ಕರ್ನಾಟಕ

karnataka

ETV Bharat / state

ವಾಸಕ್ಕೊಂದು ಸೂರು ಕೊಡಿ: ಸಿಎಂಗೆ ಸಾಲುಮರದ ತಿಮ್ಮಕ್ಕ ಮನವಿ - ಸಾಲುಮರದ ತಿಮ್ಮಕ್ಕ

ಜೀವನ ನಿರ್ವಹಣೆಗಾಗಿ ಒಂದಿಷ್ಟು ಕೃಷಿ ಜಮೀನು ಮತ್ತು ವಾಸಕ್ಕೆ ಯೋಗ್ಯವಾದ ಮನೆ ಮಂಜೂರಾತಿ ಮಾಡಿ ಕೊಡುವಂತೆ ಸಿಎಂಗೆ ಸಾಲುಮರದ ತಿಮ್ಮಕ್ಕನವರು ಮನವಿ ಮಾಡಿದರು.

salumarada-timmakka-appeal-to-cm-to-sanction-a-home
ವಾಸಕ್ಕೊಂದು ಸೂರು ಕೊಡಿ: ಸಿಎಂಗೆ ಸಾಲುಮರದ ತಿಮ್ಮಕ್ಕ ಮನವಿ

By

Published : Jun 12, 2021, 1:20 AM IST

ಹಾಸನ: ವಾಸಕ್ಕೊಂದು ಮನೆಯ ಜೊತೆಗೆ ಬದಕಲು ಒಂದಿಷ್ಟು ಜಮೀನು ಮಂಜೂರು ಮಾಡಿಕೊಡಿ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತರಾಗಿರುವ ನಾಡೋಜ ಡಾ. ಸಾಲುಮರದ ತಿಮ್ಮಕ್ಕ ಮುಖ್ಯಮಂತ್ರಿಗೆ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಕೋವಿಡ್ ಪರಿಶೀಲನಾ ಸಭೆಯ ಬಳಿಕ ಸಾಲು ಮರದ ತಿಮ್ಮಕ್ಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು. ಇದೇ ವೇಳೆ ಜೀವನ ನಿರ್ವಹಣೆಗಾಗಿ ಒಂದಿಷ್ಟು ಕೃಷಿ ಜಮೀನು ಮತ್ತು ವಾಸಕ್ಕೆ ಯೋಗ್ಯವಾದ ಮನೆ ಮಂಜೂರಾತಿ ಮಾಡಿ ಕೊಡುವಂತೆ ಹೇಳಿದರು.

ಸಿಎಂಗೆ ಮನವಿ ಮಾಡಿದ ಸಾಲುಮರದ ತಿಮ್ಮಕ್ಕ

ತಿಮ್ಮಕ್ಕ ಅವರ ಮಾತುಗಳನ್ನು ಆಲಿಸಿದ ಮುಖ್ಯಮಂತ್ರಿಯವರು ಶೀಘ್ರವಾಗಿ ಮನವಿ ಪರಿಗಣಿಸಿ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ:ಮೃಧುಭಾಷಿ, ಹಾಸ್ಯಪ್ರಿಯ, ಕ್ರಾಂತಿ ಗೀತೆಯ ಹರಿಕಾರ ಸಿದ್ದಲಿಂಗಯ್ಯ ನಡೆದು ಬಂದ ಹಾದಿ ಇದು

ABOUT THE AUTHOR

...view details