ಕರ್ನಾಟಕ

karnataka

ಜಾಲಹಳ್ಳಿಯಲ್ಲಿ ರೋಡ್ ಶೋ: ಮುನಿರತ್ನ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ!

By

Published : Oct 30, 2020, 5:21 PM IST

ಆರ್​ಆರ್​ ನಗರ ಉಪ ಚುನಾವಣೆಯಲ್ಲಿ ಇಂದು ಘಟಾನುಘಟಿ ನಾಯಕರ ದಂಡೇ ಪ್ರಚಾರ ನಡೆಸಿದೆ. ಈ ವೇಳೆ, ಮಾಜಿ ಸಿಎಂ ಸಿದ್ದರಾಮಯ್ಯ ಜಾಲಹಳ್ಳಿ ರೋಡ್​ ಶೋನಲ್ಲಿ ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದರು.

Siddaramaiah spark on Munirathna, Siddaramaiah spark on Munirathnain Jalahalli road show, Siddaramaiah road show in Jalahalli, RR Nagar by poll 2020, RR Nagar by poll 2020 news, ಮುನಿರತ್ನ ಮೇಲೆ ಸಿದ್ದರಾಮಯ್ಯ ಕಿಡಿ, ಜಾಲಹಳ್ಳಿ ರೋಡ್​ ಶೋನಲ್ಲಿ ಮುನಿರತ್ನ ಮೇಲೆ ಸಿದ್ದರಾಮಯ್ಯ ಕಿಡಿ, ಜಾಲಹಳ್ಳಿಯಲ್ಲಿ ಸಿದ್ದರಾಮಯ್ಯರಿಂದ ರೋಡ್​ ಶೋ, ಆರ್​ಆರ್​ ನಗರ ಉಪ ಚುನಾವಣೆ 2020, ಆರ್​ಆರ್​ ನಗರ ಉಪ ಚುನಾವಣೆ 2020 ಸುದ್ದಿ,
ಜಾಲಹಳ್ಳಿ ರೋಡ್ ಶೋನಲ್ಲಿ ಮುನಿರತ್ನ ವಿರುದ್ಧ ಸಿದ್ದು ವಾಗ್ದಾಳಿ

ಬೆಂಗಳೂರು: ಆರ್​ಆರ್​ ನಗರ ಉಪಚುನಾವಣೆ ರಂಗೇರುತ್ತಿದೆ. ಜಾಲಹಳ್ಳಿಯಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಸಿದ್ದರಾಮಯ್ಯ, ಮುನಿರತ್ನ ವಿರುದ್ಧ ಹರಿಹಾಯ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಬೆಂಗಳೂರಿನ ಮತದಾರರು ಪ್ರಜ್ಞಾವಂತ ಮತದಾರರು. ನಿತ್ಯ ಬೆಂಗಳೂರಿನಲ್ಲಿ ಏನ್ ನಡೀತಿದೆ. ಇಲ್ಲಿ ಶಾಸಕರಾಗಿದ್ದವರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಅನ್ನೋದು ತಿಳ್ಕೊಂಡಿದ್ದಾರೆ. ಆರ್ ​ಆರ್ ನಗರದಲ್ಲಿ ಅಪರಾಧ ರಾಜಕಾರಣ ಜಾಸ್ತಿಯಾಗಿದೆ. ಸುಳ್ಳು ಕೇಸ್‌ಗಳನ್ನು ಹಾಕಿಸೋದು. ಭಯದ ವಾತಾವರಣ ನಿರ್ಮಿಸೋದು. ಜನರನ್ನ ಹೆದರಿಸಿ ಮತಗಟ್ಟೆಗೆ ಬಾರದಂತೆ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜಾಲಹಳ್ಳಿ ರೋಡ್ ಶೋನಲ್ಲಿ ಮುನಿರತ್ನ ವಿರುದ್ಧ ಸಿದ್ದು ವಾಗ್ದಾಳಿ

ಜನರನ್ನ ಹೆದರಿಸಿ, ಬೆದರಿಸಿ ಗೆಲ್ಲೋಕೆ ಹೊರಟ್ಟಿದ್ದಾರೆ ನಮ್ಮ ವಿರೋಧಿ ಅಭ್ಯರ್ಥಿ. ಮೊನ್ನೆ ನಾನು ಪ್ರಚಾರ ಮಾಡ್ತಿದ್ದಾಗ ಒಂದು ಗುಂಪು ನನಗೆ ಅಡ್ಡಿ ಮಾಡಿದ್ರು. ಆಗ‌ ಪೊಲೀಸನವರಿಗೆ ನಾನು ಹೇಳಿದೆ, ಶಾಸಕರಾದವರು ಇಲ್ಲೇ ಗೂಟ ಹೊಡ್ಕೊಂಡು ಕೂರಲ್ಲ. ನಿಮಗೆ ಪೋಸ್ಟಿಂಗ್ ಕೊಡಿಸಿದ್ದಾರೆ ಎಂದು ಅವರ ಪರವಾಗಿ ಕೆಲಸ ಮಾಡಿದ್ರೇ, ಮುಂದಿನ ದಿನಗಳಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತೆ. ಕಾನೂನು ಬಿಟ್ಟು ಕೆಲಸ ಮಾಡಿದ್ರೇ ಕೆಟ್ಟ ದಿನಗಳನ್ನ ಎದುರಿಸಬೇಕಾಗುತ್ತೆ ಅನ್ನೋದನ್ನ ಹೇಳಿದೆ ಎಂದರು.

ಮುನಿರತ್ನ ಹೆದರಿಸಿ, ಬೆದರಿಸಿ ಗೆಲ್ಲಬೋದು ಅನ್ಕೊಂಡಿದ್ರೇ ಅದು ನಿನ್ನ ಮೂರ್ಖತನ. ನಿನಗೆ ಮುನಿರತ್ನಂ ನಾಯ್ಡು ಅಂತಾ ವೋಟ್ ಹಾಕಿಲ್ಲ. ನೀನು ಕಾಂಗ್ರೆಸ್ ಅಂತಾ ವೋಟ್ ಹಾಕಿದ್ರೂ. ಅದನ್ನ ಮರಿಬೇಡಪ್ಪ ಮುನಿರತ್ನ. ಅಭಿವೃದ್ಧಿ ಮಾಡಿದ್ದೀನಿ.. ಅಭಿವೃದ್ಧಿ ಮಾಡಿದ್ದೀನಿ ಅಂತಾ ಎಲ್ಲ ಕಡೆ ಹೇಳ್ಕೊಂಡು ಓಡಾಡ್ತಿಯಾ. ನಿನಗೆ ದುಡ್ಡು ಕೊಟ್ಟಿದ್ದು ಯಾರಪ್ಪ ಎಂದು ಪ್ರಶ್ನಿಸಿದರು.

ಆರ್​ಆರ್ ನಗರ ಕಾಂಗ್ರೆಸ್ ಭದ್ರಕೋಟೆ. ನಿನ್ನ ಬದಲಾವಣೆ ಮಾಡ್ತಾರೆ. ಕಣ್ಣೀರು ಬೇರೆ ಹಾಕ್ತೀಯಾ. ಕಣ್ಣೀರು ಹಾಕಿದ್ರೇ ಜನ ಗೆಲ್ಲಿಸ್ತಾರೆ ಅನ್ಕೊಂಡಿದ್ಯಾ?. ಕಾಂಗ್ರೆಸ್ ನನ್ನ ತಾಯಿ ಅಂತಾ ಹೇಳ್ತಿದ್ದೆ. ಅಂತಹ ತಾಯಿಗೆ ಮೋಸ ಮಾಡಿದೀಯಾ ಅಂತಾ ಹೇಳಿರೋದು. ನಿನ್ನ ತಾಯಿಗೆ ದ್ರೋಹ ಅಂತಲ್ಲ ಎಂದು ತಾಯಿ - ತಂದೆಯ ರಾಜಕೀಯಕ್ಕೆ ಸಮಜಾಯಿಷಿ ನೀಡಿದರು.

ಇಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜಾಲಹಳ್ಳಿ, ಗೋರಗುಂಟೆಪಾಳ್ಯ, ಹೆಚ್​.ಎಂ.ಟಿ. ವಾರ್ಡ್ ವ್ಯಾಪ್ತಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಸುಮಾ ಹೆಚ್. ಮತ ಯಾಚಿಸಿದರು. ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಮುಖಂಡರು, ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ABOUT THE AUTHOR

...view details