ಕರ್ನಾಟಕ

karnataka

ETV Bharat / state

ಗ್ರಾ.ಪಂಚಾಯತ್ ಚುನಾವಣೆ: ನೆಲಮಂಗಲದಲ್ಲಿ ರೌಡಿ ಶೀಟರ್​​ಗಳ ಪರೇಡ್ - rowdi sheeters parad

ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ ಮತ್ತು ಹಬ್ಬ ಹರಿದಿನಗಳಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಮುಂಜಾಗ್ರತಾ ಕ್ರಮವಾಗಿ ನೆಲಮಂಗಲ ನಗರದ ಕ್ರೀಡಾಂಗಣದಲ್ಲಿ ರೌಡಿ ಶೀಟರ್​ಗಳ ಪರೇಡ್ ಮಾಡಲಾಯಿತು.

Nalamangala
ರೌಡಿ ಶೀಟರ್​​ಗಳ ಪರೇಡ್

By

Published : Aug 8, 2020, 5:33 PM IST

Updated : Aug 8, 2020, 5:42 PM IST

ನೆಲಮಂಗಲ: ನಗರದಲ್ಲಿ ಇತ್ತೀಚೆಗೆ ನಡೆದ ಯುವಕನ ಕೊಲೆ ಸೇರಿದಂತೆ ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರೌಡಿಶೀಟರ್ ಪರೇಡ್ ನಡೆಸಿದ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ.ಡಿ ಚನ್ನಣ್ಣನವರ್ ರೌಡಿ ಶೀಟರ್​​ಗಳಿಗೆ ಗುಂಡಾ ಕಾಯ್ದೆ ಹಾಕುವ ಎಚ್ಚರಿಕೆ ನೀಡಿದರು.

ನೆಲಮಂಗಲ ನಗರದ ಕ್ರೀಡಾಂಗಣದಲ್ಲಿ ರೌಡಿ ಶೀಟರ್​ಗಳ ಪರೇಡ್ ನಡೆಸಲಾಯಿತು.

ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ ಮತ್ತು ಹಬ್ಬ ಹರಿದಿಗಳಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಮುಂಜಾಗ್ರತಾ ಕ್ರಮವಾಗಿ ನೆಲಮಂಗಲ ನಗರದ ಕ್ರೀಡಾಂಗಣದಲ್ಲಿ ರೌಡಿಗಳ ಪರೇಡ್ ಮಾಡಲಾಯಿತು. ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿಯಾದ ರವಿ.ಡಿ ಚನ್ನಣ್ಣನವರ್ ನೇತೃತ್ವದಲ್ಲಿ ರೌಡಿ ಪೆರೇಡ್ ಮಾಡಲಾಗಿದ್ದು, ಅಪರಾಧ ಕೃತ್ಯಗಳಲ್ಲಿ ಸಕ್ರಿಯವಾಗಿದ್ಧ 80 ಕ್ಕೂ ಹೆಚ್ಚು ರೌಡಿಶೀಟರ್​​ಗಳ ಪೆರೇಡ್ ಮಾಡಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು.

ಇತ್ತೀಚೆಗೆ ಸಕ್ರಿಯವಾಗಿರುವ ಆರೋಪಿಗಳು ಐದು ಪ್ರಕರಣಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಮೇಲೆ ಗುಂಡಾ ಕಾಯ್ದೆ, ಗಡಿ ಪಾರು ಮಾಡಲಾಗುವುದು, ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ನೆಲಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ 250 ಕ್ಕೂ ಹೆಚ್ಚು ರೌಡಿ ಶೀಟರ್​​ಗಳಿದ್ದು, ಇವರಲ್ಲಿ ವಯಸ್ಸಾದವರು ಇದ್ದು ಅಪರಾಧ ಕೃತ್ಯಗಳಲ್ಲಿ ಸಕ್ರಿಯವಾಗಿ ಇರದ ಒಂದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದವರನ್ನು ರೌಡಿಶೀಟರ್ ಪಟ್ಟಿಯಿಂದ ತೆಗೆದು ಹಾಕುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಡಿವೈಎಸ್ಪಿ ಮೋಹನ್ ಕುಮಾರ್, ಸಿಪಿಐ ಶಿವಣ್ಣ, ಸತ್ಯನಾರಾಯಣ ಭಾಗಿಯಾಗಿದ್ದರು.

Last Updated : Aug 8, 2020, 5:42 PM IST

ABOUT THE AUTHOR

...view details