ಕರ್ನಾಟಕ

karnataka

ETV Bharat / state

ಮದ್ಯ ಸೇವಿಸಿ ಇಬ್ಬರ ನಡುವೆ ಗಲಾಟೆ: ಹೊಡೆದಾಟ ಕೊಲೆಯಲ್ಲಿ ಅಂತ್ಯ

ಬಾರ್ ಒಪನ್‌ ಆಗಿ ಕೆಲವೇ ಗಂಟೆಗಳಲ್ಲಿ ‌ಮದ್ಯ ಸೇವಿಸಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ರೌಡಿಶೀಟರ್ ಕರಣ್ ಸಿಂಗ್ ಕೊಲೆಯಾದ ವ್ಯಕ್ತಿ.

By

Published : May 4, 2020, 9:49 PM IST

Rowdisheater murder in Bangalore
ಮದ್ಯ ಸೇವಿಸಿ ಇಬ್ಬರ ನಡುವೆ ಗಲಾಟೆ: ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿಡೆದಹಳ್ಳಿ ಬಳಿ ಮದ್ಯ ಸೇವಿಸಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ರೌಡಿಶೀಟರ್ ಕರಣ್ ಸಿಂಗ್ ಕೊಲೆಯಾದ ವ್ಯಕ್ತಿ. ಮದ್ಯ ಖರೀದಿಸಿದ ಹುಮ್ಮಸ್ಸಿನಲ್ಲಿ ಇಂದು ಸ್ನೇಹಿತ‌ ಪ್ರಭು ಎಂಬಾತನ ಜೊತೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿಗೆ ಮಾತು ಬೆಳೆದಿದೆ. ಎಣ್ಣೆ ಏಟಲ್ಲಿ ಗಲಾಟೆ ತಾರಕಕ್ಕೇರಿದೆ.‌ ಈ ವೇಳೆ ಪ್ರಭು, ಕರಣ್ ಸಿಂಗ್ ಎದೆಗೆ ಚುಚ್ಚಿ ಕೊಲೆ‌ ಮಾಡಿದ್ದಾನೆ‌‌ ಎನ್ನಲಾಗಿದೆ.

ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details