ಕರ್ನಾಟಕ

karnataka

ಗುರಾಯಿಸಿದ ಎಂದು ಅಟ್ಟಾಡಿಸಿ ಹೊಡೆದ ಪುಡಿರೌಡಿಗಳು! ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಪುಡಿರೌಡಿಗಳ ಹಾವಳಿ ಹೆಚ್ಚಾಗಿದ್ದು, ಸದ್ಯ ರೌಡಿಗಳ ಅಟ್ಟಹಾಸದ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

By

Published : Nov 15, 2019, 1:19 PM IST

Published : Nov 15, 2019, 1:19 PM IST

ರೌಡಿಗಳ ಅಟ್ಟಹಾಸ

ಬೆಂಗಳೂರು: ವ್ಯಕ್ತಿಯೊಬ್ಬ ತಮ್ಮನ್ನು ಗುರಾಯಿಸಿದ ಎಂಬ ಕಾರಣಕ್ಕೆ ಆತನನ್ನು ಅಟ್ಟಾಡಿಸಿ ಹೊಡೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗುರಾಯಿಸಿದ ಎಂದು ಅಟ್ಟಾಡಿಸಿ ಹೊಡೆದ ಪುಡಿರೌಡಿಗಳು, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಘಟನೆಯ ಹಿನ್ನೆಲೆ:

ಜೋಗಯ್ಯ, ಪುನೀತ್, ವಿಕ್ಕಿ ಎಂಬ ಮೂವರು ಹಾಗೂ ಇವರೊಂದಿಗೆ ಇನ್ನೂ ಕೆಲವರು ಸೇರಿಕೊಂಡು ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಾಘವನಗರದ ಬಾರೊಂದರಲ್ಲಿ ಸೇವಿಸುತ್ತಿದ್ದರು. ಈ ವೇಳೆ, ಆಟೋ ಚಾಲಕ ಸತೀಶ್ ಎಂಬವರು ಕೂಡ ಬಾರ್​ಗೆ ಬಂದಿದ್ದಾರೆ. ಈ ಸಂದರ್ಭ ಸತೀಶ್​ ತಮ್ಮನ್ನು ಗುರಾಯಿಸಿದ ಎಂದು ಆರೋಪಿಗಳು ಆತನನ್ನು ಅಟ್ಟಾಡಿಸಿಕೊಂಡು ಮಚ್ಚುಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ತಕ್ಷಣ ಸ್ಥಳೀಯರು ‌ಹಲ್ಲೆಗೊಳಗಾದ ಸತೀಶ್‌ನನ್ನು ಗಿರಿನಗರದ ಪಲ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಸತೀಶ್​ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರು ಗಾಯಾಳು ಸತೀಶ್ ಹೇಳಿಕೆ ಹಾಗೂ ಸಿಸಿಟಿವಿ ದೃಶ್ಯ ಆಧರಿಸಿ ನಾಲ್ವರನ್ನು ಬಂಧಿಸಿದ್ದು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details