ್ದಾರೆ. ಯಾವುದೇ ಕಾರಣಕ್ಕೂ ಕ್ವಾರಂಟೈನ್ ನಿಯಮವನ್ನು ಉಲ್ಲಂಘನೆ ಮಾಡಬಾರದು. 14ದಿನ ಕ್ವಾರಂಟೈನ್ ಮುಗಿಸಿದ ಬಳಿಕ ಕೊರೊನಾ ಚೆಕ್​​ಅಪ್ ನಡೆಸಿದ ನಂತರ ಮತ್ತೆ ಸಾಮಾನ್ಯ ಸೆಲ್​ಗೆ ಹಾಕಲಾಗುವುದು ಎಂದು ಸೂಚಿಸಿದ್ದಾರೆ ಎನ್ನಲಾಗ್ತಿದೆ.

ABOUT THE AUTHOR

...view details