ಕರ್ನಾಟಕ

karnataka

ETV Bharat / state

ಸೋಮವಾರ ರಾಜಕೀಯ ಭವಿಷ್ಯ ನಿರ್ಧರಿಸಲಿದ್ದಾರಂತೆ ರೋಷನ್ ಬೇಗ್.. - ಬೆಂಗಳೂರಲ್ಲಿ ಬೇಗ್ ಮೀಟಿಂಗ್

ಶಿವಾಜಿನಗರ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಮಾಜಿ ಸಚಿವ ಆರ್‌. ರೋಷನ್ ಬೇಗ್ ಇಂದು ತಮ್ಮ ನಿವಾಸದ ಸಮೀಪ ಇರುವ ಶಮ್ಸ್ ಕನ್ವೆನ್ಷನ್​ಸೆಂಟರ್​ನಲ್ಲಿ ಆಪ್ತರ ಜೊತೆ ಸಭೆ ನಡೆಸಿದರು.

ರೋಷನ್ ಬೇಗ್ ಸಭೆ

By

Published : Nov 16, 2019, 10:32 PM IST

Updated : Nov 16, 2019, 10:58 PM IST

ಬೆಂಗಳೂರು: ಶಿವಾಜಿನಗರ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಮಾಜಿ ಸಚಿವ ಆರ್‌. ರೋಷನ್ ಬೇಗ್ ಇಂದು ತಮ್ಮ ನಿವಾಸದ ಸಮೀಪ ಇರುವ ಶಮ್ಸ್ ಕನ್ವೆನ್ಷನ್​ ಸೆಂಟರ್​ನಲ್ಲಿ ಆಪ್ತರ ಜೊತೆ ಸಭೆ ನಡೆಸಿದರು.

ಆಪ್ತರೊಂದಿಗೆ ಆರ್‌.ರೋಷನ್ ಬೇಗ್ ಸಭೆ..

ಉಪಚುಣಾವಣೆಗೆ ಸ್ಪರ್ಧೆ ಮಾಡಬೇಕಾ ಅಥವಾ ಬೇಡ್ವಾ ಅನ್ನೋದರ ಬಗ್ಗೆ ತಮ್ಮ ಆಪ್ತರ ಜೊತೆ ಚರ್ಚೆ ನಡೆಸಿದ್ದಾರೆ. ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆ ಅಥವಾ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಬೇಕೇ ಎಂಬ ಕುರಿತು ಅವರು ಗಂಭೀರ ಚರ್ಚೆ ನಡೆಸಿದ್ದಾರೆ.

ಸಭೆ ಬಳಿಕ ಮಾತನಾಡಿದ ರೋಷನ್‌ ಬೇಗ್, ಉಪಚುಣಾವಣೆ ಬಗ್ಗೆ ಇಂದು ನನ್ನ ಆಪ್ತರ ಜೊತೆ ಚರ್ಚೆ ಮಾಡಿದ್ದೇನೆ. ಕೆಲ ಸಲಹೆಗಳನ್ನು ಅವ್ರು ನೀಡಿದ್ದಾರೆ. ಉಪಚುಣಾವಣೆ ಪಕ್ಷೇತರವಾಗಿ ನಿಲ್ಲಬೇಕಾ ಅಥವಾ ಬೇಡ್ವಾ ಅನ್ನೋದರ ಬಗ್ಗೆ ಸೋಮವಾರ ನನ್ನ ನಿರ್ಧಾರ ಹೇಳ್ತೀನಿ ಎಂದರು.

ಇನ್ನು, ಜೆಡಿಎಸ್​ಗೆ ರೋಷನ್‌ ಬೇಗ್ ಬಂದ್ರೆ ಸ್ವಾಗತ ಎಂಬ ಹೆಚ್‌ ಡಿ ರೇವಣ್ಣ ಹೇಳಿಕೆಯ ವಿಚಾರಕ್ಕೆ ಬೇಗ್ ಪ್ರತಿಕ್ರಿಯೆ ನೀಡಿ, ನಾನು ರೇವಣ್ಣ ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದರು.

Last Updated : Nov 16, 2019, 10:58 PM IST

ABOUT THE AUTHOR

...view details