ಕರ್ನಾಟಕ

karnataka

By

Published : Nov 1, 2020, 1:30 AM IST

ETV Bharat / state

ಆರ್​​ ಆರ್​ ನಗರದಲ್ಲಿ ಹಣದ ಹೊಳೆ: ಯೂತ್ ಕಾಂಗ್ರೆಸ್​ ಅಧ್ಯಕ್ಷನ ಕಾರಿನಲ್ಲಿ 2 ಲಕ್ಷ ರೂ ಜಪ್ತಿ!

ರಾಜರಾಜೇಶ್ವರಿ ನಗರದಲ್ಲಿ ಇದೀಗ ಹಣದ ಹೊಳೆ ಹರಿಯುತ್ತಿದ್ದು, ಇದಕ್ಕೆ ಪೂರಕ ಎಂಬ ರೀತಿಯಲ್ಲಿ ಯೂತ್​ ಕಾಂಗ್ರೆಸ್​ ಅಧ್ಯಕ್ಷನ ಕಾರಿನಲ್ಲಿ 2 ಲಕ್ಷ ರೂ. ಜಪ್ತಿ ಮಾಡಲಾಗಿದೆ.

RR Nagar by election
RR Nagar by election

ಬೆಂಗಳೂರು: ನವೆಂಬರ್​ 3ರಂದು ನಡೆಯಲಿರುವ ರಾಜರಾಜೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಇದೀಗ ಹಣದ ಹೊಳೆ ಹರಿಯುತ್ತಿದೆ ಎಂಬ ಮಾತು ಗಂಭೀರವಾಗಿ ಕೇಳಿ ಬಂದಿದ್ದು, ಇದೇ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

ಇದಕ್ಕೆ ಪೂರಕ ಎಂಬ ರೀತಿಯಲ್ಲಿ ಲಕ್ಷಾಂತರ ರೂಪಾಯಿ ಇಟ್ಟುಕೊಂಡು ಹೋಗುತ್ತಿದ್ದ ಯೂತ್ ಕಾಂಗ್ರೆಸ್ ಅಧ್ಯಕ್ಷರ ಕಾರು ಜಪ್ತಿ ಮಾಡಲಾಗಿದೆ.

ಆರ್​.ಆರ್​ ನಗರದಲ್ಲಿ ಬಿಜೆಪಿಗಿಂತ ವೇಗವಾಗಿ ಕಾಂಗ್ರೆಸ್​​ನಿಂದ ಹಣ ಹಂಚಿಕೆ: ಹೆಚ್​​ಡಿಕೆ ಆರೋಪ

ಆರ್ ಆರ್ ನಗರ ಚುನಾವಣೆ ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯವಾಗಲಿದ್ದು, ಇದರ ಮಧ್ಯೆ ಮತದಾರರಿಗೆ ಹಣ ಆಮಿಷ ಕೆಲಸವಾಗುತ್ತಿದೆ. ಫ್ಲೈಯಿಂಗ್ ಸ್ಕ್ವ್ಯಾಡ್​ನಿಂದ ಹಣ ಪತ್ತೆ ಹಚ್ಚಲಾಗಿದೆ. ಜಾಲಹಳ್ಳಿಯ ಹೆಚ್​ಎಂಟಿ ಬಳಿಯ ಆಂಜನೇಯ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಆರ್​​ಆರ್ ನಗರ ಯೂತ್ ಕಾಂಗ್ರೆಸ್​ನ ಶಿವಕುಮಾರ್ ಕಾರಿನಲ್ಲಿ 2 ಲಕ್ಷ ರೂ. ಪತ್ತೆಯಾಗಿದ್ದು, ಸದ್ಯ ಕಾರನ್ನು‌ ವಶಕ್ಕೆ ಪಡೆದುಕೊಳ್ಳಲಾಗಿದೆ.

ಕಾರಿನಲ್ಲಿ ಹಣ ಜೊತೆ ಕಾಂಗ್ರೆಸ್ ಶಾಲುಗಳಿದ್ದವು ಎಂದು ತಿಳಿದು ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು‌ ದಾಖಲಾಗಿದೆ.

ABOUT THE AUTHOR

...view details